ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಾದ ನಟರಾಜು ಜಿ.ಎಲ್. ಇವರ ಸಾರಥ್ಯದಲ್ಲಿ ಲೋಕಾರ್ಪಣೆಗೊಂಡ “ನಮ್ಮ ತುಮಕೂರು” ಮಾಧ್ಯಮವು ಒಂದು ವರ್ಷ ಪೂರೈಸಿ ವರ್ಷಾಚರಣೆಯ ಸಂಭ್ರಮದಲ್ಲಿದೆ.
ಹೆಸರಲ್ಲೇ ನಮ್ಮ ತನವನ್ನು ಬಿಂಬಿಸುವ ನಮ್ಮ ತುಮಕೂರು ಮಾಧ್ಯಮವು ವಿಶ್ವಾಸಾರ್ಹ ಸುದ್ದಿಗಳು, ಪ್ರಚಲಿತ ವಿದ್ಯಮಾನಗಳು. ನಾಡಿನ ಹಾಗೂ ಹೋಗುಗಳು, ರಾಜ್ಯ, ದೇಶ, ಅಂತರಾಷ್ಟ್ರೀಯ ಸುದ್ದಿಗಳು, ಕ್ರೈಮ್, ಆರೋಗ್ಯ, ವೈರಲ್ ಸುದ್ದಿಗಳನ್ನು ತನ್ನದೇ ಆದ ವೆಬ್’ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ ಮುಖಾಂತರ ಜನರಿಗೆ ತಲುಪಿಸಿ ಅನೇಕ ಓದುಗರನ್ನು ವೀಕ್ಷಕರನ್ನು ತನ್ನತ್ತ ಸೆಳೆದಿದೆ. ಎಷ್ಟೋ ಜನ ಮನದ ಧ್ವನಿಯಾಗಿ ಸಾರ್ವಜನಿಕ ಸಮಸ್ಯೆಗಳಿಗೆ ಬಂಡೆಯಂತೆ ಗಟ್ಟಿಯಾಗಿ ನಿಂತು ಉದಾಹರಣೆಗೆ ರಸ್ತೆ ಬೀದಿದೀಪ, ನೀರಿನ ಸಮಸ್ಯೆ ಎಷ್ಟೋ ಸಾರ್ವಜನಿಕ ಸಮಸ್ಯೆಗಳಿಗೆ ನಮ್ಮ ತುಮಕೂರು ಪ್ರಸಾರ ಮಾಡಿದ ಸುದ್ದಿಗಳಿಂದ ಎಚ್ಚೆತ್ತು ಸರ್ಕಾರ ಹಾಗೂ ಅಧಿಕಾರಿಗಳನ್ನು ಎಚ್ಚರಿಸಿದ ಫಲಶ್ರುತಿಗಳನ್ನು ಕಂಡ ಉದಾಹರಣೆಗಳನ್ನು ಗಮನಿಸಬಹುದಾಗಿದೆ.
ಅನೇಕ ಸುದ್ಧಿವಾಹಿನಿಗಳ ನಡುವೆ ತನ್ನದೇ ಆದ ಘನತೆ ಗಾಂಭೀರ್ಯ ಬದ್ಧತೆ ಸತ್ಯಾನ್ವೇಷಣೆಯಿಂದ ನೊಂದವರ, ದಲಿತರ ಬಡವರ ವಸತಿ ಹೀನ ಜನರ, ರೈತರ ಪರವಾಗಿ ನ್ಯಾಯದಿಂದ ಹೋರಾಡುತ್ತಾ, ಸಮಾಜಕ್ಕೆ ಒಂದು ಮಾರ್ಗದರ್ಶನವಾಗಿರುವ ನಮ್ಮ ತುಮಕೂರು ಮಾಧ್ಯಮಕ್ಕೆ, ಸಂಪಾದಕರಿಗೆ, ವರದಿಗಾರರಿಗೆ, ತಾಂತ್ರಿಕ ವರ್ಗದವರಿಗೆ, ಎಲ್ಲಾ ವೀಕ್ಷಕರಿಗೆ ಹಾಗೂ ಓದುಗ ಮಿತ್ರರಿಗೆ ಶುಭವನ್ನು ಕೋರುತ್ತಾ, ಮುಂಬರುವ ದಿನಗಳಲ್ಲಿ ಎತ್ತೆರತ್ತೆರಕ್ಕೆ ಬೆಳೆದು ಬಹುಕಾಲದ ವರೆಗೂ ಜನಮನದಲ್ಲಿ ಉಳಿಯಲಿ ನಮ್ಮ ತುಮಕೂರು ಮಾಧ್ಯಮವು ಹೀಗೆ ಶತಮಾನೋತ್ಸವವನ್ನು ಆಚರಿಸಲಿ.
-ಶೋಭ ಆರ್., ತುಮಕೂರು