ಮಧುಗಿರಿ: ಶಿವಸೇನೆ ಪುಂಡರ ಅಟ್ಟಹಾಸವನ್ನು ಖಂಡಿಸುತ್ತಾ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಬಸ್ ಗಳಿಗೆ ಮಸಿ ಬಳಿದ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ ಮಧುಗಿರಿ ತಾಲೂಕು ಘಟಕದ ವತಿಯಿಂದ.ತಾಲೂಕು ಅಧ್ಯಕ್ಷರಾದ ಶ್ರೀ ಪಾಂಡುರಂಗಯ್ಯನವರ ನೇತೃತ್ವದಲ್ಲಿ ಖಂಡಿಸಲಾಯಿತು.
ಎಂಇ ಎಸ್ ಸಂಘಟನೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು, ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಮಧ್ಯವಸ್ತಿಕೆ ವಹಿಸಿ ಕೂಡಲೇ ಮಹಾರಾಷ್ಟ್ರ ಬೆಳಗಾವಿ ಗಡಿ ಭಾಗದ ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಬಗೆಹರಿಸಿ ಕೊಡಬೇಕೆಂದು ಉಪಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಗಡಿ ಭಾಗದಲ್ಲಿ ಮೊನ್ನೆ ಮಹಾರಾಷ್ಟ್ರ ರಾಜ್ಯದ ಶಿವಸೇನೆ ಪುಂಡರು, ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ಬಸ್ ಗಳಿಗೆ ಮಸಿ ಬಳಿದು, ಕಲ್ಲುತೂರಾಟ ನಡೆಸಿ ಗಾಜುಗಳನ್ನು ಹೊಡೆದಿರುವಂತ ಘಟನೆ ಖಂಡನೀಯ, ಶಿವಸೇನೆ ಪುಂಡರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿ ಕೂಡಲೇ ಬಂಧಿಸಬೇಕು ಉಪ ವಿಭಾಗಾಧಿಕಾರಿಗಳಾದಂತ ರಿಷಿ ಆನಂದ್ ಅವರಿಗೆ ಮನವಿ ನೀಡಲಾಯಿತು.
ಕ ರ ವೇ ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷರಾದ ಅಬಿದ್ ಮಾತನಾಡಿ, ಎಂ ಇ ಎಸ್ ಸಂಘಟನೆ ಪುಂಡರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಗಳಿಗೆ ಮಸಿ ಬಳಿದು ಬಸ್ ಗಳ ಗಾಜುಗಳನ್ನು ಹೊಡೆದು ನಮ್ಮ ಕರ್ನಾಟಕ ರಾಜ್ಯದ ಆಸ್ತಿಗೆ ನಷ್ಟ ಮಾಡಿದ್ದಾರೆ. ಈ ಕೃತ್ಯವನ್ನು ನಾವು ಯಾವುದೇ ಕಾರಣಕ್ಕೂ ಸಹಿಸಲ್ಲ, ಬೆಳಗಾವಿ ನಮ್ಮ ಕರ್ನಾಟಕ ರಾಜ್ಯದ ಸ್ವತ್ತು ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರಲು ಬಿಡೋದಿಲ್ಲ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ರಾಜ್ಯದ ಸ್ವತ್ತನ್ನು ಉಳಿಸಿಕೊಳ್ಳಬೇಕು ಈ ವಿಷಯದಲ್ಲಿ ರಾಜ್ಯ ಸರ್ಕಾರ ವಿಫಲವಾದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಅಲ್ಪಸಂಖ್ಯಾತರ ತಾಲೂಕು ಗೌರವ ಅಧ್ಯಕ್ಷರಾದ ಸೈಯದ್ ಎಂ.ಪಿ., ಕಾರ್ಯದರ್ಶಿ ಸಾಧಿಕ್, ಖಿಜರ್, ನಗರ ಅಧ್ಯಕ್ಷರಾದ ಮುಬಾರಕ್, ತಾಲೂಕು ಟೌನ್ ಘಟಕದ ಅಧ್ಯಕ್ಷರಾದ ಶಂಕರ್. ಪಿ ,ತಾಲೂಕು ಪ್ರಧಾನ ಕಾರ್ಯದರ್ಶಿ, ಮಧು ಎಂ. ಆರ್, ಆಟೋ ಚಾಲಕ ಸಂಘದ ಅಧ್ಯಕ್ಷ ನಟರಾಜ್, ದೊಡ್ಡೇರಿ ಹೋಬಳಿ ಅಧ್ಯಕ್ಷ ವಿನಯ್, ತಾಲೂಕು ಉಪಾಧ್ಯಕ್ಷರಾದ ವಿಶ್ವನಾಥ್, ನಗರ ಘಟಕದ ಉಪಾಧ್ಯಕ್ಷರು ,ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರುಗಳು, ಹಾಗೂ ಸಂಘಟನೆಯ ನಿರ್ದೇಶಕರು ಗಳು ಹಾಗೂ ಪದಾಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದರು
ವರದಿ: ಅಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz