ಹೆಚ್.ಡಿ.ಕೋಟೆ: ಬೆಂಗಳೂರು ಜೈನ್ ವಿಶ್ವ ವಿದ್ಯಾನಿಲಯ ಬ್ಯಾನ್ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಹೆಚ್.ಡಿ.ಕೋಟೆ ಪಟ್ಟಣದ ಮಿನಿ ವಿಧಾನ ಸೌದದ ಎದುರು ತಾಲ್ಲೂಕು ಪ್ರಗತಿ ಪರ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಕುರಿತು ಮಾತನಾಡಿ ರಾಜ್ಯ ಸಂಶೋದಕರ ಸಂಘದ ಅದ್ಯಕ್ಷ ಮರಿದೇವಯ್ಯ , ಜೈನ ವಿಶ್ವವಿದ್ಯಾನಿಲಯ ಅಂಬೇಡ್ಕರ್ ರವರಿಗೆ ಅಪಮಾನ ಮಾಡುವ ಸಲುವಾಗಿಯೇ ಕಾರ್ಯಕ್ರಮ ರೂಪಿಸಿ ಅಂಬೇಡ್ಕರ್ ರವರಿಗೆ ಅಪಮಾನ ಮಾಡುವ ಪಿತೂರಿ ನಡೆಸಿದ್ದಾರೆ. ಸಮಾಜಘಾತುಕ ಕೆಲಸಗಳನ್ನು ಮಾಡುವ ಜೈನ ವಿಶ್ವವಿದ್ಯಾಲಯನ್ನು ಈ ಕೂಡಲೇ ರದ್ದುಗೊಳಿಸಿ ತಪ್ಪಿತಸ್ಥರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಜೀವಿಕ ಬಸವರಾಜು ಮಾತನಾಡಿ, ಇತ್ತೀಚೆಗೆ ಬೆಂಗಳೂರು ಜೈನ ವಿಶ್ವವಿದ್ಯಾನಿಲಯದಲ್ಲಿ ಕಿರುನಾಟಕ ಪ್ರದರ್ಶನ ಮಾಡಿ, ಅಲ್ಲಿನ ಆಯೋಜಕರು ಮತ್ತು ಸಮಿತಿಯವರು ಅಂಬೇಡ್ಕರ್ ರವರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ತಪ್ಪಿತಸ್ಥರನ್ನು ಗಡಿಪಾರು ಮಾಡಿ ಜೈನ್ ವಿಶ್ವವಿದ್ಯಾಲಯದ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಆದಿಕರ್ನಾಟ ಮಹಾಸಭಾ ಅದ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ಮಾತನಾಡಿ, ವಿಶ್ವ ವಿದ್ಯಾನಿಲಯವನ್ನು ಮೊದಲು ರದ್ದುಗೊಳಿಸಬೇಕು. ಅಂಬೇಡ್ಕರ್ ರವರಿಗೆ ಅಪಮಾನ ಇಡೀ ಮಾನವನ ಕುಲವೇ ನಾಚುವಂತೆ ಮಾಡಿದೆ. ಅಂತಹ ವಿಶ್ವ ವಿದ್ಯಾನಿಲಯ ನಮಗೆ ಬೇಡ, ಒಂದುವೇಳೆ ಸರ್ಕಾರ ಇದನ್ನು ರದ್ದುಗೊಳಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸ ಬೇಕಾಗುತ್ತದೆ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಪುಟ್ಟಮಾದು, ಆನಗಟ್ಟಿದೇವರಾಜು, ಚಾ.ಶಿವಕುಮಾರ್, ಪ್ರೇಮಸಾಗರ್, ಮರಿದೇವಯ್ಯ, ಹೈರಿಗೆ ಶಿವರಾಜು, ಚೌಡಳ್ಳಿ ಜವರಯ್ಯ ಹೆಚ್.ಸಿ ನರಸಿಂಹಮೂರ್ತಿ, ಸದಾಶಿವ, ಚೆನ್ನ, ಮುದ್ದುಮಲ್ಲಯ್ಯ, ಸೋಗಳ್ಳಿ ಶಿವಣ್ಣ ಹಾಗೂ ನೂರಾರು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy