ಸರಗೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶೋಕ ಮಡುಗಟ್ಟಿದೆ.
ಮಾಜಿ ಸಂಸದ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಅವರು ಕಾಯಕಯೋಗಿ, ಹೃದಯವಂತ ರಾಜಕಾರಣಿಯಾಗಿದ್ದರು. ಅವರ ಅಕಾಲಿಕ ನಿಧನ ವೈಯಕ್ತಿಕವಾಗಿ ಹಾಗೂ ಅಭಿಮಾನಿಗಳಿಗೆ ತುಂಬಲಾರದ ನಷ್ಟ ಎಂದು ಯಜಮಾನರು ಶಿವಮೂರ್ತಿ ಸಂತಾಪ ವ್ಯಕ್ತಪಡಿಸಿದರು.
ಹಾದನೂರು ಗ್ರಾಮದಲ್ಲಿ ಶನಿವಾರ ರಂದು ಆರ್. ಧ್ರುವನಾರಾಯಣ್ ರವರ ಪೋಟೋ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಅವರು, ಅವರ ಸರಳತೆ, ಸಂಘಟನಾ ಚಾತುರ್ಯ ಹಾಗೂ ಪಕ್ಷ ನಿಷ್ಠೆ ಬಗ್ಗೆ ಅರಿತಿದ್ದೆ ಎಂದರು.
ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ, ಸಾಕಷ್ಟು ಸುಧಾರಣೆಗೆ ಮುಂದಾಗಿದ್ದ ಅವರು ಹೆಚ್ಚು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸಾಕಷ್ಟು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಸದಾ ಹಸನ್ಮುಖಿಯಾಗಿರುತ್ತಿದ್ದ ಅವರಿಗೆ ಕ್ಯಾಬಿನೆಟ್ನಲ್ಲಿ ವಿಶೇಷ ಸ್ಥಾನಮಾನವಿತ್ತು. ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಬಗ್ಗೆ ಅಪಾರ ಅಭಿಮಾನ. ಅವರೊಬ್ಬ ಅಜಾತಶತ್ರು, ಉತ್ತಮ ಆಡಳಿತಗಾರ, ಸ್ನೇಹಜೀವಿ, ಈವರೆಗೆ ಯಾರಿಗೂ ತೊಂದರೆ ಕೊಟ್ಟವರಲ್ಲ ಎಂದರು.
ಮಾಜಿ ಯಜಮಾನರು ಪುಟ್ಟಸ್ವಾಮಿ ಮಾತನಾಡಿ, ಅವರೊಬ್ಬ ಸಜ್ಜನ, ಸಮಾಧಾನದ ವ್ಯಕ್ತಿ. ಸಮಾಜ ಮತ್ತು ಜನಸಾಮಾನ್ಯರ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದವರು. ಅವರನ್ನು ಈ ಜಿಲ್ಲೆಯಿಂದ ಬಾರದ ಲೋಕಕ್ಕೆ ಬೀಳ್ಕೊಡುತ್ತಿರುವುದು ನೋವು ತಂದಿದೆ ಎಂದರು. ಅವರನ್ನು ಜೀವಂತವಾಗಿ ನೋಡಲಾಗಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರಲ್ಲದೇ ನಮ್ಮ ಗ್ರಾಮಕ್ಕೆ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಜಮಾನರು ಸತೀಶ್, ಸಿದ್ದರಾಜು, ಗ್ರಾಪಂ ಸದಸ್ಯರು ರಾಜೇಶ್, ಶಿವರಾಜು ಅರಸು,ಕೆಂಪಸಿದ್ದ, ಶಿವಲಿಂಗಯ್ಯ, ಚಿದಾನಂದ, ಸಿದ್ದರಾಜು, ಮಹದೇವಸ್ವಾಮಿ, ರಾಜು,ಉಮೇಶ್, ಜೋಗಪ್ಪ, ಶಶಿ, ಸ್ವಾಮಿ, ಚಿಕ್ಕಣ್ಣ,ಶಿವು ರವಿಕುಮಾರ್, ಸಣ್ಣಸ್ವಾಮಿ, ಪುಟ್ಟರಾಜು, ನಾಗರಾಜು, ನಂಜುಂಡಿ, ಚಿಕ್ಕಣ್ಣ, ಎಲ್ಲಾ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA