ವರದಿ: ಮಂಜುಸ್ವಾಮಿ ಎಂ ಎನ್, ಕೊರಟಗೆರೆ
ಕೊರಟಗೆರೆ : 2ನೇ ಅವಧಿಗೆ ಬಾರಿ ಕುತೂಹಲ ಕೆರಳಿಸಿದ್ದ ವಡ್ಡಗೆರೆ ಗ್ರಾ.ಪಂಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿ ಕಾಂಗ್ರೆಸ್ ತೆಕ್ಕೆಗೆ.. ನೂತನ ಅಧ್ಯಕ್ಷರಾಗಿ ರಕ್ಷಿತಾ ವೀರಾಕ್ಯಾತಯ್ಯ ಹಾಗೂ ಉಪಾಧ್ಯಕ್ಷರಾಗಿ ನರೇಂದ್ರಬಾಬು ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ನರೇಂದ್ರಬಾಬು ಮಾತನಾಡಿ, ಗ್ರಾಮದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ನಮ್ಮ ಗ್ರಾ.ಪಂ ನಿಂದ ಮಾಡಬಹುದಾದ ಅಭಿವೃದ್ಧಿಗೆ ಕೆಲಸಗಳಿಗೆ ಮೊದಲ ಆದ್ಯತೆ ನೀಡಿ ವಡ್ಡಗೆರೆ ಪಂಚಾಯಿತಿಯನ್ನು ಮಾದರಿಯನ್ನಾಗಿ ಮಾಡುವುದೇ ನನ್ನ ಮುಖ್ಯ ಗುರಿಯಾಗಿದೆ. ನಮ್ಮ ಸದಸ್ಯರೆಲ್ಲರೂ ಒಟ್ಟುಗೂಡಿ ಗ್ರಾಮಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಜನತೆಗೆ ಒದಗಿಸುವಲ್ಲಿ ನಿಷ್ಠೆಯಿಂದ ಶ್ರಮವಹಿಸುತ್ತೇವೆ ಎಂದರು…
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ನಾಸಿಕಡೋಲ್ ನೊಂದಿಗೆ ಅದ್ದೂರಿಯಾಗಿ ಮೆರವಣಿಗೆಯ ಮೂಲಕ ಸುಪ್ರಸಿದ್ಧ ಶ್ರೀ ವೀರನಾಗಮ್ಮ ದೇವಿ ಪೂಜೆ ಸಲ್ಲಿಸಿದ ನಂತರ ಸಿಹಿ ಹಂಚಿ ಪಾಟಕಿ ಸಿಡಿಸಿ ಅಭಿನಂದಿಸಿದರು.
ನಮ್ಮ ಪಂಚಾಯಿತಿ ಎಲ್ಲಾ ಸದಸ್ಯ ಸಹಕಾರದಿಂದ ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿದ್ದಾರೆ. ಅವರಿಗೆ ನನ್ನ ಕೃತಜ್ಞತೆ ತಿಳಿಸುತ್ತೇನೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿ ಗ್ರಾಮಗಳ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕವಾಗಿ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ.
— ರಕ್ಷಿತಾ ವೀರಾಕ್ಯಾತಯ್ಯ ನೂತನ ಅಧ್ಯಕ್ಷೆ. ವಡ್ಡಗೆರೆ ಗ್ರಾ.ಪಂ
8 ಗ್ರಾ.ಪಂಯ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಆಯ್ಕೆಯಾದವರು:
ಅಧ್ಯಕ್ಷೆ: ರಕ್ಷಿತಾ ವೀರಕ್ಯಾತಯ್ಯ.
ಉಪಾಧ್ಯಕ್ಷ: ನರೇಂದ್ರಬಾಬು
ಅಕ್ಕಿರಾಂಪುರ ಗ್ರಾ.ಪಂ
ಅವಿರೋಧ ಆಯ್ಕೆ…
ಅಧ್ಯಕ್ಷೆ: ಅಂಜೀನಮ್ಮ.ಸಿ,
ಉಪಾಧ್ಯಕ್ಷೆ: ಪಿ. ಗಂಗಮ್ಮ.
ಕ್ಯಾಮೇನಹಳ್ಳಿ ಗ್ರಾ.ಪಂ
ಅಧ್ಯಕ್ಷ: ಕೆ.ಡಿ ನಾಗರಾಜು,
ಉಪಾಧ್ಯಕ್ಷ: ನಾಗಮಣಿ ರಾಘವೇಂದ್ರಪ್ಪ.
ಎಲೆರಾಂಪುರ ಗ್ರಾ.ಪಂ
ಅಧ್ಯಕ್ಷ: ಚಂದ್ರಶೇಖರ ಹೆಚ್.ಎಸ್,
ಉಪಾಧ್ಯಕ್ಷೆ: ಗಂಗಾಭಿಕೆ
ಜೆಟ್ಟಿಅಗ್ರಹಾರ ಗ್ರಾ.ಪಂ
ಅಧ್ಯಕ್ಷೆ: ಕೆ.ಸಿ ಗೀತಾ,
ಉಪಾಧ್ಯಕ್ಷೆ: ಸರಸ್ವತಮ್ಮ.
ಕುರಂಕೋಟೆ ಗ್ರಾ.ಪಂ
ಅಧ್ಯಕ್ಷೆ: ತಿಮ್ಮಕ್ಕ,
ಉಪಾಧ್ಯಕ್ಷ: ದೊಡ್ಡಯ್ಯ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA