ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸವಾಗಿ ಇಂದಿಗೆ 31 ವರ್ಷಗಳು. ಡಿಸೆಂಬರ್ 6, 1992 ರಂದು ಒಂದೂವರೆ ಲಕ್ಷ ಕರಸೇವಕರು ಬಾಬರಿ ಮಸೀದಿಯನ್ನು ರಾಮಜನ್ಮಭೂಮಿಯ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡು ಮಸೀದಿಯನ್ನು ಕೆಡವಿದರು.
ಇದರ ಪರಿಣಾಮವಾಗಿ ದೇಶಾದ್ಯಂತ ಕೋಮು ಘರ್ಷಣೆಗಳು ನಡೆದವು. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಹೊಡೆದಾಡಿಕೊಂಡರು.
ಈ ಗಲಭೆಗಳಲ್ಲಿ ಸುಮಾರು 2,000 ಜನರು ಪ್ರಾಣ ಕಳೆದುಕೊಂಡರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಹಿಂದೂಗಳ ಮೇಲೆ ಪ್ರತೀಕಾರದ ದಾಳಿಗಳು ನಡೆದಿದ್ದವು.


