ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಶನಿವಾರ ಮೊದಲ ಬಂಧನ ಮಾಡಿದ್ದಾರೆ. ಆರೋಪಿಯನ್ನು 23 ವರ್ಷದ ವಿದ್ಯಾರ್ಥಿ ರಣವೀರ್ ಎಂದು ಗುರುತಿಸಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ರಣವೀರ್ ಶೂಟರ್ ಗಳಾದ ನಿತಿನ್ ಮತ್ತು ರೋಹಿತ್ ಗಾಗಿ ಜೈಪುರದಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಶೂಟರ್ ನಿತಿನ್ ಫೌಜಿ ಮತ್ತು ರಣವೀರ್ ಬಾಲ್ಯದ ಸ್ನೇಹಿತರು. ರಣವೀರ್ ನಿತಿನ್ ಫೌಜಿಗೆ ಹೋಟೆಲ್ ಮತ್ತು ಜೈಪುರದಲ್ಲಿರುವ ಆತನ ಪರಿಚಯಸ್ಥರ ಫ್ಲಾಟ್ ನಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ, ಅವರು ಫೌಜಿ ಮತ್ತು ರೋಹಿತ್ ರಾಥೋಡ್ ಅವರನ್ನು ಮೋಟಾರ್ ಸೈಕಲ್ ನಲ್ಲಿ ಅಜ್ಮೀರ್ ರಸ್ತೆಯಿಂದ ಕರೆದೊಯ್ದರು ಮತ್ತು ಬಗ್ರು ಟೋಲ್ ಪ್ಲಾಜಾದ ಮುಂದೆ ನಾಗೌರ್ ಡಿಪೋದಿಂದ ರಾಜಸ್ಥಾನ ರೋಡ್ ವೇಸ್ ಬಸ್ ನಲ್ಲಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.


