ಬೆಂಗಳೂರು: ಮದ್ಯ ಸೇವಿಸಿ ಬಂದು ಪತ್ನಿಯ ಶೀಲದ ಬಗ್ಗೆ ಶಂಕಿಸಿ ಹೀನಾಯವಾಗಿ ಮಾತನಾಡಿ ಜಗಳವಾಡಿದ ಪತಿಯ ಎದೆಗೆ ಪತ್ನಿಯೇ ಚಾಕುವಿನಿಂದ ತಿವಿದು ಹತ್ಯೆಗೈದಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಮೇಶ್ ದಾಮಿ (27) ಮೃತನಾಗಿದ್ದು, ಆತನ ಪತ್ನಿ ಮನಿಷಾ ಆರೋಪಿಯಾಗಿದ್ದಾರೆ.
ರಾತ್ರಿ ಉಮೇಶ್ ಸ್ನೇಹಿತರೊಡನೆ ಹೊರಹೋಗಿ, ಕಂಠಪೂರ್ತಿ ಮದ್ಯಸೇವನೆ ಮಾಡಿ ಮನೆಗೆ ಬಂದಿದ್ದ. ಈ ವೇಳೆ ಹೆಂಡತಿ ಯಾರೊಡನಯೋ ಫೋನ್ ನಲ್ಲಿ ಮಾತಾಡುತ್ತಿರುವುದನ್ನು ಕಂಡು ಸಿಟ್ಟಾಗಿ, ಆಕೆಯ ಶೀಲದ ಬಗ್ಗೆ ಹೀನಾಯವಾಗಿ ಮಾತನಾಡಿದ್ದ. ಇದರಿಂದ ರೊಚ್ಚಿಗೆದ್ದ ಪತ್ನಿ ಚಾಕುವಿನಿಂದ ಉಮೇಶ್ ಎದೆಗೆ ತಿವಿದಿದ್ದಳು.
ರಕ್ತಸ್ರಾವದಿಂದಾಗಿ ಉಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹುಳಿಮಾವು ಠಾಣೆಯ ಪೊಲೀಸರು ಮನಿಷಾಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


