ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಮಂಗಳವಾರ ಗ್ರಾಮದೇವತೆ ಕರಿಯಮ್ಮದೇವಿ ಹಾಗೂ ಕೊಲ್ಲಾಪುರದಮ್ಮದೇವಿಯರ ಜಾತ್ರಾ ಮಹೋತ್ಸವವು ವೈಭವದಿಂದ ನೆರವೇರಿತು.
ಜಾತ್ರೆಯ ಅಂಗವಾಗಿ ಮೊದಲ ಸೋಮವಾರ ಗಂಗಾಪೂಜೆ, ಗಣಪತಿ ಪೂಜೆ, ನವಗ್ರಹ ಹೋಮ ದುರ್ಗಾ ಹೋಮ ಪೂರ್ಣಾಹುತಿ ಇತ್ಯಾದಿಗಳು ನೆರವೇರಿದವು.
ಅನ್ನಲಪುರಿ ಆಂಜನೇಯಸ್ವಾಮಿಗೆ ಗ್ರಾಮಸ್ಥರು ಜ್ಯೋತಿ ಬೆಳಗಿದರು. ಮಂಗಳವಾರ ಗ್ರಾಮದೇವತೆಗಳಿಗೆ ಗ್ರಾಮದ ಮಹಿಳೆಯರು ಜ್ಯೋತಿ ಬೆಳಗಿ ಸಂಭ್ರಮಿಸಿದರು.
ಬುಧವಾರದಂದು ಶ್ರೀ ಪಾತಲಿಂಗೇಶ್ವರ ದೇವರಿಗೆ ವಿಶೇಷ ಪೂಜೆಗಳು ನೆರವೇರಿದವು. ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಮೂರು ದಿನಗಳ ಕಾಲ ಸಂಭ್ರಮ ಮನೆ ಮಾಡಿತ್ತು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA