ಕೊರಟಗೆರೆ ತಾಲೂಕಿನ ಪುಣ್ಯಕೋಟಿ ಫ್ಯಾಕ್ಟರಿಯಲ್ಲಿ ನಡೆದ ಬಾಯ್ಲರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮತುಮಕೂರು ವಾಹಿನಿಯ ವರದಿಯ ಬೆನ್ನಲ್ಲೇ ಅಧಿಕಾರಿ ವರ್ಗ ಎಚ್ಚೆತ್ತುಕೊಂಡಿದ್ದು, ಯಾವ ಇಲಾಖೆಯಿಂದಲೂ ಅನುಮತಿ ಪಡೆಯದೆ ಅನಧಿಕೃತ ಪುಣ್ಯಕೋಟಿ ಫ್ಯಾಕ್ಟರಿ ಮಾಲೀಕನಿಗೆ ಸಂಬಂಧಪಟ್ಟ ಇಲಾಖೆಗಳಿಂದ ನೋಟಿಸ್ ಜಾರಿ ಮಾಡಲಾಗಿದೆ.
ಈ ಫ್ಯಾಕ್ಟರಿಯಲ್ಲಿ ಹಾಲು ಮಾರಾಟಕ್ಕೆ ಮಾತ್ರವೇ ಅನುಮತಿ ಪಡೆದುಕೊಳ್ಳಲಾಗಿದೆ. ಆದರೆ ಇಲ್ಲಿ ಮಸಾಲೆ ಮಜ್ಜಿಗೆ ಹಾಗೂ ಪೇಡ, ಜಾಮೂನ್ ಫ್ಯಾಕ್ಟರಿ ನಡೆಸಲಾಗುತ್ತಿದೆ. ಅದೂ ಅಲ್ಲದೇ ಯಾವುದೇ ಭದ್ರತೆ ಇಲ್ಲದೆ ಮನೆಯೊಳಗೆ ದೊಡ್ಡ ದೊಡ್ಡ ಮಿಷನ್ ಗಳ ಅಳವಡಿಸಿ ಬಳಕೆ ಮಾಡಲಾಗುತ್ತಿದೆ.
ಮನೆಯೊಳಗೆ ಫ್ಯಾಕ್ಟರಿ ತೆಗೆಯಲು ಅನುಮತಿ ಕೊಟ್ಟವರು ಯಾರು..??? ಹಣದ ಆಮಿಷಕ್ಕೆ ಅನುಮತಿ ಕೊಟ್ಟರೆ ಸಂಬಂಧಪಟ್ಟ ಅಧಿಕಾರಿಗಳು ? ಅನಧಿಕೃತ ಫ್ಯಾಕ್ಟರಿ ಎಂದು ಗೊತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಯಾಕೆ? ಇಷ್ಟೆಲ್ಲ ಅನಾಹುತವಾದರು ಮಾಲೀಕನ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ..? ಎನ್ನುವ ಪ್ರಶ್ನೆಗಳು ಇದೀಗ ವ್ಯಾಪಕವಾಗಿ ಕೇಳಿ ಬಂದಿದೆ.
ಪಾಲಿಸಬೇಕಾದ ನಿಯಮಗಳು ಗಾಳಿಗೆ ತೂರಿ 15 ವರ್ಷದಿಂದ ಮಾಲಿಕ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಈ ಪುಣ್ಯಕೋಟಿಯಲ್ಲಿ ತಯಾರಿಸುವ ಪ್ರಾಡಕ್ಟ್ ಗಳ ಮೇಲೆ ಮ್ಯಾನ್ಯುಫ್ಯಾಕ್ಚರಿ ಎಕ್ಸ್ಪರಿ ಡೇಟ್ ಗಳೇ ಇಲ್ಲ. ಸಾರ್ವಜನಿಕರ ಆರೋಗ್ಯಕ್ಕೆ ಗ್ಯಾರಂಟಿ ಇಲ್ಲವಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ತಾಲೂಕಿನಲ್ಲಿ ನಿಷ್ಕ್ರಿಯರಾಗಿದ್ದಾರೆಯೇ? ಇಲ್ಲಿ ತಯಾರಾಗುವ ಮಸಾಲೆ ಮಜ್ಜಿಗೆ ಪೇಡ ಹಾಗೂ ಜಾಮುನ್ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಮಾರಾಟವಾಗುತ್ತಿದೆ. ಪ್ಯಾಕ್ಟರಿಯಲ್ಲಿ ಬಾಯ್ಲರ್ ಬ್ಲಾಸ್ಟ್ ಆಗಿ ಇಷ್ಟು ದೊಡ್ಡ ಅನಾಹುತವಾದರೂ , ಕೊರಟಗೆರೆ ಪೊಲೀಸ್ ಇಲಾಖೆಯಲ್ಲಿ ಎಫ್ ಐಆರ್ ದಾಖಲಾದರೂ ಸಹ ಯಾವುದೇ ಕ್ರಮ ಜರುಗಿಲ್ಲ ಯಾಕೆ…?? ಎನ್ನುವ ಹಲವು ಪ್ರಶ್ನೆಗಳು ಕೇಳಿ ಬಂದಿವೆ.
ಇನ್ನೂ ಕಾರ್ಮಿಕ ಇಲಾಖೆಯಿಂದ ಮಾಲೀಕನಿಗೆ ನೋಟಿಸ್ ಜಾರಿಯಾಗಿದೆ. ಏಳು ದಿನಗಳಲ್ಲಿ ಸಂಪೂರ್ಣ ಮಾಹಿತಿಯೊಂದಿಗೆ ಕಚೇರಿಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ತೆಗೆದುಕೊಳ್ಳುವಂತೆ ತಹಶೀಲ್ದಾರ್ ಮಂಜುನಾಥ್ ಕೆ ಸೂಚನೆ ನೀಡಲಾಗಿದೆ.
ವರದಿ : ಮಂಜುಸ್ವಾಮಿ ಎಂ.ಎನ್.ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA