ಕೊರಟಗೆರೆ: ಇತಿಹಾಸ ಪ್ರಸಿದ್ಧವುಳ್ಳ ಬೆಟ್ಟದ ತಿಮ್ಮಪ್ಪ, ಆಂಜನೇಯನಿಗೆ ಏಕಾದಶಿಯ ವಿಶೇಷ ಪೂಜೆ ನಡೆಯಿತು.
ಪ್ರತಿ ವರ್ಷ ಆಷಾಢ ಏಕಾದಶಿ ಯಂದು ಈ ಗ್ರಾಮದ ಹಿಂದೂ ಸಾದರ ಸಮುದಾಯದ ಜನಾಂಗವು ವಾಡಿಕೆಯಂತೆ ಪ್ರತಿ ಮನೆಯಿಂದ ಮಡಿಯಿಂದ ದೇವರ ನೈವೇದ್ಯದ ಬುತ್ತಿಯನ್ನು ಸಿದ್ಧಪಡಿಸಿ ಬುತ್ತಿಗೆ ಪೂಜೆ ಸಲ್ಲಿಸಿ ಬೆಟ್ಟಕ್ಕೆ ಹೊತ್ತುಕೊಂಡು ಹೋಗಿ ಬೆಟ್ಟದ ಮೇಲಿರುವ ಆಂಜನೇಯ ಹಾಗೂ ತಿಮ್ಮಪ್ಪ ದೇವರಿಗೆ ನೈವೇದ್ಯ ಅರ್ಪಿಸಿದರು.
ಕೊರಟಗೆರೆ ತಾಲೂಕಿನ ಬೋಡಬಂಡೆನಹಳ್ಳಿ ಗ್ರಾಮದ ಬೆಟ್ಟದ ಮೇಲೆ ಗುಹೆಯಲ್ಲಿ ನೆಲೆಸಿರುವ ಆಂಜನೇಯ ಹಾಗೂ ತಿಮ್ಮಪ್ಪ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಬರಿ ಬಂಡೆಯ ಮೇಲೆ ಪ್ರಸಾದ ಸೇವಿಸಿದರು.
ಇತಿಹಾಸ ಉಳ್ಳ ಬೆಟ್ಟಕ್ಕೆ ಹೋಗಲು ರಸ್ತೆ ಸರಿ ಇಲ್ಲದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ರಸ್ತೆ ಹಾಗೂ ಗುಹೆಯಲ್ಲಿರುವ ದೇವರ ಸನ್ನಿಧಾನಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವಂತೆ ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಭಕ್ತರು ಮನವಿ ಮಾಡಿದರು.
ವರದಿ : ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA