nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025
    Facebook Twitter Instagram
    ಟ್ರೆಂಡಿಂಗ್
    • ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ
    • ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ
    • ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು
    • ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ
    • ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ
    • ವಿವಿಧ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ
    • ಡಿಸೆಂಬರ್ 8ರಿಂದ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಹಾರ ಅದಾಲತ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಷ್ಟ್ರಧ್ವಜಕೊಳ್ಳುವುದರ ಜೊತೆಗೆ ಧರಿಸಲು ಖಾದಿ ಸಹ ಬಳಕೆಯಾಗಲಿ: ಡಾ.ಎಚ್.ಕೆ.ಎಸ್.ಸ್ವಾಮಿ
    ತುಮಕೂರು August 15, 2024

    ರಾಷ್ಟ್ರಧ್ವಜಕೊಳ್ಳುವುದರ ಜೊತೆಗೆ ಧರಿಸಲು ಖಾದಿ ಸಹ ಬಳಕೆಯಾಗಲಿ: ಡಾ.ಎಚ್.ಕೆ.ಎಸ್.ಸ್ವಾಮಿ

    By adminAugust 15, 2024No Comments2 Mins Read
    charaka

    ಗ್ರಾಹಕರು ಖಾದಿ ಅಂಗಡಿಯಲ್ಲಿ ರಾಷ್ಟ್ರಧ್ವಜ ಕೊಳ್ಳುವುದರ ಜೊತೆ ಜೊತೆಗೆ ತಮ್ಮ ದಿನನಿತ್ಯ ಬಳಕೆಗೂ ಸಹ ಖಾದಿ ವಸ್ತ್ರಗಳನ್ನ ಬಳಕೆ ಮಾಡುವುದನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ರಾಷ್ಟ್ರಪ್ರೇಮವನ್ನ, ಗ್ರಾಮೀಣ ಜನರಿಗೆ ತೋರುವ ಸಹಕಾರವನ್ನ, ತಮ್ಮ ಮೈಮೇಲೆ ಧರಿಸಿ, ಗ್ರಾಮೀಣ ಉದ್ಯೋಗಸ್ಥರಿಗೆ ನಮ್ಮ ಸಹಕಾರದ ಹಸ್ತವನ್ನ ಚಾಚಿದಂತಾಗುತ್ತದೆ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

    ನಗರದಲ್ಲಿರುವ ಪ್ರತಿಯೊಂದು ಖಾದಿ ಅಂಗಡಿಯಲ್ಲೂ ಸಹ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ದಾರ ತಯಾರಿಸುವುದನ್ನು ಜನರಿಗೆ ತೋರಿಸಿಕೊಟ್ಟರೆ, ಖಾದಿ ಬಗ್ಗೆ ಅಭಿಮಾನ ಹೆಚ್ಚಾಗಿ, ಇನ್ನು ಹೆಚ್ಚಾಗಿ ಖಾದಿಯನ್ನ ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪ್ರತಿ ಖಾದಿ ಅಂಗಡಿಯಲ್ಲೂ ಸಹ ಚರಕವನ್ನು ಇಟ್ಟು, ಅವುಗಳ ಪ್ರದರ್ಶನ ಮತ್ತು ಬಳಕೆಯನ್ನ ಜನಸಾಮಾನ್ಯರಿಗೆ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.


    Provided by
    Provided by

    ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಮಾತ್ರ ಜನರು ಬಾವುಟ ಖರೀದಿಗೆ ಖಾದಿ ಅಂಗಡಿಗೆ ಬರುವುದು ಸಾಮಾನ್ಯ, ಆದರೆ ಇನ್ನುಳಿದ ದಿನಗಳಲ್ಲಿ ಖಾಲಿ ಅಂಗಡಿ ಒಳಗೆ ಬರದೆ, ಆ ವಸ್ತ್ರಗಳನ್ನು ಬಳಕೆ ಮಾಡದೆ, ರಾಸಾಯನಿಕಗಳಿಂದ ತಯಾರದಂತ, ಕೈಗಾರಿಕೆಗಳಿಂದ ತಯಾರು ಆದಂತ ಬಟ್ಟೆಯನ್ನು ಬಳಸುತ್ತಿರುವುದರಿಂದ, ಇನ್ನೂ ಸಹ ಖಾದಿ ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಆಗದೆ ಹಿಂದುಳಿದಿದೆ. ಹಾಗಾಗಿ ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳು, ಧರ್ಮ ಪ್ರಚಾರಕರು, ತಮ್ಮ ಕಾರ್ಯಕ್ರಮಗಳಲ್ಲಿ ಜನರಿಗೆ ಹೆಚ್ಚಿನ ಮಟ್ಟದ ಖಾದಿಯನ್ನು ಕೊಂಡು ಬಳಕೆ ಮಾಡಲು ತಿಳಿಸಿ, ಜನಸಾಮಾನ್ಯರಿಗೆ ದುಡಿಯುವ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಬಹಳಷ್ಟು ಖಾದಿ ಅಂಗಡಿಗಳಲ್ಲಿ ಚರಕವನ್ನ ಮೊದಲು ಪ್ರದರ್ಶನ ಮಾಡುತ್ತಿದ್ದರು, ಈಗೀಗ ಚರಕೆಗಳನ್ನು ಸಹ ತೆಗೆದು ಮೂಲೆಗುಂಪು ಮಾಡಿರುವುದರಿಂದ, ಜನರಿಗೆ ಚರಕದ ಮಹತ್ವ ಅರಿವಾಗುತ್ತಿಲ್ಲ, ಅಂಗಡಿ ಮುಂದೆ ಹಾಕುವ ಪೋಸ್ಟರ್ಗಳಲ್ಲಿ, ಫ್ಲೆಕ್ಸ್ ಗಳಲ್ಲಿ ಚರಕದ ಚಿತ್ರವಿರುತ್ತದೆ, ಕಾರ್ಯ ಮಾಡುವಂತಹ ಚರಕವನ್ನ ಪ್ರದರ್ಶನ ಕೊಡಬೇಕಾಗಿದೆ. ಬರೀ ಚಿತ್ರದಲ್ಲಿ ತೋರಿಸುವ ಚರಕದಿಂದ ಜನರ ಮನಸ್ಸಿಗೆ ಅದರ ಶಕ್ತಿಯ ಅರಿವಾಗುವುದಿಲ್ಲ, ಹಾಗಾಗಿ ಪ್ರತಿ ಖಾದಿ ಅಂಗಡಿಯ ಸಂಸ್ಥೆಗಳು, ಅಂಗಡಿಗಳಲ್ಲಿ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ಅದರಿಂದ ದಾರ ತೆಗೆಯುವುದನ್ನು ಸಹ ಗಿರಾಕಿಗಳಿಗೆ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

    ರಾಷ್ಟ್ರ ಧ್ವಜವನ್ನೇ ನಾವು ಕೈಯಿಂದ ತಯಾರಿಸಿ ಬಳಕೆ ಮಾಡುವುದರಿಂದ ಗ್ರಾಮೀಣ ಹುದ್ದೆಗಳು ಉಳಿದುಕೊಳ್ಳುತ್ತದೆ ಎಂದು ಗಾಂಧೀಜಿಯವರು ಖಾದಿ ಧ್ವಜಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು, ಅದೇ ಸಿದ್ಧಾಂತವನ್ನು ಹೀಗೂ ಸಹ ನಾವು ಅಳವಡಿಸಿಕೊಂಡು, ಬರಿ ರಾಷ್ಟ್ರಧ್ವಜ ಖರೀದಿಗೆ ಅಷ್ಟೇ ನಾವು ಖಾದಿ ಅಂಗಡಿಗೆ ಹೋಗದೆ, ಪ್ರತಿ ಸಂದರ್ಭದಲ್ಲಿ ಮನೆ ಗೃಹಪ್ರವೇಶಕ್ಕೆ, ಯಾರಿಗಾದರೂ ಉಡುಗೊರೆಯನ್ನು ಕೊಡಬೇಕಾದರೆ, ಮಕ್ಕಳ ಹುಟ್ಟು ಹಬ್ಬಕ್ಕೆ, ಖಾದಿ ಬಟ್ಟೆಗಳನ್ನೇ ಬಳಕೆ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಕಾಲೇಜುಗಳಲ್ಲಿ ಯತ್ನಿಕ್ ಡೇ ಎಂದು ಆಚರಣೆ ಮಾಡುವ ವಿದ್ಯಾರ್ಥಿಗಳು ಯುವಜನಾಂಗ, ಜೀನ್ಸ್ ಪ್ಯಾಂಟ್ ಅನ್ನು, ಪಂಚೆ ಉಟ್ಟುಕೊಂಡು ಬರುವುದನ್ನು ಹಾಗೂ ವೈವಿಧ್ಯಮಯವಾದ ಹುಡುಗೆಗಳನ್ನ ತೊಟ್ಟು ಬರುವುದು ಸಾಮಾನ್ಯವಾಗಿದೆ.. ಅಂತಹ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಒಂದು ದಿವಸದ ಮಟ್ಟಿಗೆ ಖಾದಿ ದಿವಸ ಎಂದು ಆಚರಿಸುವುದನ್ನು ತಿಳಿಸಿಕೊಡಬೇಕು. ಇದರಿಂದ ರಾಷ್ಟ್ರಪ್ರೇಮದ ಜಾಗೃತಿ ಉಂಟಾಗುತ್ತದೆ. ತಿರಂಗ ಕಾರ್ಯಕ್ರಮದಡಿಯಲ್ಲಿ ಪ್ರಧಾನ ಮಂತ್ರಿಗಳು ಹೆಚ್ಚಿನ ಖಾದಿಗೆ ಒತ್ತು ಕೊಟ್ಟಿರುವುದರಿಂದ, ನಾವು ಈ ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ರತಿ ಮನೆಯಲ್ಲೂ ಸಹ ಖಾದಿ ಮತ್ತು ಚರಕ ಎಂಬ ಸಂದೇಶವನ್ನು ಸಾರಲು ಅವಕಾಶ ದೊರೆಯುತ್ತದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025

    ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ

    December 6, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ತುಮಕೂರು: ಕೊರಟಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ/ ಸರ್ಕಾರಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ, ಬಸ್ / ರೈಲ್ವೆ…

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.