nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ

    June 12, 2026
    Facebook Twitter Instagram
    ಟ್ರೆಂಡಿಂಗ್
    • ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ
    • ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!
    • ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ
    • ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ
    • ಪಾವಗಡ: ಸಕಾಲಕ್ಕೆ ಸಿಗದ ಚಿಕಿತ್ಸೆ; ಹಾವು ಕಚ್ಚಿ ಬಿ.ಫಾರ್ಮಸಿ ವಿದ್ಯಾರ್ಥಿ ದುರ್ಮರಣ
    • ಐದು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ
    • ಕ್ಷೇತ್ರದ ವಿದ್ಯಾರ್ಥಿಗಳಿಗೆ ಎಸ್.ಬಿ.ಚಾರಿಟಬಲ್ ಟ್ರಸ್ಟ್‌ನಿಂದ ಉಚಿತ ಸಿಇಟಿ, ನೀಟ್ ತರಬೇತಿ: ಶಾಸಕ ಸಿ.ಬಿ. ಸುರೇಶ್ ಬಾಬು
    • KCET–2026ರಲ್ಲಿ ಸುಭಾಷ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಕೊರಟಗೆರೆ ತಾಲೂಕು ಪ್ರಥಮ ಸ್ಥಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರಾಷ್ಟ್ರಧ್ವಜಕೊಳ್ಳುವುದರ ಜೊತೆಗೆ ಧರಿಸಲು ಖಾದಿ ಸಹ ಬಳಕೆಯಾಗಲಿ: ಡಾ.ಎಚ್.ಕೆ.ಎಸ್.ಸ್ವಾಮಿ
    ತುಮಕೂರು August 15, 2024

    ರಾಷ್ಟ್ರಧ್ವಜಕೊಳ್ಳುವುದರ ಜೊತೆಗೆ ಧರಿಸಲು ಖಾದಿ ಸಹ ಬಳಕೆಯಾಗಲಿ: ಡಾ.ಎಚ್.ಕೆ.ಎಸ್.ಸ್ವಾಮಿ

    By adminAugust 15, 2024No Comments2 Mins Read
    charaka

    ಗ್ರಾಹಕರು ಖಾದಿ ಅಂಗಡಿಯಲ್ಲಿ ರಾಷ್ಟ್ರಧ್ವಜ ಕೊಳ್ಳುವುದರ ಜೊತೆ ಜೊತೆಗೆ ತಮ್ಮ ದಿನನಿತ್ಯ ಬಳಕೆಗೂ ಸಹ ಖಾದಿ ವಸ್ತ್ರಗಳನ್ನ ಬಳಕೆ ಮಾಡುವುದನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ರಾಷ್ಟ್ರಪ್ರೇಮವನ್ನ, ಗ್ರಾಮೀಣ ಜನರಿಗೆ ತೋರುವ ಸಹಕಾರವನ್ನ, ತಮ್ಮ ಮೈಮೇಲೆ ಧರಿಸಿ, ಗ್ರಾಮೀಣ ಉದ್ಯೋಗಸ್ಥರಿಗೆ ನಮ್ಮ ಸಹಕಾರದ ಹಸ್ತವನ್ನ ಚಾಚಿದಂತಾಗುತ್ತದೆ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.

    ನಗರದಲ್ಲಿರುವ ಪ್ರತಿಯೊಂದು ಖಾದಿ ಅಂಗಡಿಯಲ್ಲೂ ಸಹ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ದಾರ ತಯಾರಿಸುವುದನ್ನು ಜನರಿಗೆ ತೋರಿಸಿಕೊಟ್ಟರೆ, ಖಾದಿ ಬಗ್ಗೆ ಅಭಿಮಾನ ಹೆಚ್ಚಾಗಿ, ಇನ್ನು ಹೆಚ್ಚಾಗಿ ಖಾದಿಯನ್ನ ಬಳಕೆ ಮಾಡಲು ಪ್ರಾರಂಭಿಸುತ್ತಾರೆ. ಆದ್ದರಿಂದ ಪ್ರತಿ ಖಾದಿ ಅಂಗಡಿಯಲ್ಲೂ ಸಹ ಚರಕವನ್ನು ಇಟ್ಟು, ಅವುಗಳ ಪ್ರದರ್ಶನ ಮತ್ತು ಬಳಕೆಯನ್ನ ಜನಸಾಮಾನ್ಯರಿಗೆ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.


    Provided by
    Provided by

    ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಲ್ಲಿ ಮಾತ್ರ ಜನರು ಬಾವುಟ ಖರೀದಿಗೆ ಖಾದಿ ಅಂಗಡಿಗೆ ಬರುವುದು ಸಾಮಾನ್ಯ, ಆದರೆ ಇನ್ನುಳಿದ ದಿನಗಳಲ್ಲಿ ಖಾಲಿ ಅಂಗಡಿ ಒಳಗೆ ಬರದೆ, ಆ ವಸ್ತ್ರಗಳನ್ನು ಬಳಕೆ ಮಾಡದೆ, ರಾಸಾಯನಿಕಗಳಿಂದ ತಯಾರದಂತ, ಕೈಗಾರಿಕೆಗಳಿಂದ ತಯಾರು ಆದಂತ ಬಟ್ಟೆಯನ್ನು ಬಳಸುತ್ತಿರುವುದರಿಂದ, ಇನ್ನೂ ಸಹ ಖಾದಿ ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಆಗದೆ ಹಿಂದುಳಿದಿದೆ. ಹಾಗಾಗಿ ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳು, ಧರ್ಮ ಪ್ರಚಾರಕರು, ತಮ್ಮ ಕಾರ್ಯಕ್ರಮಗಳಲ್ಲಿ ಜನರಿಗೆ ಹೆಚ್ಚಿನ ಮಟ್ಟದ ಖಾದಿಯನ್ನು ಕೊಂಡು ಬಳಕೆ ಮಾಡಲು ತಿಳಿಸಿ, ಜನಸಾಮಾನ್ಯರಿಗೆ ದುಡಿಯುವ ಅವಕಾಶ ಕಲ್ಪಿಸಿಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಬಹಳಷ್ಟು ಖಾದಿ ಅಂಗಡಿಗಳಲ್ಲಿ ಚರಕವನ್ನ ಮೊದಲು ಪ್ರದರ್ಶನ ಮಾಡುತ್ತಿದ್ದರು, ಈಗೀಗ ಚರಕೆಗಳನ್ನು ಸಹ ತೆಗೆದು ಮೂಲೆಗುಂಪು ಮಾಡಿರುವುದರಿಂದ, ಜನರಿಗೆ ಚರಕದ ಮಹತ್ವ ಅರಿವಾಗುತ್ತಿಲ್ಲ, ಅಂಗಡಿ ಮುಂದೆ ಹಾಕುವ ಪೋಸ್ಟರ್ಗಳಲ್ಲಿ, ಫ್ಲೆಕ್ಸ್ ಗಳಲ್ಲಿ ಚರಕದ ಚಿತ್ರವಿರುತ್ತದೆ, ಕಾರ್ಯ ಮಾಡುವಂತಹ ಚರಕವನ್ನ ಪ್ರದರ್ಶನ ಕೊಡಬೇಕಾಗಿದೆ. ಬರೀ ಚಿತ್ರದಲ್ಲಿ ತೋರಿಸುವ ಚರಕದಿಂದ ಜನರ ಮನಸ್ಸಿಗೆ ಅದರ ಶಕ್ತಿಯ ಅರಿವಾಗುವುದಿಲ್ಲ, ಹಾಗಾಗಿ ಪ್ರತಿ ಖಾದಿ ಅಂಗಡಿಯ ಸಂಸ್ಥೆಗಳು, ಅಂಗಡಿಗಳಲ್ಲಿ ಚರಕವನ್ನ ಪ್ರದರ್ಶನಕ್ಕೆ ಇಟ್ಟು, ಅದರಿಂದ ದಾರ ತೆಗೆಯುವುದನ್ನು ಸಹ ಗಿರಾಕಿಗಳಿಗೆ ತೋರಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

    ರಾಷ್ಟ್ರ ಧ್ವಜವನ್ನೇ ನಾವು ಕೈಯಿಂದ ತಯಾರಿಸಿ ಬಳಕೆ ಮಾಡುವುದರಿಂದ ಗ್ರಾಮೀಣ ಹುದ್ದೆಗಳು ಉಳಿದುಕೊಳ್ಳುತ್ತದೆ ಎಂದು ಗಾಂಧೀಜಿಯವರು ಖಾದಿ ಧ್ವಜಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು, ಅದೇ ಸಿದ್ಧಾಂತವನ್ನು ಹೀಗೂ ಸಹ ನಾವು ಅಳವಡಿಸಿಕೊಂಡು, ಬರಿ ರಾಷ್ಟ್ರಧ್ವಜ ಖರೀದಿಗೆ ಅಷ್ಟೇ ನಾವು ಖಾದಿ ಅಂಗಡಿಗೆ ಹೋಗದೆ, ಪ್ರತಿ ಸಂದರ್ಭದಲ್ಲಿ ಮನೆ ಗೃಹಪ್ರವೇಶಕ್ಕೆ, ಯಾರಿಗಾದರೂ ಉಡುಗೊರೆಯನ್ನು ಕೊಡಬೇಕಾದರೆ, ಮಕ್ಕಳ ಹುಟ್ಟು ಹಬ್ಬಕ್ಕೆ, ಖಾದಿ ಬಟ್ಟೆಗಳನ್ನೇ ಬಳಕೆ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

    ಕಾಲೇಜುಗಳಲ್ಲಿ ಯತ್ನಿಕ್ ಡೇ ಎಂದು ಆಚರಣೆ ಮಾಡುವ ವಿದ್ಯಾರ್ಥಿಗಳು ಯುವಜನಾಂಗ, ಜೀನ್ಸ್ ಪ್ಯಾಂಟ್ ಅನ್ನು, ಪಂಚೆ ಉಟ್ಟುಕೊಂಡು ಬರುವುದನ್ನು ಹಾಗೂ ವೈವಿಧ್ಯಮಯವಾದ ಹುಡುಗೆಗಳನ್ನ ತೊಟ್ಟು ಬರುವುದು ಸಾಮಾನ್ಯವಾಗಿದೆ.. ಅಂತಹ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಪ್ರಾಂಶುಪಾಲರುಗಳು ವಿದ್ಯಾರ್ಥಿಗಳಿಗೆ ಒಂದು ದಿವಸದ ಮಟ್ಟಿಗೆ ಖಾದಿ ದಿವಸ ಎಂದು ಆಚರಿಸುವುದನ್ನು ತಿಳಿಸಿಕೊಡಬೇಕು. ಇದರಿಂದ ರಾಷ್ಟ್ರಪ್ರೇಮದ ಜಾಗೃತಿ ಉಂಟಾಗುತ್ತದೆ. ತಿರಂಗ ಕಾರ್ಯಕ್ರಮದಡಿಯಲ್ಲಿ ಪ್ರಧಾನ ಮಂತ್ರಿಗಳು ಹೆಚ್ಚಿನ ಖಾದಿಗೆ ಒತ್ತು ಕೊಟ್ಟಿರುವುದರಿಂದ, ನಾವು ಈ ಸ್ವಾತಂತ್ರ್ಯ ದಿನಾಚರಣೆಯ ನಂತರ ಪ್ರತಿ ಮನೆಯಲ್ಲೂ ಸಹ ಖಾದಿ ಮತ್ತು ಚರಕ ಎಂಬ ಸಂದೇಶವನ್ನು ಸಾರಲು ಅವಕಾಶ ದೊರೆಯುತ್ತದೆ ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ತುಮಕೂರು: UGD ಓಪನ್ ಆಗಿ ಸಾರ್ವಜನಿಕರಿಗೆ ತೊಂದರೆ, ಪಾಲಿಕೆ ಮೌನ

    June 12, 2026

    ತುಮಕೂರು ವಿಶ್ವವಿದ್ಯಾನಿಲಯ: ವಿವಿಧ ಪದವಿಗಳ ಉಳಿಕೆ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

    June 11, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಮಂತ್ರಾಲಯದಲ್ಲಿ ಜೂನ್ 26ಕ್ಕೆ “ರಾಯರ ದರ್ಶನ” ಆಲ್ಬಮ್ ಬಿಡುಗಡೆ: ಕಾಡು ಸಿದ್ದೇಶ್ವರ ಮಠದ ಶ್ರೀಗಳಿಗೆ ಆಹ್ವಾನ

    June 12, 2026

    ಮಂತ್ರಾಲಯ:  ಇಲ್ಲಿನ ಪ್ರಸಿದ್ಧ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಇದೇ ಜೂನ್ 26ರಂದು ಅತ್ಯಂತ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿರುವ “ರಾಯರ…

    ಲೋಕಾಯುಕ್ತರಿಂದ 56 ಜನರ ಅಹವಾಲು ಸ್ವೀಕಾರ:  ಜಮೀನು ಖಾಸಗಿ ವ್ಯಾಜ್ಯಗಳೇ ಹೆಚ್ಚು.. ಪಡಿತರ ಕಾರ್ಡಿನ ಮಾಹಿತಿಯೇ ನೀಡಲ್ವಂತೆ!

    June 12, 2026

    ಪಾವಗಡ: ನಿಯಮ ಉಲ್ಲಂಘನೆ, ವೆಂಕಟೇಶ್ವರ ಕಲ್ಲುಗಣಿ ಗುತ್ತಿಗೆ ರದ್ದುಪಡಿಸಿ ಇಲಾಖೆ ಖಡಕ್ ಆದೇಶ! | ಶಾಸಕ ವೆಂಕಟೇಶ್ ವಿರುದ್ಧ ಎಫ್‌ ಐಆರ್ ದಾಖಲಿಸಲು ಒತ್ತಾಯ

    June 12, 2026

    ಜುಲೈ 15ರಂದು ಎಲ್ಲಾ ರೈತಪರ ಸಂಘಟನೆಗಳು, ಮುಖಂಡರೊಂದಿಗೆ ಹೇಮಾವತಿ ನಾಲಾ ವೀಕ್ಷಣೆ: ಶಾಸಕ ಸಿ.ಬಿ. ಸುರೇಶ್‌ ಬಾಬು ಕರೆ

    June 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.