ಪಾವಗಡ: ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮರಿದಾಸನಹಳ್ಳಿ ಕ್ರೀಡಾಪಟುಗಳು ಪಾವಗಡ ಪಟ್ಟಣ ಪದವಿ ಪೂರ್ವ ಕಾಲೇಜು ಪ್ರತಿಸ್ಪರ್ಧಿಗಳ ಎದುರು ಗೆದ್ದು ಪ್ರಥಮ ಸ್ಥಾನ ಗಳಿಸಿದ್ದಾರೆ..
ಮರಿದಾಸನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳ ಈ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಕಂಡು ಗ್ರಾಮಸ್ಥರು ಸಿಹಿ ತಿನಿಸಿ ಸಂಭ್ರಮಿಸಿದರು. ಜೊತೆಗೆ ಕುಣಿದು ಕುಪ್ಪಳಿಸಿದ್ದಾರೆ.
ಕಬ್ಬಡಿ ತಂಡದಲ್ಲಿ ಕ್ಯಾಪ್ಟನ್ ವಿಶ್ವ, ಸೇರಿದಂತೆ ರಾಜು, ಭರತ್ ಪಟೇಲ್, ರಘು, ಧನಂಜಯ್ , ಗೌತಮ್, ಮಾರುತಿ, ಅಭಿ, ಕಿರಣ್, ಭರತ್ ಪಟೆಲ್, ನಿತಿನ್ , ಸಿದ್ದಾರ್ಥ ಇವರನ್ನು ಮರಿದಾಸನಹಳ್ಳಿ ಸರ್ಕಾರಿ ಕಾಲೇಜು ಪ್ರಾಂಶುಪಾಲರು ಆಂಜನೇಯಲು, ಟೀಮ್ ಮ್ಯಾನೇಜರ್ ಓಂಕಾರ್ , ಕೋಚ್ ಹರೀಶ್ ,ಅಭಿ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿಗಳ ಸಂಘದ ಪಧಾಧಿಕಾರಿಗಳು, ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q