nammatumakuru

    Subscribe to Updates

    Get the latest creative news from FooBar about art, design and business.

    What's Hot

    ದರ್ಶನ್​​ ಇಲ್ಲದಿದ್ದಾಗ ಕೆಲವರು ಮಾತನಾಡುತ್ತಾರೆ, ಉದ್ವೇಗಕ್ಕೆ ಒಳಗಾಗಬೇಡಿ: ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸಂದೇಶ

    December 22, 2025

    ಹುಬ್ಬಳ್ಳಿ: ಅಂತರ್ಜಾತಿ ವಿವಾಹವಾಗಿದ್ದ ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆ!

    December 22, 2025

    ಬಂಜಾರ ಭವನ ಉದ್ಘಾಟನೆ:  ಏಪ್ರಿಲ್ ನಲ್ಲಿ ಸಾಮೂಹಿಕ ವಿವಾಹ:  ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಡಿ.

    December 22, 2025
    Facebook Twitter Instagram
    ಟ್ರೆಂಡಿಂಗ್
    • ದರ್ಶನ್​​ ಇಲ್ಲದಿದ್ದಾಗ ಕೆಲವರು ಮಾತನಾಡುತ್ತಾರೆ, ಉದ್ವೇಗಕ್ಕೆ ಒಳಗಾಗಬೇಡಿ: ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸಂದೇಶ
    • ಹುಬ್ಬಳ್ಳಿ: ಅಂತರ್ಜಾತಿ ವಿವಾಹವಾಗಿದ್ದ ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆ!
    • ಬಂಜಾರ ಭವನ ಉದ್ಘಾಟನೆ:  ಏಪ್ರಿಲ್ ನಲ್ಲಿ ಸಾಮೂಹಿಕ ವಿವಾಹ:  ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಡಿ.
    • ಬಿಗ್ ಬಾಸ್ ಕನ್ನಡ: ರಜತ್ ಮತ್ತು ಚೈತ್ರಾ ಕುಂದಾಪುರ ಎಲಿಮಿನೇಷನ್‌ ಗೆ ಅಸಲಿ ಕಾರಣ ಬಯಲು!
    • ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯೇ? ಎಚ್ಚರ, ಎದುರಾಗಬಹುದು ಈ ಗಂಭೀರ ಸಮಸ್ಯೆಗಳು!
    • ಚಿಕ್ಕಬಳ್ಳಾಪುರ: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ; ನವವಿವಾಹಿತೆ ದುರ್ಮರಣ, ಪತಿಗೆ ಗಂಭೀರ ಗಾಯ
    • ಯಾವ ಶಕ್ತಿಯಿಂದಲೂ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ
    • ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮುಂದಿನ ವಾರ 24ನೇ ಕಂತಿನ ಹಣ ಬಿಡುಗಡೆ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಆಮೆ ಮೊಲದ ಓಟದ 2 ನೇ ಸ್ಪರ್ಧೆ
    ಲೇಖನ January 9, 2025

    ಆಮೆ ಮೊಲದ ಓಟದ 2 ನೇ ಸ್ಪರ್ಧೆ

    By adminJanuary 9, 2025No Comments3 Mins Read
    ame mola

    ರಚನೆ: ವೇಣುಗೋಪಾಲ್

    ಹಿಂದಿನ ಸ್ಪರ್ಧೆಯಲ್ಲಿ ಮುಖಭಂಗವಾಗಿದ್ದ ಮೊಲಕ್ಕೆ ಕಿಚ್ಚು ತನ್ನ ಮನದಲ್ಲಿ ಇನ್ನೂ ಆರಿರಲಿಲ್ಲ, ರಾತ್ರಿ ನಿದ್ರೆ ಬಾರುತ್ತಿರಲಿಲ್ಲ, ಇಡೀ ಜಗತ್ತೇ ಆಮೆಯ ಓಟವನ್ನು ಶ್ಲಾಘಿಸಿ ನನ್ನ ನನ್ನ ಬೇಜವಾಬ್ದಾರಿ ಮತ್ತು ಅತಿ ಆತ್ಮ ವಿಶ್ವಾಸವನ್ನು ವಿಡಂಬಿಸಿ ತೆಗಳಿತ್ತು. ಇನ್ನು ಇವನ್ನೆಲ್ಲಾ ನನ್ನಿಂದ ನೋಡಿ ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಈಗ ಹೋಗಿ ಆಮೆಯನ್ನು ಮತ್ತೊಮ್ಮೆ ನನ್ನ ಜೊತೆ ಓಟದ ಸ್ಪರ್ಧೆಗೆ ಕರೆಯುತ್ತೇನೆ, ಬರಲಿಲ್ಲವೆಂದರೆ ಅದರ ಮಾನ ಮರ್ಯಾದೆಗಳನ್ನು ಜಗದ ಮುಂದೆ ಇವ ಅಸಮರ್ಥನೆಂದು ತೆಗಳುತ್ತೇನೆ, ಒಂದು ವೇಳೆ ಬಂದರೆ ಒಂದೇ ಬಾರಿ ಓಡಿ ಆಮೆಯನ್ನು ಸೋಲಿಸುತ್ತೇನೆ. ನಾನು ಇನ್ನು ಸೋಲಬಾರದೂ ಗೆಲ್ಲಲೇಬೇಕು ಎಂದೆಲ್ಲಾ ಯೋಚಿಸಿಕೊಂಡು ಕಾಡಿನ ಒಂದು ಪೊದೆಯಿಂದ ಆಚೆ ಬಂದು ಒಂದು ಎತ್ತರದ ಕಲ್ಲು ಬಂಡೆಯ ಮೇಲೆ ನಿಂತು ಜೋರಾಗಿ ಕೂಗಿ ಹೇಳಿತು.


    Provided by
    Provided by

    ಹೇ ವನ ವಾನನರರೇ ಇಲ್ಲಿ ಕೇಳಿ.., ಎನ್ನುತ್ತಲೇ ಎಲ್ಲ ಪ್ರಾಣಿಗಳು ಮೊಲದ ಜೋರಾದ ಕೂಗಿಗೆ ಆಚೆ ಬಂದವು, ನಂತರ ಎಲ್ಲವನ್ನೂ ಉದ್ದೇಶಿಸಿ ಇಲ್ಲಿಯವರೆಗೂ ಮೊಲವೇ ಆಮೆಯ ಓಟದ ಸ್ಪರ್ಧೆಯಲ್ಲಿ ಸೋತಿತ್ತು ಎಂದಿದ್ದರಲ್ಲವೇ ಈಗ ನೋಡಿ ಮತ್ತೊಮ್ಮೆ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದೇನೆ. ಈ ಬಾರಿ ಗೆಲುವು ನನ್ನದೇ ಎನ್ನುತ್ತಾ ಆಮೆಗಳ ವಾಸಸ್ಥಾನಕ್ಕೆ ನಡೆದು ಮುಖಂಡ ಆಮೆಯ ಬಳಿ ಹೋಗಿ ಸ್ಪರ್ಧೆಗೆ ಆಮಂತ್ರಿಸಿತು.
    ಆಗ ಮುಖಂಡ ಆಮೆ ಈಗ ಇವೆಲ್ಲಾ ಏಕೆ ಬೇಕು ಅದು ಮುಗಿದು ಹೋದ ಘಟನೆ ಅಲ್ಲವೇ ಎಂದಾಗ ಕೇಳದ ಆಮೆ ಏಕೆ ಸೋತುಬಿಡುವನೆಂಬ ಭಯವೇ, ಹಾಗಾದರೆ ಈಗಲೇ ಸೋಲನ್ನು ಒಪ್ಪಿಕೋ ಎಂದಾಗ ಘನತೆ ಕಾಪಾಡಿಕೊಳ್ಳಲು ವಿಧಿಯಿಲ್ಲದೆ ಆಮೆ ದೇವರನ್ನು ಒಮ್ಮೆ ಪ್ರಾರ್ಥಿಸಿ ಸ್ಪರ್ಧೆಗೆ ಒಪ್ಪಿಕೊಂಡಿತು.

    ನಿಗದಿ ಪಡಿಸಿದ ದಿನದಂದು ಸ್ಪರ್ಧೆ ಏರ್ಪಾಡಾಯಿತು, ಕಾಡಿನ ಎಲ್ಲಾ ಪ್ರಾಣಿಗಳೆಲ್ಲಾ ಕುತೂಹಲದಿಂದ ಸ್ಪರ್ಧೆ ನೋಡಲು ಅಲ್ಲಿ ಕಿಕ್ಕಿರಿದು ನಿಂತಿದ್ದವು, ಈ ಬಾರಿ ಮೊಲವೇ ಗೆಲ್ಲುವುದು ನಿಶ್ಷಿತ ಎಂದು ಎಲ್ಲವೂ ಮನದಲ್ಲಿ ಯೋಚಿಸುತ್ತಾ ನಿಂತಿರುವಾಗ ಮೇಲು ಉಸ್ತುದಾರ ನರಿ ಒಂದು, ಎರಡು, ಮೂರು ಎನ್ನುತ್ತಲೇ ಆಮೆ ಮತ್ತು ಮೊಲದ ಓಟ ಪ್ರಾರಂಭವಾಯಿತು. ಆಮೆ ಓಡುವುದು ನಡೆಯುವಂತೆ ಕಾಣುತಿದ್ದರೆ ಮೊಲದ ಓಟ ಮಿಂಚಿನಂತೆ ಇತ್ತು ಇದನ್ನೆಲ್ಲಾ ನೋಡುತ್ತಿದ್ದ ಉಳಿದ ಪ್ರಾಣಿಗಳು ಹೋ ಎಂದು ಜೋರಾಗಿ ಕೂಗುತ್ತಾ, ಈ ಬಾರಿ ಮೊಲದ ಗೆಲುವು ನಿಶ್ಷಿತ, ಆಮೆ ಸೋಲು ಖಂಡಿತ ಎಂದು ಕೂಗುತ್ತಿದ್ದರೆ, ಆಗಲೇ ಅರ್ಧದಷ್ಟು ಮುಂದೆ ಓಡಿದ್ದ ಮೊಲ ಎಲ್ಲ ಪ್ರಾಣಿಗಳ ಒಕ್ಕೊರಲಿನ ಕೂಗು ಕೇಳಿ ಬಹಳ ಹರ್ಷಿತವಾಗಿ ಮನ ವಿಚಲಿತವಾದಂತೆ ಆಗಿ ಒಮ್ಮೆ ಆಮೆಯನ್ನು ಹಿಂದೆ ತಿರುಗಿ ನೋಡಿದಾಗ ಅದು ಬಹಳ ಹಿಂದೆ ಉಳಿದಿತ್ತು, ಇದು ಇನ್ನು ಬರುವಷ್ಟರಲ್ಲಿ ಎಲ್ಲರಿಗೊಮ್ಮೆ ಕೃತಜ್ಞತೆ ಸಲ್ಲಿಸೋಣ ಎಲ್ಲರೂ ನನಗೆ ಉತ್ಸಾಹ ಕೊಡುತ್ತಿದ್ದಾರೆ ಇದು ನನ್ನ ಧರ್ಮ ಎಂದು ಯೋಚಿಸಿ ಅಲ್ಲೇ ನಿಂತು ಒಮ್ಮೆ ಎಲ್ಲ ಪ್ರಾಣಿಗಳನ್ನೂ ನೋಡಿ, ನೋಡಿ ನನ್ನ ಮಿತ್ರರೆ ಮತ್ತು ಬಂಧುಬಾಂಧವರೆ ನಿಮ್ಮೆಲ್ಲರ ಉತ್ಸಾಹಕ್ಕೆ ಇನ್ನು ತಣ್ಣೀರು ಎರಚುವುದು ಇಲ್ಲ, ನಿಮ್ಮೆಲರ ನಿರೀಕ್ಷೆಗಳನ್ನು ನಾನು ಹುಸಿ ಮಾಡುವುದಿಲ್ಲ, ನಾನು ಈ ಬಾರಿ ಗೆದ್ದು ನನ್ನ ವಿಜಯವನ್ನು ಇಡೀ ಜಗತ್ತಿಗೇ ಸಾರುತ್ತೇನೆ, ನನ್ನ ಮೇಲೆ ಇದ್ದ ಕಳಂಕವನ್ನು ನಾನು ನಿವಾರಿಸಿ ಕೊಳ್ಳುತ್ತೇನೆ. ಈ ಬಾರಿ ಈ ಆಮೆಯದೇ ಸೋಲು ನಿಶ್ಷಿತ, ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಉದ್ದ ಭಾಷಣ ಮಾಡುತ್ತಿರುವಾಗಲೇ, ಆಮೆ ಮೊಲದ ಸೀಮೆ ದಾಟಿ ಮುಂದೆ ಹೋಯಿತು. ಆದರೆ ಮೊಲಕ್ಕೆ ಸಮಯ ಹೋದದ್ದೇ ಗೊತ್ತಾಗಲಿಲ್ಲ, ಎಲ್ಲ ಪ್ರಾಣಿಗಳು ಆಮೆ ಮುಂದಾಗುತ್ತಿದೆ ಎಂದು ಕಣ್ಣಿನಿಂದ ಸಂಜ್ಞೆ ಕೊಡುತ್ತಿದ್ದರೂ ಕೇಳಿಸಿಕೊಳ್ಳದ ಮೊಲ ಗರ್ವದಿಂದ ಇನ್ನು ಮಾತನಾಡುತ್ತಲೇ ಇತ್ತು. ಕೊನೆಗೆ ಜೋರಾದ ಧ್ವನಿಯೊಂದು ಕೇಳಿ ಬಂದಿತು. ಈ ಬಾರಿಯೂ ಆಮೆಯೇ ಓಟದ ಸ್ಪರ್ಧೆಯಲ್ಲಿ ಗೆದ್ದಿದೆ ಎಂದು, ಮೊಲ ತಿರುಗಿ ನೋಡಿದಾಗ ನರಿಯ ಘೋಷಣೆಯಾಗಿತ್ತು ಮತ್ತು ಆಮೆಯಾಗಲೇ ಅಂತಿಮ ಸೀಮೆ ದಾಟಿಯಾಗಿತ್ತು.

    ಆಗ ಮೊಲ ಅರೆ ಇದು ಹೇಗೆ ಸಾಧ್ಯ ಎಂದು ಯೋಚಿಸುವಾಗಲೇ ನರಿ ಮೊಲದ ಬಳಿ ಬಂದು ಹೇಳಿತು ನಿನ್ನ ಗರ್ವವೇ ಇದಕ್ಕೆ ಕಾರಣ, ಏನಾದರೂ ಸಾಧಿಸುತ್ತಿರುವಾಗ ಗುರಿಯ ಮುಂದೆ ನಮ್ಮ ಗಮನವಿರಬೇಕು, ಅದು ಬಿಟ್ಟು ಹೊಗಳು ಭಟ್ಟರ ಬಾಯಿಗೆ ಕಿವಿಯಾಗಬಾರದು, ನೀನು ಈ ಬಾರಿಯೂ ಸೋತಿರುವೆ ಎಂದಾಗ ಮೊಲ ಹೌದು ನಾನು ಮಾನಸಿಕ ವಿಚಲಿತನಾದೆ, ಅತೀ ಆತ್ಮವಿಶ್ವಾಸ ನನ್ನನ್ನು ಸೋಲುವಂತೆ ಮಾಡಿತು ಎಂದು ತಲೆ ತಗ್ಗಿಸಿ ಹೇಳುತ್ತಾ ಆಮೆಗೆ ಬಂದು ಶರಣಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಸದ್ದುಗದ್ದಲವಿರದ ಮೌನ ಸಾಧಕ ಕಾಯಕಯೋಗಿ ಎಂ.ಶಿವಕುಮಾರ್:  ಸಸ್ಯ ಸೇವೆಯನ್ನೇ ಶಿವಪೂಜೆ ಎಂದು ಭಾವಿಸಿದ ಪತ್ರಕರ್ತ

    December 13, 2025

    ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ

    December 12, 2025

    ನಾವು ಏಕೆ ಹೀಗೆ? ಯೋಚಿಸುತ್ತಾ ಹೋದರೆ | ಹೀಗೊಂದು ಚಿಂತನೆ

    December 10, 2025

    Comments are closed.

    Our Picks

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ದರ್ಶನ್​​ ಇಲ್ಲದಿದ್ದಾಗ ಕೆಲವರು ಮಾತನಾಡುತ್ತಾರೆ, ಉದ್ವೇಗಕ್ಕೆ ಒಳಗಾಗಬೇಡಿ: ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸಂದೇಶ

    December 22, 2025

    ದಾವಣಗೆರೆ: ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದಾವಣಗೆರೆಯ…

    ಹುಬ್ಬಳ್ಳಿ: ಅಂತರ್ಜಾತಿ ವಿವಾಹವಾಗಿದ್ದ ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆ!

    December 22, 2025

    ಬಂಜಾರ ಭವನ ಉದ್ಘಾಟನೆ:  ಏಪ್ರಿಲ್ ನಲ್ಲಿ ಸಾಮೂಹಿಕ ವಿವಾಹ:  ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಡಿ.

    December 22, 2025

    ಬಿಗ್ ಬಾಸ್ ಕನ್ನಡ: ರಜತ್ ಮತ್ತು ಚೈತ್ರಾ ಕುಂದಾಪುರ ಎಲಿಮಿನೇಷನ್‌ ಗೆ ಅಸಲಿ ಕಾರಣ ಬಯಲು!

    December 22, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.