ವೈ.ಎನ್.ಹೊಸಕೋಟೆ : ಕನ್ನಡ ಕಲಾ ಮತ್ತು ಸಾಂಸ್ಕೃತಿಕ ಮಂಡಳಿಯು ಪ್ರತಿವರ್ಷ ಕಸ್ತೂರಿ ತಿಲಕ, ಕಲಾಸಿರಿ ಮತ್ತು ಲೇಖಸಿರಿ ಎಂಬ ಮೂರು ಪ್ರಶಸ್ತಿಗಳನ್ನು ಕೊಡ ಮಾಡಲು ತೀರ್ಮಾನಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸುವಂತೆ ಮಂಡಲಿಯ ಅಧ್ಯಕ್ಷ ಎ.ಓ.ನಾಗರಾಜು ತಿಳಿಸಿದರು.
ಪಾವಗಡ ತಾಲ್ಲೂಕಿಗೆ ಸೀಮಿತವಾದಂತೆ ಕನ್ನಡ ಸೇವೆ ಮತ್ತು ಸಂಘಟನೆಗಾಗಿ ಕಸ್ತೂರಿ ತಿಲಕ ಪ್ರಶಸ್ತಿಯನ್ನು, ರಂಗಭೂಮಿ, ಲಲಿತಕಲೆ ಸೇರಿದಂತೆ ಸಾಂಸ್ಕೃತಿಕ ಸೇವೆಗಾಗಿ ಕಲಾಸಿರಿ ಮತ್ತು ಸಾಹಿತ್ಯ ಸೇವೆಗಾಗಿ ಲೇಖಸಿರಿ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರಶಸ್ತಿಯು ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತದೆ. 50 ವರ್ಷಕ್ಕಿಂತ ಹೆಚ್ಚು ವಯಸ್ಸಿರುವ ಪಾವಗಡ ತಾಲ್ಲೂಕಿನ ಆಯಾ ಕ್ಷೇತ್ರದಲ್ಲಿ ಸೇವೆ ಸಾಧನೆ ಮಾಡಿದ ಅರ್ಹರು ಫೆಬ್ರವರಿ 28 ಒಳಗೆ ತಮ್ಮ ವಿವರವನ್ನು ಮಂಡಳಿಯ ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9980957846 ಅಥವಾ 9844220129 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4