ಚಿಕ್ಕನಾಯಕನ ಹಳ್ಳಿ: ಚಿಕ್ಕನಾಯಕನ ಹಳ್ಳಿ ತಹಶೀಲ್ದಾರ್ ತೇಜಸ್ವಿನಿ ಅವರ ವಿರುದ್ಧ ಅಟ್ರಾಸಿಟಿ ದೂರು ದಾಖಲಾಗಿದ್ದರೂ, ಈವರೆಗೆ ಅವರನ್ನು ಬಂಧಿಸಲಾಗಿಲ್ಲ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಹಂದ್ರಾಳ್ ನಾಗಭೂಷಣ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕನಾಯಕನ ಹಳ್ಳಿ ತಹಸೀಲ್ದಾರ್ ವಿರುದ್ದ ಅಟ್ರಾಸಿಟಿ ದೂರು ದಾಖಲಾಗಿ ನಾಲ್ಕು ದಿನಗಳು ಕಳೆದವು. ಆದರೆ ಆರೋಪಿತೆ ತಹಸೀಲ್ದಾರ್ ರನ್ನು ಇದುವರೆಗೂ ಬಂಧಿಸಿಲ್ಲ. ಗಂಭೀರ ಆರೋಪ ಹೊತ್ತಿರುವ ತಹಸೀಲ್ದಾರ್ ರನ್ನು KCSR ನಿಯಮದಂತೆ ಕೂಡಲೇ ಅಮಾನುತುಗೊಳಿಸುವಂತೆ ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಇದುವರೆಗೂ ಅಮಾನತ್ತು, ವರ್ಗಾವಣೆ ಮಾಡಿರುವುದಿಲ್ಲ ಎಂದು ಅವರು ಹೇಳಿದರು.
ತುರ್ತಾಗಿ ಸಂಬಂಧಿಸಿದ ಪೊಲೀಸ್ ಆಡಳಿತ ಆರೋಪಿತೆ ತಹಸೀಲ್ದಾರ್ ಅವರನ್ನು ಬಂಧಿಸದಿದ್ದರೆ , ಅಮಾನತ್ತುಗೊಳಿಸದಿದ್ದರೆ ಮುಂದಿನ ಕಾನೂನು ಹೋರಾಟ ಮುಂದಾಗಲಾಗುವುದು ಎಂದು ಜಿಲ್ಲಾಡಳಿತವನ್ನು ಅವರು ಒತ್ತಾಯಿಸಿದರು.
ಇದೇ ವೇಳೆ ಮಾತನಾಡಿದ ವೇದಿಕೆ ರಾಜ್ಯಧ್ಯಕ್ಷ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಹುಳಿಯಾರ್, ಸಬ್ ಇನ್ಸ್ ಪೆಕ್ಟರ್ ರವರ ಮೇಲೆ ಲಂಚ ಪ್ರಕರಣ ದಾಖಲಾಗಿದ್ದು, ಇದುವರೆಗೂ ನಿಯಮದಂತೆ ಪಿ ಎಸ್ ಐ ರನ್ನು ಅಮಾನತ್ತು ಮಾಡಿಲ್ಲ. ಜಿಲ್ಲೆಯಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ KRS ಪಕ್ಷದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷರಾದ ರಘು ಜಾಣಗೆರೆ, ವೇದಿಕೆಯ ಗೌರವಾದ್ಯಕ್ಷರಾದ ಮಲ್ಲಿಕಾರ್ಜುನ್, ಉಪಾದ್ಯಕ್ಷ ಕುಣಿಗಲ್ ನರಸಿಂಹಮೂರ್ತಿ, ಮಾಚನಹಳ್ಳಿ ಮುನಿರಾಜು, ಪಕ್ಷದ ಜಂಟಿ ಕಾರ್ಯದರ್ಶಿ ಕಾರ್ತಿಕ್ ಎಂ., ಜಿಲ್ಲಾಧ್ಯಕ್ಷ ಗಜೇಂದ್ರಕುಮಾರ್ ಗೌಡ, ನಗರ ಅದ್ಯಕ್ಷರಾದ ದಿನೇಶ್ ಬಾಬು ಇತರರು ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB