ಪಾವಗಡ: ತಾಲೂಕು ನಿಡಿಗಲ್ ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಜಿ.ಎಲ್.ಪಿ.ಎಸ್. ದೇವರಹಟ್ಟಿ ಶಾಲೆಯ ಹೆಂಚುಗಳು ಒಡೆದು ಹೋಗಿದ್ದು, ಇದರ ದುರಸ್ತಿಗೆ ಹಣ ಮಂಜೂರಾದರೂ ದುರಸ್ತಿ ಕಾರ್ಯ ನಡೆಸಿಲ್ಲ ಎಂದು ಎಸ್ ಡಿಎಂಸಿ ಸದಸ್ಯರು ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು.
ಶಾಲೆಯ ಮೇಲ್ಛಾವಣಿಯ ಹೆಂಚು ಒಡೆದು ಹೋಗಿ ವಿದ್ಯಾರ್ಥಿಗಳಿಗೆ ಓದುವ ವಾತಾವರಣ ವಿಲ್ಲದಂತಾಗಿದೆ. ಮೇಲ್ಛಾವಣಿಯ ಹೆಂಚುಗಳು ಹೋಗಿ ಶಾಲೆಯೊಳಗೆ ಬಿಸಿಲು ಬೀಳುತ್ತಿವೆ. ಇದರ ದುರಸ್ತಿಗೆ 1 ಲಕ್ಷ ರೂಪಾಯಿಗಳು ಮಂಜೂರಾಗಿದ್ದರೂ, ದುರಸ್ತಿ ಕಾರ್ಯ ನಡೆಸಲಾಗಿಲ್ಲ ಎಂದು ಪೋಷಕರು ಆರೋಪಿಸಿದರು.
ತಕ್ಷಣವೇ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹಾಗೂ ಶಾಲೆಯ ಅಧಿಕಾರಿಗಳು ಈ ಸಂಬಂಧ ಕ್ರಮಕೈಗೊಳ್ಳಬೇಕು. ಶಾಲಾ ಕೊಠಡಿಯ ಮೇಲ್ಛಾವಣಿಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಹಾಗೂ ಎಸ್ ಡಿಎಂಸಿಯವರು ಅಧ್ಯಕ್ಷರು ಪೋಷಕರು ಒತ್ತಾಯಿಸಿದ್ದಾರೆ.
ಈ ವೇಳೆ ಗ್ರಾಮಸ್ಥರಾದ ಪ್ರಭಾಕರ್, ಚಿತ್ತಣ್ಣ, ದೊಡ್ಡ ದಾಸಪ್ಪ, ಪೂಜಾರಪ್ಪ, ಈರಮುತ್ತಪ್ಪ, ಶಾರದಮ್ಮ, ಮಮತಾ ಮತ್ತಿತರರು ಭಾಗವಹಿಸಿದರು.
ವರದಿ: ನಂದೀಶ್, ಕೊತ್ತೂರು ನಿಡಗಲ್ ಹೋಬಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB