ತುಮಕೂರು: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಮೇ 2 ಮತ್ತು 3ರಂದು ಬೆಳಿಗ್ಗೆ 11 ಗಂಟೆಗೆ ಕಾಲಮಾನ ಪರಿಷ್ಕರಣಾ ಸಭೆ ನಡೆಯಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ತಿಳಿಸಿದ್ದಾರೆ.
ತುಮಕೂರು–ಕುಣಿಗಲ್ ಮತ್ತು ಶಿರಾ–ತುಮಕೂರು ವಲಯಕ್ಕೆ ಸಂಬಂಧಿಸಿದಂತೆ ಮೇ 2ರಂದು ಹಾಗೂ ತುಮಕೂರು–ಮಧುಗಿರಿ ಮತ್ತು ತುಮಕೂರು–ಚಿಕ್ಕನಾಯಕನಹಳ್ಳಿ ವಲಯಕ್ಕೆ ಸಂಬಂಧಿಸಿದಂತೆ ಮೇ 3ರಂದು ಸಭೆ ನಡೆಯಲಿದೆ.
ಹಿಂದಿನ ಸಭೆಯಲ್ಲಿ ಸ್ವೀಕೃತ ಅರ್ಜಿಗಳ ರಹದಾರಿ ಮಾಲೀಕರು ಅಥವಾ ಅವರ ಪರವಾಗಿ ಹಾಜರಾಗುವ ಪ್ರತಿನಿಧಿಗಳು ಮೂಲ ದಾಖಲಾತಿಗಳೊಂದಿಗೆ ಹಾಗೂ ರಹದಾರಿಯ ಪ್ರಸ್ತುತ ವೇಳಾಪಟ್ಟಿ ಮತ್ತು ಪ್ರಸ್ತಾಪಿತ ವೇಳಾಪಟ್ಟಿಯ ಪ್ರತಿಯೊಂದಿಗೆ ಸಭೆಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW
————————————