nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025
    Facebook Twitter Instagram
    ಟ್ರೆಂಡಿಂಗ್
    • ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ
    • ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ
    • ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು
    • ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!
    • ವನ್ಯಜೀವಿಗಳ ಚಲನೆ ಬಗ್ಗೆ ಎಚ್ಚರಿಕೆ ನೀಡಲು AI ಸೈರನ್ ಅಳವಡಿಕೆ!
    • ಜನರ ತೆರಿಗೆ ಹಣ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕಲು ಬಳಕೆ: ಬಿ.ವೈ.ವಿಜಯೇಂದ್ರ ಕಿಡಿ
    • ಒಂದೇ ವರ್ಷದಲ್ಲಿ 700 ಬಾಲ್ಯ ವಿವಾಹ: ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಸಿಎಂ ಸಿದ್ದರಾಮಯ್ಯ
    • ಶಿಕ್ಷಕನ ಅಮಾನತು ಪ್ರಕರಣ: ಸರ್ಕಾರಿ ನೌಕರರಿಗೆ ಪ್ರತಿಭಟನೆ ಅವಕಾಶವಿಲ್ಲ: ಸಚಿವ ಮಧು ಬಂಗಾರಪ್ಪ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕೊರಟಗೆರೆ | ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು: ಸಚಿವ ಡಾ.ಜಿ.ಪರಮೇಶ್ವರ
    ಕೊರಟಗೆರೆ April 23, 2025

    ಕೊರಟಗೆರೆ | ಪಟ್ಟಣ ಪಂಚಾಯಿತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು: ಸಚಿವ ಡಾ.ಜಿ.ಪರಮೇಶ್ವರ

    By adminApril 23, 2025No Comments2 Mins Read
    parameshwar

    ಕೊರಟಗೆರೆ: ಬಹುವರ್ಷದ ಪಟ್ಟಣದ ಜನರ ಕನಸಾಗಿರುವ ಪಪಂಯನ್ನು ಪುರಸಭೆಯನ್ನಾಗಿ ಮಾಡುವ ಪ್ರಸ್ತಾವನೆ ಈಗ ರಾಜ್ಯ ಸರಕಾರದ ಕೈಸೇರಿದೆ. ಪಪಂಯ 15ವಾರ್ಡುಗಳ ಸಮಗ್ರ ಅಭಿವೃದ್ದಿಗೆ ಮತ್ತೆ 25 ಕೋಟಿ ಅನುದಾನದ ಪ್ರಸ್ತಾವನೆಯ ರೂಪುರೇಖೆ ಸಿದ್ದವಿದೆ ಎಂದು ಪಪಂ ಸದಸ್ಯರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

    ಕೊರಟಗೆರೆ ಪಟ್ಟಣದ ಪಪಂ, ತೋಟಗಾರಿಕೆ ಮತ್ತು ಆರೋಗ್ಯ ಇಲಾಖೆಯಿಂದ ಏರ್ಪಡಿಸಲಾಗಿದ್ದ 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ, ಶಂಕುಸ್ಥಾಪನೆ ಮತ್ತು ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಪದವಿ ಪೂರ್ವ ಕಾಲೇಜಿನ 4 ಕೋಟಿಯ ಒಳಾಂಗಣ ಕ್ರೀಡಾಂಗಣ 40 ದಿನದೊಳಗೆ ಉದ್ಘಾಟನೆ ಮಾಡ್ತಿನಿ. ಕ್ರೀಡಾಂಗಣ ಅಭಿವೃದ್ದಿಗೆ ಮತ್ತೆ 3 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಕೊರಟಗೆರೆ ಪಟ್ಟಣದ ಸರ್ವೆ ನಂ.181ರಲ್ಲಿ 5 ಎಕರೆ ಭೂಮಿಯಲ್ಲಿ 100 ಸೈಟ್ ವಿಂಗಡಿಸಿ ಹಂಚುವ ಕೆಲಸ ಮಾಡ್ತೀವಿ. ಪಪಂ ಸದಸ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಬಡಜನರ ಅಭಿವೃದ್ದಿಗೆ ಶ್ರಮಿಸಬೇಕಿದೆ ಎಂದರು.


    Provided by

    ಕಡ್ಡಾಯ ಸಿಸಿಟಿವಿಗೆ ಸೂಚನೆ:

    ರಾಜ್ಯದ ಪ್ರತಿ ತಾಲೂಕಿನ ಸಾರ್ವಜನಿಕ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಅಳವಡಿಕೆಗೆ ಪೊಲೀಸ್ ಇಲಾಖೆಗೆ ಸರಕಾರ ಸೂಚಿಸಿದೆ. ಕೊರಟಗೆರೆ ಪಟ್ಟಣದ 28 ಕಡೆಗಳಲ್ಲೂ ಸಿಸಿ ಟಿವಿ ಅಳವಡಿಕೆಗೆ ಚಾಲನೆ ನೀಡಿದ್ದೇನೆ. ಸಿಸಿ ಟಿವಿ ಅಳವಡಿಕೆ ಪಪಂ, ಪುರಸಭೆ ಮತ್ತು ನಗರ ಸಭೆಗಳ ಜವಾಬ್ದಾರಿಯು ಆಗಿದೆ. ಕಾನೂನು ವಿರೋಧಿ ಚಟುವಟಿಕೆ ಮತ್ತು ಕ್ರೈಂ ಪ್ರಕರಣ ಬೇದಿಸಲು ಸಿಸಿ ಟಿವಿ ಬಹುಮುಖ್ಯ ಪಾತ್ರ ವಹಿಸಲಿದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಓ ಜಿ.ಪ್ರಭು, ಎಸ್ಪಿ ಅಶೋಕ್, ಪಪಂ ಪಿಡಿ ಯೋಗಾನಂದ, ವಿಶೇಷಾಧಿಕಾರಿ ಎಸ್.ನಾಗಣ್ಣ, ತಹಶೀಲ್ದಾರ್ ಮಂಜುನಾಥ, ಪಪಂ ಮುಖ್ಯಾಧಿಕಾರಿ ಉಮೇಶ್, ಪಪಂ ಅಧ್ಯಕ್ಷೆ ಅನಿತಾ,ಉಪಾಧ್ಯಕ್ಷೆ ಹುಸ್ಮಪಾರೀಯ, ಸ್ಥಾಯಿಸಮಿತಿ ಅಧ್ಯಕ್ಷೆ ಹೇಮಾಲತ, ಸದಸ್ಯರಾದ ಬಲರಾಮಯ್ಯ, ಓಬಳರಾಜು, ನಂದೀಶ್,ಲಕ್ಷ್ಮೀನಾರಾಯಣ್, ಭಾರತಿ,ಕಾವ್ಯ ರಮೇಶ್, ಪುಟ್ಟನರಸಪ್ಪ ಸೇರಿದಂತೆ ಇತರರು ಇದ್ದರು.

    ಪಟ್ಟಣ ಪಂಚಾಯಿತಿ ಕಾರ್ಯಕ್ರಮದ ಹೈಲೇಟ್ಸ್..

    * ತುಮಕೂರು ಜಿಲ್ಲೆಯಲ್ಲಿ 24 ನಮ್ಮ ಕ್ಲಿನಿಕ್ ಆರಂಭ.
    * ಪಪಂಯನ್ನ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಕ್ರಮ.
    * 15 ವಾರ್ಡುಗಳಿಗೆ 25 ಕೋಟಿ ಅನುಧಾನದ ರೂಪರೇಷು.
    * ಪಪಂ ಸದಸ್ಯರಿಂದ ಗೃಹ ಸಚಿವರಿಗೆ ಹಲವು ಬೇಡಿಕೆ.
    * ಕ್ರೀಡಾಂಗಣ ಅಭಿವೃದ್ದಿಗೆ 3 ಕೋಟಿ ರೂ ಅನುಧಾನ.
    * 3 ಕೋಟಿಯ 10 ಕಾಮಗಾರಿಕೆ ಗೃಹ ಸಚಿವರಿಂದ ಚಾಲನೆ.
    * ಕೊರಟಗೆರೆ ಪಟ್ಟಣದಲ್ಲಿ ಮೊದಲ ನಮ್ಮ ಕ್ಲಿನಿಕ್ ಪ್ರಾರಂಭ.

    ಎತ್ತಂಗಡಿ ಆಗ್ತೀಯಾ ಹುಷಾರ್:

    ಪಪಂಯಿಂದ ಪೌರ ಕಾರ್ಮಿಕರಿಗೆ 2 ವರ್ಷದ ಹಿಂದೆ ನಿರ್ಮಾಣ ಮಾಡಿರುವ ನಿವೇಶನ ಹಂಚಿಕೆ ಮಾಡಿಲ್ಲ ಏಕೆ. ನಿವೇಶನ ಹಂಚಿಕೆ ಕಾರ್ಯಕ್ರಮ 15 ದಿನದೊಳಗೆ ಮಾಡದಿದ್ರೇ ಪಪಂ ಮುಖ್ಯಾಧಿಕಾರಿ ನೀನು ಎತ್ತಂಗಡಿ ಆಗ್ತಿಯಾ. ಬೇಗ ನಿವೇಶನ ಹಂಚಿಕೆ ಆಗ್ಬೇಕು ಅಷ್ಟೆ. ಗುತ್ತಿಗೆದಾರನ ಜೊತೆ ನಾನು ಮಾತನಾಡ್ತಿನಿ ಎಂದು ಪಪಂ ಮುಖ್ಯಾಧಿಕಾರಿ ಉಮೇಶ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

    3 ಕೋಟಿಯ 10 ಕಾಮಗಾರಿಗೆ ಚಾಲನೆ:

    ಆರೋಗ್ಯ ಇಲಾಖೆಯ ನಮ್ಮ ಕ್ಲಿನಿಕ್, ತೋಟಗಾರಿಕೆ ಇಲಾಖೆ ಕಟ್ಟಡ, ಜೆಸಿಬಿ, ಆಟೋ ಟಿಪ್ಪರ್, ಡಸ್ಟ್ ಬೀನ್, ದಿನನಿತ್ಯದ ಮಾರುಕಟ್ಟೆ, ಹಳೇ ವಸತಿಗೃಹ ತೆರವು, ಕಲಾ ಮಂದಿರ, ಸಿಸಿಟಿವಿ, ಸಂತೆ ಮೈದಾನಕ್ಕೆ ಫೇನ್ಸಿಂಗ್ ಮತ್ತು ವಿಶೇಷ ಚೇತನರಿಗೆ ಸವಲತ್ತು ವಿತರಣೆ ಸೇರಿದಂತೆ 3ಕೋಟಿಗೂ ಅಧಿಕ ಅನುದಾನದಿಂದ 10ಕ್ಕೂ ಅಧಿಕ ಕಾಮಗಾರಿಗಳಿಗೆ ಗೃಹ ಸಚಿವ ಚಾಲನೆ ನೀಡಿದರು.

    ಗೃಹ ಸಚಿವರಿಗೆ ಪಪಂ ಸದಸ್ಯರ ಬೇಡಿಕೆ.

    ವೈಟ್ ಟಾಪಿಂಗ್ ಸಿಸಿ ರಸ್ತೆಯ ಪಾದಚಾರಿ ಮಾರ್ಗ, ಸ್ಮಶಾನದ ಟಿಎಸ್ ಪಿ ಅನುದಾನ ಬಳಕೆ, ರಂಗಮಂದಿರ, ಆಶ್ರಯ ನಿವೇಶನ ಹಂಚಿಕೆ, ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರ, ವಿದ್ಯುತ್ ಚಿತಗಾರ, ಸ್ವಚ್ಚ ಸುವರ್ಣಮುಖಿ ನದಿ ಅಭಿಯಾನ, 20ಕುಂಟೆ ಜಮೀನು ಸರಕಾರಿ ಶಾಲೆ ಜಮೀನು ರಕ್ಷಣೆ ಮತ್ತು ಅಭಿವೃದ್ದಿಗೆ ಅನುಧಾನ ನೀಡುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರಗೆ ಪಟ್ಟಣ ಪಂಚಾಯಿತಿ ಸದಸ್ಯರು ಬೇಡಿಕೆ ಇಟ್ಟರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    ————————————

    admin
    • Website

    Related Posts

    SSLC  ಮರು ಮೌಲ್ಯಮಾಪನ: ರವೀಂದ್ರ ಭಾರತಿ ಶಾಲೆಯ ಸೃಜನ್ ರಾಜ್ಯಕ್ಕೆ ಆರನೇ ರ‍್ಯಾಂಕ್ | ಶೈಕ್ಷಣಿಕ ಜಿಲ್ಲೆಗೆ ನಾಲ್ಕನೇ ಸ್ಥಾನ, ತಾಲ್ಲೂಕಿಗೆ ದ್ವಿತೀಯ ಸ್ಥಾನ ವಿಶೇಷ ಸಾಧನೆ

    May 25, 2025

    ಆಸ್ತಿ ತೆರಿಗೆ ಬಾಕಿ: ಕೊರಟಗೆರೆ ಶಿವಗಂಗಾ ಚಿತ್ರಮಂದಿರ, ಕಲ್ಯಾಣ ಮಂಟಪ ಜಪ್ತಿ

    May 24, 2025

    ವಿಜೃಂಭಣೆಯಿಂದ ನಡೆದ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

    May 20, 2025
    Our Picks

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಅಡುಗೆ ಎಣ್ಣೆ ದರ ಇಳಿಕೆ ಸಾಧ್ಯತೆ

    May 31, 2025

    ನಾನು ಪ್ರೀತಿಯಿಂದ ಹೇಳಿದ್ದೇನೆ: ಕನ್ನಡ ಬಗ್ಗೆ ಹೇಳಿಕೆಗೆ ಕಮಲ್ ಹಾಸನ್ ವಿವರಣೆ

    May 29, 2025

    ಪುಟಿನ್ ಹುಚ್ಚ: ರಷ್ಯಾ ಅಧ್ಯಕ್ಷ ವಿರುದ್ಧ ಟ್ರಂಪ್ ಕಿಡಿ

    May 26, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಎಚ್ಚೆತ್ತ ಪೊಲೀಸರು: ವಾಹನ ತಪಾಸಣೆಗೆ ಹೊಸ ನಿಯಮ ಬಿಡುಗಡೆ

    June 1, 2025

    ಬೆಂಗಳೂರು: ಮಂಡ್ಯದಲ್ಲಿ  ಟ್ರಾಫಿಕ್ ಪೊಲೀಸರ ಅಮಾನವೀಯ ವರ್ತನೆಗೆ 3 ವರ್ಷದ ಬಾಲಕಿ ಸಾವನ್ನಪ್ಪಿದ ಬಳಿಕ  ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ವಾಹನ…

    ಇಬ್ಬರು ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ ಮಹಿಳೆಗೆ 14 ವರ್ಷ ಜೈಲು ಶಿಕ್ಷೆ

    June 1, 2025

    ಕನ್ನಡವೇ ನನ್ನ ಮೊದಲ ಆದ್ಯತೆ: ಟೀಕಾಕಾರರಿಗೆ ಶಿವರಾಜ್ ಕುಮಾರ್ ತಿರುಗೇಟು

    June 1, 2025

    ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ!

    June 1, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.