ತುಮಕೂರು: ರಾಜ್ಯ ಸರಕಾರ ದಿವಾಳಿ ಆಗಿದ್ದು ಭಿಕ್ಷುಕರ ಸರಕಾರವಾಗಿದೆ. ಭಿಕ್ಷುಕರಿಗಾದರೂ ಭಿಕ್ಷೆ ಬೇಡಿದರೆ ಮಾನವೀಯತೆ ದೃಷ್ಟಿಯಲ್ಲಿ ಭಿಕ್ಷೆ ಸಿಗುತ್ತದೆ. ಆದರೆ ಕಾಲು ಹಿಡಿದ್ರೂ ಅಲ್ಲ ಕೈ ಹಿಡಿದ್ರೂ ಇಲ್ಲ. ಸಚಿವ ಪರಮೇಶ್ವರ್ ಹೇಳಿದ್ರು ಕಪ್ಪು ಬಾವುಟ ಹಾರಿಸಿ ಅನುದಾನ ಕೊಡುತ್ತಾರೆ, 25 ಕೋ ರೂ. ಕೊಡಿಸುತ್ತೇನೆ. ಅದು ಆಗಲಿಲ್ಲ, ಶಾಸಕರುಗಳು ಭಿಕ್ಷುಕರಿಗಿಂತ ಕಡೆಯಾಗಿದ್ದೇವೆ ಎಂದು ತುಮಕೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕತರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಾಸಕರೇ ಅನುದಾನ ಇಲ್ಲದೆ ಸೊರಗಿದ್ದಾರೆ, ಯಾವಾಗ ಈ ಸರಕಾರ ಹೋಗಲಿದೆ ಎನ್ನುತ್ತಿದ್ದಾರೆ.ಇಡೀ ಕನಾಟಕದಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೇ ಸ್ಥಿತಿ ಇದೆ. ಕುಣಿಗಲ್, ಮಧುಗಿರಿಯಲ್ಲಿರುವ ಶಾಸಕರಿಗೆ ತಾಕತ್ತಿದೆ ಅನುದಾನ ತರುತ್ತಿದ್ದಾರೆ ಎಂದರು.
ವಿರೋಧ ಪಕ್ಷದ ಶಾಸಕರಿಗೆ ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಅನುದಾನ ಕೊಟ್ಟಿದ್ದಾರೆ. ಕನಿಷ್ಟ ಅನುದಾನ ಕೂಡ ಬಂದಿಲ್ಲ. 420 ಸರಕಾರ, ದಿವಾಳಿ ಸರಕಾರವಾಗಿದೆ ಮತ್ತು ಬ್ರಷ್ಟಾಚಾರ ಮತ್ತು ಹಗರಣದ ಸರಕಾರವಾಗಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW