ಕೊರಟಗೆರೆ : ಸರಳತೆಯೊಂದಿಗೆ ಕರ್ತವ್ಯದಲ್ಲಿ ನಿಷ್ಠೆಯೊಂದಿಗೆ ಕಾರ್ಯನಿರ್ವಹಿಸಿ ನಿವೃತ್ತಿಯಾದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ರವರ ಕಾರ್ಯವೈಖರಿ ಮತ್ತೊಬ್ಬರಿಗೆ ಪ್ರೇರಣೆಯಾಗಿದೆ ಎಂದು ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯ ಮೀಟಿಂಗ್ ಹಾಲ್ ನಲ್ಲಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಜನಸ್ನೇಹಿ, ಪ್ರಾಮಾಣಿಕ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ್ ಗೆ ಕೊರಟಗೆರೆ ಸರ್ಕಾರಿ ಆಸ್ಪತ್ರೆ ಹಾಗೂ ಹೊಳೆನರಸೀಪುರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಂದ ನಿವೃತ್ತಿ ಬೀಳ್ಕೊಡುಗೆ ನಡೆಸಲಾಯಿತು.
ಹೊಳೆನರಸೀಪುರ ತಾಲೂಕು ಆಸ್ಪತ್ರೆಗೆ ಕರ್ತವ್ಯ ನಿರ್ವಹಿಸಿ ಕೊರಟಗೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ಲಕ್ಷ್ಮಿಕಾಂತ್ ರವರಿಗೆ ತಮ್ಮ ವೈದ್ಯಕೀಯ ವೃತ್ತಿಯಲ್ಲಿ 60 ವರ್ಷಗಳು ಪೂರೈಸಿದ್ದು, ಅವರಿಗೆ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವನ್ನು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಅದ್ದೂರಿಯಾಗಿ ನಡೆಸಿಕೊಟ್ಟರು.
ಜನಸ್ನೇಹಿ ಎಲ್ಲರ ನೆಚ್ಚಿನ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ್ ಅವರಿಗೆ ನಿವೃತ್ತಿ ಬೀಳ್ಕೊಡುಗೆ ಅದ್ದೂರಿಯಾಗಿ ನೆರವೇರಿಸಿ ಪುಷ್ಪ ಮಳೆಗಳನ್ನ ಹಾಕಿ ಸಿಹಿತಿನಿಸಿ ನೆಚ್ಚಿನ ಜನಸ್ನೇಹಿ ಅಧಿಕಾರಿಗೆ ಪ್ರತಿಯೊಬ್ಬ ವೈದ್ಯರು ಪ್ರೀತಿಯ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.
ನಿವೃತ್ತ ವೈದ್ಯಾಧಿಕಾರಿ ಡಾ.ಲಕ್ಷ್ಮಿಕಾಂತ ಮಾತನಾಡಿ, ನನ್ನ ವೈದ್ಯಕೀಯ ವೃತ್ತಿಯಲ್ಲಿ ಬಹಳಷ್ಟು ರೋಗಿಗಳನ್ನ ಕಂಡಿದ್ದೇನೆ, ಎಲ್ಲರ ಜೊತೆ ಪ್ರೀತಿಯಿಂದ ವರ್ತಿಸಿ ಅವರಿಗೆ ಬೇಕಾಗಿರುವ ಚಿಕಿತ್ಸೆಗಳನ್ನು ನೀಡಿದ್ದೇವೆ. ನನ್ನ ಹೊಳೇನರಸಿಪುರ ಹಾಗೂ ಕೊರಟಗೆರೆ ಎಲ್ಲ ಜನತೆಗೆ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.
ಡಾ. ಲಕ್ಷ್ಮಿಕಾಂತ್ ಪತ್ನಿ ಮಾತನಾಡಿ, ನಮ್ಮ ಮನೆ ಹಾಗೂ ಮಕ್ಕಳ ಜೊತೆ ಲಕ್ಷ್ಮಿಕಾಂತ್ ಡಾಕ್ಟರ್ ಇದ್ದದ್ದೇ ಕಡಿಮೆ. ಯಾವಾಗಲೂ ಆಸ್ಪತ್ರೆ ರೋಗಿಗಳ ಜೊತೆ ಇದ್ದದ್ದೇ ಜಾಸ್ತಿ ಅವರ ವೃತ್ತಿ ಜೀವನದಲ್ಲಿ ಮನೆಯಲ್ಲಿ ಇಲ್ಲವೇ ಇಲ್ಲ. ಪ್ರತಿದಿನವೂ ಆಸ್ಪತ್ರೆಯಲ್ಲಿ ಜೀವನ ಕಳೆದವರು ಅವರನ್ನ ಪತಿಯಾಗಿ ಪಡೆದ ನಾನೇ ಪುಣ್ಯವಂತಳು. ಜನರ ಸೇವೆಗಿಂತ ಬೇರೇನು ಇದೆ ಎನ್ನುತ್ತಾ ಬಂದವರು ಅವರು ಅದಕ್ಕಾಗಿ ಇಂದು ಅವರಿಗೆ ಜನಸ್ನೇಹಿ ಎನ್ನುವ ಬಿರುದು ಜನರು ಕೊಟ್ಟಿದ್ದಾರೆ ಅಷ್ಟೇ ಸಾಕು ನಮಗೆ ಎಂದು ತಿಳಿಸಿದರು.
ಡಿಡಿಓ ವೈದ್ಯರಾದ ಮೋಹನ್ ದಾಸ್ ಮಾತನಾಡಿ, ಡಾಕ್ಟರ್ ಲಕ್ಷ್ಮಿಕಾಂತ್ ಅವರ ಜೊತೆ ವೈದ್ಯರಾಗಿ ಕರ್ತವ್ಯ ನಿರ್ಮಿಸುವುದೇ ಪುಣ್ಯ ಕಿರಿಯರಾಗಲಿ ಹಿರಿಯರಾಗಲಿ ಎಲ್ಲರನ್ನೂ ಒಂದೇ ರೀತಿಯಾಗಿ ನೋಡಿಕೊಳ್ಳುತ್ತಾ ಪ್ರತಿಯೊಬ್ಬರಿಗೂ ವೈದ್ಯಕೀಯ ಸಲಹೆಗಳನ್ನು ನೀಡುತ್ತಾ ರೋಗಿಗಳ ಜೊತೆ ಸ್ನೇಹಿತನಂತೆ ಮಾತನಾಡುತ್ತಾ ಎಲ್ಲರನ್ನು ಗೌರವದಿಂದ ಕಂಡಂತಹ ಅಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತ್ ಅವರಿಗೆ ಇಂದು 60 ವರ್ಷಗಳು ಪೂರೈಸಿದ್ದು ನಿವೃತ್ತಿ ಹೊಂದುತ್ತಿದ್ದಾರೆ. ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಸಹಜವಾಗಿರುತ್ತದೆ. ಆದರೆ ನಾವು ಮಾಡಿದಂತಹ ಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಅಂತಹ ವೈದ್ಯರ ಪಟ್ಟಿಗೆ ಸೇರುವವರು ಡಾ.ಲಕ್ಷ್ಮಿಕಾಂತ್ ಎಂದು ಸಂತೋಷದಿಂದ ಹೇಳುತ್ತೇನೆ ಎಂದರು.
ಈ ವೇಳೆ ಸಂದರ್ಭದಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಸಿಬ್ಬಂದಿಗಳು ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW