ಕೊರಟಗೆರೆ: ತಾಲ್ಲೂಕಿನ ಮಾವತ್ತೂರು ಗ್ರಾಮ ಪಂಚಾಯತಿ ಕೊರಟಗೆರೆ ತಾಲೂಕಿನಲ್ಲಿಯೇ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿ ಕಾರ್ಯಗಳಲ್ಲಿ ಉತ್ತಮ ಪಂಚಾಯಿತಿ ಎಂದು ರಾಜ್ಯ ಮಟ್ಟದ ಪ್ರಶಸ್ತಿ ಬಂದಿದ್ದು ಕೆಲವರ ಸುಳ್ಳು ಹೇಳಿಕೆಗಳು ಮನಸ್ಸಿಗೆ ನೋವುಂಟು ಮಾಡಿದೆ ಎಂದು ಅಧ್ಯಕ್ಷೆ ಅನಿತಾಲಕ್ಷ್ಮಿ ನಾಗರಾಜು ಬೇಸರ ವ್ಯಕ್ತಪಡಿಸಿದರು.
ಮಾವತ್ತೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಂಚಾಯಿತಿ ಅಧ್ಯಕ್ಷೆ ಮತ್ತು ಹುರುಳುಗೆರೆ ಕ್ಷೇತ್ರದ ಸದಸ್ಯೆಯಾಗಿದ್ದು ಹುರುಳುಗೆರೆ ಗ್ರಾಮದ ಶಾಲೆಗೆ ಕಾಂಪೌಂಡ್, ಶೌಚಾಲಯ, ಸಿಸಿ ರಸ್ತೆ ಹಾಗೂ ಚರಂಡಿಗಳ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗಿದೆ, ಆದರೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹೊಲದಲ್ಲಿ ಮನೆ ಕಟ್ಟಿಕೊಂಡಿರುವ 12 ಮನೆಗಳ ಜನರು ಓಡಾಡಲು ಖಾಸಗಿ ಜಮೀನಿನಲ್ಲಿ ರಸ್ತೆ ಹಾದು ಹೋಗುವುದರಿಂದ ಹಲವಾರು ವರ್ಷಗಳಿಂದ ರಸ್ತೆ ಸಮಸ್ಯೆ ಇದೆ, ಈಗ ಆ ಸಮಸ್ಯೆಯನ್ನು ಜಮೀನು ಮಾಲೀಕರು ಮತ್ತು ಜನರು ಬಗೆಹರಿಕೊಂಡಿದ್ದು ರಸ್ತೆ ಮಾಡಿಕೊಡಲು ಪಂಚಾಯಿತಿಯು ಬದ್ದವಾಗಿದೆ, ಅದರೆ ಕೆಲವರು ವಿನಾಕಾರಣ ಯಾವ ಅಭಿವೃದ್ದಿಯೂ ಆಗಿಲ್ಲ ಎನ್ನುವ ಸುಳ್ಳು ಹೇಳಿಕೆಗಳನ್ನು ನೀಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದರು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ. ಮಂಜುನಾಥ್ ಮಾತನಾಡಿ, ಮಾವತ್ತೂರು ಗ್ರಾಮ ಪಂಚಾಯಿತಿಗೆ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ರವರು ಹಲವಾರು ಅನುದಾನಗಳನ್ನು ನೀಡಿದ್ದಾರೆ, ಪಂಚಾಯಿತಿ ವ್ಯಾಪ್ತಿಯ ಸಿಂಗಲೀಪುರದಿಂದ ಹುರುಳುಗೆರೆ ಹೋಗುವ ರಸ್ತೆಗೆ ಶಾಸಕರು 1.10 ಕೋಟಿ ರೂಗಳ ವಿಶೇಷ ಅನುದಾನವನ್ನು ನೀಡಿದ್ದಾರೆ, ಹುರುಳುಗೆರೆಯ ಜಮೀನಿಲ್ಲಿ ಕಟ್ಟಿಕೊಂಡಿರುವ 12 ಮನೆಗಳ ರಸ್ತೆ ಸಮಸ್ಯೆಯನ್ನು ಅವರೆ ಬಗೆ ಹರಿಸಿಕೊಂಡಿದ್ದು ಆ ಜಾಗವನ್ನು ರಸ್ತೆ ಮಾಡಿಕೊಡುವ ಕೆಲಸವನ್ನು ಪಂಚಾಯಿತಿ ಮಾಡುತ್ತದೆ, ಪ್ರತಿ ವರ್ಷದ ಆಕ್ಷನ್ ಪ್ಲಾನ್ ನಲ್ಲಿ ಹುರುಳುಗೆರೆ ಗ್ರಾಮದ ಅಭಿವೃದ್ದಿಗೆ ಮಾನ್ಯತೆ ಅನುದಾನ ಪಂಚಾಯಿತಿ ನೀಡುತ್ತಿದ್ದೆ ಅದರೆ ಅಧ್ಯಕ್ಷರ ಕ್ಷೇತ್ರವಾದ ಆ ಗ್ರಾಮದಲ್ಲಿ ವಯಕ್ತಿಕ ಕಾರಣಗಳನ್ನು ಇಟ್ಟುಕೊಂಡು ಗ್ರಾಮಕ್ಕೆ ಯಾವುದೇ ಅನುದಾನ ನೀಡಿಲ್ಲ ಎನ್ನು ಸುಳ್ಳು ಹೇಳಿಕೆ ಸಮಂಜಸವಲ್ಲ ಎಂದರು.
ಉಪಾಧ್ಯಕ್ಷ ನವೀನ್ ಕುಮಾರ್ ಮಾತನಾಡಿ, ನಮ್ಮ ಪಂಚಾಯಿತಿಯಲ್ಲಿ ಸಮಾರು 3500 ಮೀಟರ್ ಗಳಷ್ಟು ಹೊಸದಾಗಿ ಚರಂಡಿ ಕಾಮಗಾರಿಗಳನ್ನು ಮಾಡಲಾಗಿದೆ, 500 ಮೀಟರ್ ಗಳಷ್ಟು ಸಿ ಸಿ ರಸ್ತೆ ಮಾಡಲಾಗಿದೆ, ಇದರೊಂದಿಗೆ ಶಾಲಾ ಕಾಲೇಜುಗಳ ಕಾಮಗಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸದಕ್ಕಾಗಿ ನಮಗೆ ಸರ್ಕಾರದಿಂದ ಎನ್.ಆರ್.ಯಿ.ಜಿ ಅಡಿಯಲ್ಲಿ 2025—26 ಸಾಲಿನ ಉತ್ತಮ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿದೆ, ಪಂಚಾಯಿತಿಯಲ್ಲಿ ಕೆಲಸವೇ ಆಗಿಲ್ಲ ಶಾಸಕರು ಅನುದಾನ ನೀಡಿಲ್ಲ ಎಂಬುವ ಸುಳ್ಳು ಹೇಳಿಕೆಗಳು ಒಳ್ಳೆಯ ಬೆಳವಣಿಗೆಗಳು ಅಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಮಾರ್, ಮಹಾಲಿಂಗಯ್ಯ ಸೇರಿದಂತೆ ಕೆಲ ಸದಸ್ಯರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC