ಪಾವಗಡ: ತಾಲೂಕು ನಿಡಗಲ್ಲು ಹೋಬಳಿ ಸಿ.ಕೆ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೊತ್ತೂರು ಗ್ರಾಮದಲ್ಲಿ ಸಮಾಜಸೇವಕ ನೆರಳೆಕುಂಟೆ ನಾಗೇಂದ್ರಪ್ಪ ಈ ಗ್ರಾಮಗಳ ಅಭಿವೃದ್ಧಿಯ ಸ್ಥಿತಿಗತಿಗಳ ಬಗ್ಗೆ ವೀಕ್ಷಣೆಯನ್ನು ಮಾಡಿದರು.
ಬಳಿಕ ಕೊತ್ತೂರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಗ್ರಾ. ಪಂ.ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಗ್ರಾಮದ ಅಭಿವೃದ್ಧಿಯ ಜೊತೆಗೆ ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಅಧ್ಯಕ್ಷ ಕರಿಬಸಪ್ಪ ಮಾತನಾಡಿ, ತಾಲೂಕಿನ ನಾಗೇಂದ್ರಪ್ಪನವರು ಸಮಾಜ ಸೇವೆಯಲ್ಲಿ ತಾಲೂಕಿನ ಎಲ್ಲಾ ಜನರಿಗೂ ಚಿರಪರಿಚಿತರಾಗಿದ್ದಾರೆ. ಇವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅವರಿಗೆ ಎಲ್ಲ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಗ್ರಾಮದ ಪಂಚಾಯಿತಿ ಉಪಾಧ್ಯಕ್ಷರಾದ ಜೈರಾಮ್ ಮಾತನಾಡಿ, ಸಮಾಜಸೇವಕರಾದ ನೇರಳೆಕುಂಟೆ ನಾಗೇಂದ್ರಪ್ಪನವರ ಗುರುತು ಯಾವುದೇ ಆಗಿರಲಿ. ಕೊತ್ತೂರಿನ ನಮ್ಮ ಅಣ್ಣತಮ್ಮಂದಿರು ಅಕ್ಕ ತಂಗಿಯರು ನಾವು ಎಲ್ಲಾ ಸೇರಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.
ವರದಿ: ನಂದೀಶ್ ಕೊತ್ತೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB