ಕೊಡಿಗೇನಹಳ್ಳಿ: ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಉದ್ಯೋಗ ಮಾಡುತ್ತಿದ್ದ ಹೋಬಳಿಯ ತೆರಿಯೂರು ಗ್ರಾಮದ ಟಿ.ಎನ್. ನಾಗಭೂಷಣ್ ಎಂಬವರು ಕೋವಿಡ್ ಸಂದರ್ಭದಲ್ಲಿ ಗ್ರಾಮಕ್ಕೆ ಮರಳಿದ್ದರು. ಇದೀಗ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಏಲಕ್ಕಿ ಬಾಳೆ ಬೆಳೆದು ಲಾಭ ಗಳಿಸಿದ್ದಾರೆ.
ತಮ್ಮ ಆರು ಎಕರೆ ಜಮೀನಿನ ಜೊತೆಗೆ 10 ಎಕರೆ ಜಮೀನನ್ನು ಬೋಗ್ಯಕ್ಕೆ ಪಡೆದರು. ಅದರಲ್ಲಿ ಕನಕಾಂಬರ, ಟೊಮೆಟೊ, ಕುರಿ ಸಾಕಾಣಿಕೆಗೆ ಮೆಕ್ಕೆಜೋಳದ ಸಪ್ಪೆ ಬೆಳೆಯುತ್ತಿದ್ದಾರೆ. ನಾಲ್ಕು ಎಕರೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ‘ಗುಂಪು ಬಾಳೆಯಾಗಿರುವುದರಿಂದ ವರ್ಷಪೂರ್ತಿ ಬಾಳೆಗೊನೆ ದೊರೆಯುತ್ತದೆ. ಹಾಗಾಗಿ ಪ್ರತಿವರ್ಷ ಖರ್ಚು ಹೋಗಿ ಎಕರೆಗೆ 75ರಿಂದ 76 ಲಕ್ಷ ಲಾಭ ದೊರಕುತ್ತಿದೆ ಎಂದು ನಾಗಭೂಷಣ್ ಹೇಳುತ್ತಾರೆ.
ನಾಲ್ಕು ವರ್ಷದ ಹಿಂದೆ ಬಾಳೆಗೆಡ್ಡೆ ಖರೀದಿಸಿ ನಾಟಿ ಮಾಡುವ ಸಂದರ್ಭದಲ್ಲಿ ಮೂರು ಅಡಿ ಆಳದ ಕುಣಿಯಲ್ಲಿ ಹೊಂಗೆ, ಎಕ್ಕ ಹಾಗೂ ತಂಗಡೆ ಸೊಪ್ಪನ್ನು ಹಾಕಿಸಿದ್ದೆ. ನಂತರ ಗಿಡಗಳಿಗೆ ಕಡಿಮೆ ರಸಗೊಬ್ಬರದ ಜೊತೆಗೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ನೀಡುತ್ತಿರುವುದರಿಂದ ಬಾಳೆ ತೋಟ ಚೆನ್ನಾಗಿ ಬಂದಿದೆ ಎಂದಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಕೆ.ಜಿಗೆ 790ರಿಂದ 794 ಇದ್ದ ಬೆಲೆ ಈಗ ಕೆ.ಜಿ.ಗೆ 760ಕ್ಕೆ ಇಳಿದಿದೆ. ಈ ವರ್ಷ ಕೆಲವೊಂದು ಬಾಳೆಗೊನೆ 24ರಿಂದ 25 ಕೆಜಿ ವರೆಗೆ ತೂಕ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC