nammatumakuru

    Subscribe to Updates

    Get the latest creative news from FooBar about art, design and business.

    What's Hot

    ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ?: ಕೆ.ಎನ್.ರಾಜಣ್ಣ ಪ್ರಶ್ನೆ

    October 19, 2025

    ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ

    October 19, 2025

    ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ

    October 19, 2025
    Facebook Twitter Instagram
    ಟ್ರೆಂಡಿಂಗ್
    • ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ?: ಕೆ.ಎನ್.ರಾಜಣ್ಣ ಪ್ರಶ್ನೆ
    • ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ
    • ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ
    • ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ: ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ
    • ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ: ಕತ್ತಲಿನಿಂದ ಬೆಳಕಿನ ಕಡೆಗೆ
    • ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರೆ: ಶಾಸಕ ಅನಿಲ್ ಚಿಕ್ಕಮಾದು
    • ಬೆಂಗಳೂರು | ಸಂಚಾರ ಗಸ್ತು ವಾಹನಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
    • ಮಕ್ಕಳ ಪ್ರತಿಭೆಗೆ ವೇದಿಕೆ: ತುಮಕೂರಿನಲ್ಲಿ ನ.22ರಂದು ಚಿನ್ನರ ಚಪ್ಪರ: ನೋಂದಣಿ ಆರಂಭ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಸರಗೂರು:  ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಕೊನೆಗೂ ಸೆರೆ
    ಜಿಲ್ಲಾ ಸುದ್ದಿ October 19, 2025

    ಸರಗೂರು:  ರೈತನ ಮೇಲೆ ದಾಳಿ ನಡೆಸಿದ್ದ ಹುಲಿ ಕೊನೆಗೂ ಸೆರೆ

    By adminOctober 19, 2025No Comments3 Mins Read
    tiger capture in sargur

    ವರದಿ: ಹಾದನೂರು ಚಂದ್ರ

    ಸರಗೂರು: ತಾಲೂಕಿನ ಬಡಗಲುಪುರ ಗ್ರಾಮದ ರೈತನ ಮೇಲೆ ದಾಳಿ ನಡೆಸಿ ಕಾಡಿನತ್ತ ಓಡಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.


    Provided by
    Provided by
    Provided by

    ಕಳೆದ ಒಂದು ವಾರದಿಂದ ಬಡಗಲುಪುರ, ಹಾದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಜನರ ಆತಂಕ್ಕೆ ಕಾರಣವಾಗಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ ಶುಕ್ರವಾರ ಕಾಡಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಆನೆಗಳನ್ನು ಕಂಡು ಗಾಬರಿಯಿಂದ ಕಾಡಿನತ್ತ ಓಡುತ್ತಿದ್ದ ಹುಲಿ, ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ರೈತ ಮಹದೇವಗೌಡ ಎಂಬವರ ಮೇಲೆ ದಾಳಿ ಮಾಡಿ ಆತನ ಮುಖ ಭಾಗಕ್ಕೆ ಗಂಭೀರ ಗಾಯ ಮಾಡಿತ್ತು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಜನರು ಹುಲಿಯನ್ನು ಸೆರೆ ಹಿಡಿಯಲೇಬೇಕು ಎಂದು ಪಟ್ಟುಹಿಡಿದಿದ್ದರು.

    ನಂತರ ಶನಿವಾರ ಬೆಳಗ್ಗೆ ಮಹೇಂದ್ರ, ಅಭಿಮನ್ಯು, ಭೀಮ, ಭಗೀರಥ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಯು ಯಾಡಿಯಾಲ ಸಮೀಪದ ಜಮೀನುವೊಂದರಲ್ಲಿ ಹುಲಿ ಇರುವ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಕ್ಯಾಮೆರಾ ಟ್ರಾಪ್ ಗಳ ಮೂಲಕ ಖಚಿತ ಮಾಹಿತಿ ಪಡೆದು ಎರಡು ಡ್ರೋನ್ ಗಳ ನೆರವಿನಿಂದ ಹುಲಿ ಇರುವ ಸ್ಥಳ ಪತ್ತೆಹಚ್ಚಿ, ಬಳಿಕ ಪಶುವೈದ್ಯ ಡಾ.ವಸೀಂ ಮಿರ್ಜಾ, ಡಾ.ರಮೇಶ್, ಶಾರ್ಪ್ ಶೂಟರ್ ರಂಜನ್ ಸಾಕಾನೆಗಳ ಮೇಲೆ ಹೋಗಿ ಹುಲಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

    ಕಳೆದ ಕೆಲ ದಿನಗಳಿಂದಲೂ ಹುಲಿ ಸೆರೆಗಾಗಿ ಅರಣ್ಯ ಇಲಾಖೆಯು ವಿವಿಧ ತಂಡಗಳನ್ನು ರಚಿಸಿಕೊಂಡು ಮೂರು ಕಡೆಗಳಲ್ಲಿ ಬೋನಿ ಇರಿಸಿ ಬಲೆ ಬೀಸಿತ್ತು. ಇಷ್ಟಿದ್ದರೂ ಸೆರೆಯಾಗದ ಹುಲಿ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಿದ ಅರಣ್ಯ ಇಲಾಖೆ, ಕ್ಯಾಮೆರಾ ಟ್ರಾಪ್ ಅಳವಡಿಸಿತ್ತು. ಶನಿವಾರ ಮಧ್ಯಾಹ್ನದ ವೇಳೆಗೆ ಹುಲಿ ಇರುವ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಹುಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

    ಸದ್ಯ ಇದು 3 ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು, ಗಾಯಗೊಂಡಿದೆ ಎನ್ನಲಾಗಿದೆ. ಸದ್ಯ ಈ ಹುಲಿ ಸೆರೆಗೆ ಬಂಡೀಪುರ ವ್ಯಾಪ್ತಿಯ ಬಡಗಲುಪುರ ಗ್ರಾಮದ ಅಕ್ಕಪಕ್ಕದ ವಲಯಗಳ ಸಿಬ್ಬಂದಿಗಳೂ ಸೇರಿ ಸುಮಾರು 65–70 ಮಂದಿ ಸಿಬ್ಬಂದಿ, ಡ್ರೋನ್ ಕ್ಯಾಮೆರಾ ತಂಡ ಹಾಗೂ ಪಶುವೈದ್ಯರು ಜತೆಗೆ ಸ್ಥಳೀಯ ಜನರ ಸಹಕಾರದಿಂದ ಸೆರೆ ಹಿಡಿಯಲಾಗಿದ್ದು, ಹುಲಿಯ ಆರೈಕೆಗಾಗಿ ಬನ್ನೇರುಘಟ್ಟ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಸಂಬಂಧ ಸಿಬ್ಬಂದಿಗಳ ತಂಡವನ್ನು ರಚಿಸಿ ನಿರಂತರವಾಗಿ ಕೂಂಬಿಂಗ್ ಕಾರ್ಯ ನಡೆಸಿದ್ದು 3 ಕಡೆ ಬೋನುಗಳನ್ನು ಇರಿಸಲಾಗಿರುತ್ತದೆ. ಇದರ ಫಲವಾಗಿ ಶನಿವಾರ ರಂದು ಬೆಳಿಗೆ, 08 ಗಂಟೆಯಲ್ಲಿ ಬಡಗಲಪುರ ರೈತರ ಜಮೀನಲ್ಲಿ ಬಳಿ ಅಳವಡಿಸಲಾಗಿದ್ದ ಬೋನಿನಲ್ಲಿ ಹುಲಿಯು ಸೆರೆಯಾಗಿದ್ದು, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ನಿರ್ದೇಶಕರು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಂಡೀಪುರ ರವರ ಮಾರ್ಗದರ್ಶನದಲ್ಲಿ ಇಲಾಖಾ ಪಶುವೈದ್ಯಾಧಿಕಾರಿ ವಸಿಂ ಮಿರ್ಜಾ ರವರ ನೇತೃತ್ವದಲ್ಲಿ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಹುಲಿಯನ್ನು ಸುರಕ್ಷಿತವಾಗಿ ಹಿಡಿಯಲಾಗಿದ್ದು, ಹುಲಿಯು ಹೆಣ್ಣಾಗಿದ್ದು, ಅಂದಾಜು 3 ವಯಸ್ಸು ಆಗಿರಬಹುದೆಂದು ಅಂದಾಜಿಸಲಾಗಿರುತ್ತೆ ಎಂದು ನುಗು ಅರಣ್ಯ ಇಲಾಖೆ ಅಧಿಕಾರಿ ವಿವೇಕ್ ತಿಳಿಸಿದರು.

    ಇದೇ ವೇಳೆ ಮಾತನಾಡಿದ ಬಡಗಲುಪುರ ಗ್ರಾಪಂ ಸದಸ್ಯ ಗಂಗಾಧರ್, ಕಳೆದ ಎರಡು ತಿಂಗಳಿನಿಂದ ಹುಲಿ ಉಪಟಳ ನೀಡುತ್ತಿತ್ತು. ಆಗಾಗ್ಗೆ ಜಾನುವಾರುಗಳನ್ನು ಕೊಂದು ನಾವು ಜಮೀನುಗಳಿಗೆ ಹೋಗಲಾರದಂತಹ ಸ್ಥಿತಿ ನಿರ್ಮಾಣವಾಗುವಂತೆ ಮಾಡಿತ್ತು. ಸದ್ಯ ಅರಣ್ಯ ಇಲಾಖೆ ತುಂಬ ಉತ್ಸುಕತೆಯಿಂದ ಹುಲಿ ಸೆರೆ ಹಿಡಿದಿದ್ದು, ಗ್ರಾಮಸ್ಥರಿಗೆ ಸಮಾಧಾನ ತರಿಸಿದೆ. ಇನ್ನು ಹುಲಿ ದಾಳಿಯಿಂದ ಗಾಯಗೊಳಗಾಗಿರುವ ರೈತ ಮಹದೇವಗೌಡ ಅವರಿಗೂ ಇಲಾಖೆ ಸೂಕ್ತ ಪರಿಹಾರ ನೀಡುವ ಮೂಲಕ ಅವರ ಜೀವನಕ್ಕೆ ಆಧಾರ ಕಲ್ಪಿಸಬೇಕು ಎಂದರು.

    ಇದೇ ವೇಳೆ ಬಂಡೀಪುರ ಸಿಎಫ್ ಪ್ರಭಾಕರನ್, ಎಸಿಎಫ್ ಕೆ.ವಿ.ಸತೀಶ್, ಆರ್ ಎಫ್ ಒಗಳಾದ ವೈರಮುಡಿ, ರಾಜೇಶ್, ಅಮೃತೇಷ್, ರಾಮಾಂಜನೇಯ, ಅಮೃತಾ, ಮುನಿರಾಜು, ವಿವೇಕ್, ಶಾರ್ಪ್ ಶೂಟರ್ ರಂಜನ್, ಬಿ.ಎಸ್. ಗಂಗಾಧರ್, ಬಿ.ಆರ್.ನಟರಾಜು, ಬಿ.ಕೆ.ಶಿವರಾಜು, ಅಂಗಡಿ ಶಿವರಾಜು, ಲಿಂಗರಾಜು, ಪಿ.ರಾಜೀವ್, ರಾಮಚಂದ್ರ, ಕೂಸೇಗೌಡ, ರಮೇಶ್, ರಾಮಚಂದ್ರ ಹಾಜರಿದ್ದರು.

    ಹುಲಿ ಸೆರೆಗೆ ಎರಡು ಬಾರಿ ಕಾರ್ಯಾಚರಣೆ ಮಾಡಿ ವಿಫಲವಾಗಿತ್ತು. ಈಗ ಎಲ್ಲರ ಸಹಕಾರದಿಂದ ಹುಲಿ ಸೆರೆಯಾಗಿದೆ. ಗ್ರಾಮಸ್ಥರೂ ಎಚ್ಚರಿಕೆಯಿಂದಿರಬೇಕು. ಒಬ್ಬೊಬ್ಬರೆ ಜಮೀನುಗಳಿಗೆ ಹೋಗಬಾರದು. ಜನರು ಆತಂಕ ಪಡುವುದು ಬೇಡ. ನಾವೂ ತರ್ತಾಗಿ ಕೆಲಸ ಮಾಡುತ್ತೇವೆ. ತಕ್ಷಣಕ್ಕೆ ಆನೆಗಳನ್ನೂ ಕರೆಸುವ ಪ್ರಯತ್ನ ಮಾಡುತ್ತೇವೆ. ಹುಲಿ ಸೆರೆ ಹಿಡಿಯಬೇಕಾದ ಅನಿವಾರ್ಯತೆ ಬಂದಾಗ ತಕ್ಷಣ ಕ್ರಮಕೈಗೊಳ್ಳುತ್ತೇವೆ.

    — ಪ್ರಭಾಕರನ್, ಸಿಎಫ್, ಬಂಡೀಪುರ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಿದ್ದರಾಮಯ್ಯ ಅವರು ಐದು ವರ್ಷ ಪೂರೈಸುತ್ತಾರೆ: ಶಾಸಕ ಅನಿಲ್ ಚಿಕ್ಕಮಾದು

    October 19, 2025

    ಬೆಳೆ ಹಾನಿ ಪರಿಹಾರಕ್ಕಾಗಿ ಆಗ್ರಹಿಸಿ ಶಾಸಕ ಶರಣು ಸಲಗರ್‌ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ

    October 18, 2025

    ಗೂಡ್ಸ್ ಪಲ್ಟಿಯಾಗಿ ಕಾರ್ಮಿಕರಿಗೆ ಗಾಯ ಪ್ರಕರಣ: ಜೆಡಿಎಸ್ ಮುಖಂಡ ಕೃಷ್ಣನಾಯಕ ಆಸ್ಪತ್ರೆಗೆ ಭೇಟಿ

    October 18, 2025

    Leave A Reply Cancel Reply

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ?: ಕೆ.ಎನ್.ರಾಜಣ್ಣ ಪ್ರಶ್ನೆ

    October 19, 2025

    ತುಮಕೂರು: ಈದ್ಗಾ ಮೈದಾನ, ರಸ್ತೆಯಲ್ಲಿ ನಮಾಜ್ ಮಾಡಲು ಮುಸ್ಲಿಮರು ಅನುಮತಿ ಪಡೆದುಕೊಳ್ಳುತ್ತಾರೆಯೇ? ಇದನ್ನು ತಡೆಯಲು ಸಾಧ್ಯವಿದೆಯೇ? ಎಂದು ಶಾಸಕ ಕೆ.ಎನ್.ರಾಜಣ್ಣ…

    ಆರ್‌ ಎಸ್‌ ಎಸ್  ಶತಮಾನೋತ್ಸವ: ತುಮಕೂರಿನಲ್ಲಿ ಪಥ ಸಂಚಲನ

    October 19, 2025

    ಸಹಕಾರ ಕ್ಷೇತ್ರ: ದೇಶಕ್ಕೆ ಮಾದರಿ ಆಗುವಂತಹ ಕಾಯ್ದೆ ಜಾರಿಗೆ ತರಲಾಗಿದೆ: ಕೆ.ಎನ್.ರಾಜಣ್ಣ

    October 19, 2025

    ಶ್ರೀ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ: ಲಿಂಗಕ್ಕೆ ಕೊಳಗ ಪ್ರತಿಷ್ಠಾಪನೆ

    October 19, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.