ಪಾವಗಡ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪಾವಗಡ ಸಮಿತಿ ವತಿಯಿಂದ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬೃಹತ್ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಇದೇ ವೇಳೆ ಮಾತನಾಡಿದ ಎಚ್.ವಿ. ವೆಂಕಟೇಶ್, ಕೆ.ಎಸ್. ಈಶ್ವರಪ್ಪ ಅವರು ರಾಜ್ಯ ಸರ್ಕಾರದ ಸಚಿವರಾಗಿ ರಾಜ್ಯದ ಹಾಗೂ ದೇಶದ ಘನತೆಯನ್ನು ಕಾಪಾಡಬೇಕು. ಆದರೆ, ತ್ರಿವರ್ಣ ಧ್ವಜವದ ಹಾರಾಡುವ ಜಾಗದಲ್ಲಿ ಕೇಸರಿ ಧ್ವಜವನ್ನು ಆರಿಸುತ್ತೇನೆ ಎಂದು ದೇಶದ್ರೋಹಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸುದೇಶ್ ಕುಮಾರ್ ಜಿ. ಮಾತನಾಡಿ, ಶಾಂತಿಯುತ ರಾಷ್ಟ್ರ ಹಾಗೂ ಜಾತ್ಯತೀತ ರಾಷ್ಟ್ರದಲ್ಲಿ ಶಾಂತಿ ಕದಡುವ ಕೆಲಸಕ್ಕೆ ರಾಜ್ಯ ಸರ್ಕಾರದ ಸಚಿವರಾದ ಕೆ.ಎಸ್ .ಈಶ್ವರಪ್ಪರವರು ಮುಂದಾಗಿದ್ದು, ತ್ರಿವರ್ಣ ಧ್ವಜದ ಬಗ್ಗೆ ಇಲ್ಲಸಲ್ಲದ ಗೊಂದಲ ಹೇಳಿಕೆ ನೀಡಿ, ದೇಶದಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ. ಇಂತಹ ಸಚಿವರನ್ನು ರಾಜ್ಯಪಾಲರು ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಪುರಸಭೆ ಅಧ್ಯಕ್ಷೆ ಗಂಗಮ್ಮ,ಮಾಜಿ ಪುರಸಭೆ ಅಧ್ಯಕ್ಷರು ಶಂಕರ ರೆಡ್ಡಿ. ಎ ಪಿ ಎಂ ಸಿ ಮಾಜಿ ಅಧ್ಯಕ್ಷರು ಮಾರಪ್ಪ. ಮಾಜಿ ಪುರಸಭೆ ಅಧ್ಯಕ್ಷರು ಗುರಪ್ಪ . ಟೆಂಕಾಯಲ ರವಿ,ರಾಜೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಸುಜಿತ್,ನಗರ ಅಧ್ಯಕ್ಷ ಮಹೇಶ್ ಎನ್, ಶಂಶುದ್ದೀನ್ , ಎನ್ ಆರ್ ಅಶ್ವಥ್ ಮೈಲಪ್ಪ, ಪುರಸಭೆ ಮಾಜಿ ಅಧ್ಯಕ್ಷರು ರಾಮಂಜಿನಪ್ಪ, ಬಾಲಸುಬ್ರಮಣ್ಯ , ನಾಗರಾಜು ಐ.ಜಿ, ಸಣ್ಣ ರಾಮರೆಡ್ಡಿ, ಶಾ ಬಾಬು, ಅಹಮದ್, ಯುವ ಮುಖಂಡ ವೆಂಕಟಮ್ಮನಹಳ್ಳಿ ನಾನಿ, ಮುತ್ಯಾಲಪ್ಪ, ಹನುಮಂತರಾಯಪ್ಪ, ಚನ್ನಕೇಶವ. ಕರಿಯಮ್ಮನ ಪಾಳ್ಯ ಓಂಕಾರ್ ನಾಯಕ, ಪಾಪಣ್ಣ ವಿ ಹೆಚ್ ಪಾಳ್ಯ,ಹನುಮೇಶ್, ಗೋವಿಂದ್ ಯಾದವ್, ಬಿಂದು ಮಾಧವ ರಾವ್, ಮದನ್, ಮಂಜುನಾಥ್ ರಾಜವಂತಿ, ಸುಮನ್, ಮದನ್ ರೆಡ್ಡಿ, ಸ್ಟುಡಿಯೋ ಅಮರ್, ರವಿ ರಾಮಯ್ಯನಪಾಳ್ಯ, ಕಳರಾಜನಹಳ್ಳಿ ಗುರು, ವಿರ್ಲಗೊಂದಿ ರಾಮು ಸೇರಿ ಮುಂತಾದವರು ಭಾಗವಹಿಸಿದ್ದರು.
ವರದಿ: ರಾಮಪ್ಪ ಸಿ.ಕೆ.ಪುರ, ಪಾವಗಡ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB