ಬೆಂಗಳೂರು: ಶಕುನ, ಕಾಲ ಹಾಗೂ ಆಹಾರ ಪದ್ಧತಿಯ ವಿಚಾರವಾಗಿ ಸದಾ ತಮ್ಮದೇ ಆದ ನೇರ ನಿಲುವು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
“ಯುಗಾದಿ ಅಥವಾ ಶಿವರಾತ್ರಿಯಂದೂ ನಾನು ಮಾಂಸ ಸೇವನೆ ಮಾಡುತ್ತೇನೆ. ಹಬ್ಬವನ್ನು ಮನೆಯಲ್ಲಿ ಮಾಡುತ್ತಾರೆ, ಆದರೆ ನನ್ನಿಷ್ಟದ ಆಹಾರ ಸೇವಿಸಲು ನನಗೆ ಸ್ವಾತಂತ್ರ್ಯವಿದೆ” ಎಂದು ಸಿಎಂ ಘೋಷಿಸಿದರು.
ಬಜೆಟ್ ಮಂಡನೆಯ ಸಮಯದ ಕುರಿತು ಚರ್ಚೆ ನಡೆದಾಗ, “ನಾನು ಯಾವುದೇ ರಾಹುಕಾಲ ಅಥವಾ ಗುಳಿಕಾಲ ನೋಡುವುದಿಲ್ಲ. ನನಗೆ ಅಂತಹ ಆಚರಣೆಗಳಲ್ಲಿ ನಂಬಿಕೆಯೂ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಈ ಬಾರಿ ರಾಹುಕಾಲ ಮುಗಿದ ನಂತರ ಬಜೆಟ್ ಮಂಡಿಸಿದ್ದನ್ನು ಪ್ರಶ್ನಿಸಿದ ಆರ್. ಅಶೋಕ್ ಅವರಿಗೆ ಉತ್ತರಿಸಿದ ಸಿಎಂ, “ನನ್ನ ಮನೆಯವರು ಹಾಗೂ ಅಧಿಕಾರಿಗಳು ರಾಹುಕಾಲದಲ್ಲಿ ಬೇಡ ಎಂದು ಸಲಹೆ ನೀಡಿದ್ದರು. ಪ್ರಜಾಪ್ರಭುತ್ವದಲ್ಲಿ ಎಲ್ಲರ ಅಭಿಪ್ರಾಯಕ್ಕೂ ಬೆಲೆ ಕೊಡಬೇಕಲ್ಲವೇ? ಹಾಗಾಗಿ ಅವರ ಮಾತಿಗೆ ಗೌರವ ನೀಡಿ ಸಮಯ ಬದಲಿಸಿದೆ ಅಷ್ಟೇ,” ಎಂದರು.
ಇದೇ ಸಂದರ್ಭದಲ್ಲಿ ತಾವಿಂದು ಧರಿಸಿದ್ದ ಶಲ್ಯದ ಬಗ್ಗೆ ಮಾತನಾಡಿದ ಅವರು, “ನಾನು ಮೊದಲು ಟವೆಲ್ ಹಾಕುತ್ತಿದ್ದೆ, ಆದರೆ ಬಗ್ಗಿದಾಗ ಅದು ಬಿದ್ದು ಹೋಗುತ್ತಿತ್ತು. ಈಗ ಧರಿಸಿರುವ ಈ 13 ಸಾವಿರ ರೂಪಾಯಿ ಬೆಲೆಯ ಶಲ್ಯವನ್ನು ಡಿ.ಕೆ. ಶಿವಕುಮಾರ್ ಅವರು ತಂದುಕೊಟ್ಟಿದ್ದು” ಎಂದು ಮಾಹಿತಿ ಹಂಚಿಕೊಂಡರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರ ಈ ಮಾತುಗಳು ಸದನದಲ್ಲಿ ಲವಲವಿಕೆ ಹಾಗೂ ಅಚ್ಚರಿಯನ್ನು ಮೂಡಿಸಿದವು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


