ಯಾದಗಿರಿ: ಅತ್ತೆ–ಸೊಸೆಯ ಸಂಬಂಧ ಎಂದರೆ ಜಗಳ, ಭಿನ್ನಾಭಿಪ್ರಾಯಗಳೇ ಹೆಚ್ಚು ಎಂಬ ಸಮಾಜದ ಸಾಮಾನ್ಯ ಕಲ್ಪನೆಯನ್ನು ಸುಳ್ಳು ಮಾಡಿರುವ ಅಪರೂಪದ ಘಟನೆಯೊಂದು ಯಾದಗಿರಿಯಲ್ಲಿ ನಡೆದಿದೆ. ಸಾವಿನ ದವಡೆಯಲ್ಲಿದ್ದ ತನ್ನ ಸೊಸೆಗೆ ಅತ್ತೆಯೊಬ್ಬರು ತಮ್ಮ ಕಿಡ್ನಿ (ಮೂತ್ರಪಿಂಡ) ದಾನ ಮಾಡುವ ಮೂಲಕ ಹೊಸ ಜೀವನ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾಂತಾಬಾಯಿ ಎಂಬುವವರ ಸೊಸೆ ಕಳೆದ ಕೆಲವು ಸಮಯದಿಂದ ಎರಡು ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿದ್ದರು. ವೈದ್ಯರು ತುರ್ತಾಗಿ ಕಿಡ್ನಿ ಕಸಿ ಮಾಡಬೇಕೆಂದು ಸೂಚಿಸಿದ್ದರು. ಆದರೆ ಸೂಕ್ತ ದಾನಿಗಳು ಸಿಗದೆ ಕುಟುಂಬದವರು ಆತಂಕದಲ್ಲಿದ್ದರು.
ಈ ಸಂದರ್ಭದಲ್ಲಿ ಸ್ವತಃ ಅತ್ತೆಯೇ ಮುಂದೆ ಬಂದು ತನ್ನ ಕಿಡ್ನಿಯನ್ನು ಸೊಸೆಗೆ ನೀಡಲು ನಿರ್ಧರಿಸಿದರು. ವೈದ್ಯಕೀಯ ಪರೀಕ್ಷೆಗಳ ನಂತರ ಅತ್ತೆಯ ಕಿಡ್ನಿ ಸೊಸೆಗೆ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ರಕ್ತಸಂಬಂಧ ಇಲ್ಲದಿದ್ದರೂ ಅತ್ತೆ ತೋರಿಸಿದ ಈ ಔದಾರ್ಯ ಮತ್ತು ಮಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. “ನನ್ನ ಸೊಸೆ ಈ ಮನೆಯ ಮಗಳು, ಆಕೆಯ ಜೀವ ಉಳಿಸುವುದು ನನ್ನ ಕರ್ತವ್ಯ” ಎಂದು ಹೇಳುವ ಮೂಲಕ ಶಾಂತಾಬಾಯಿ ಅವರು ಸಂಬಂಧಗಳ ಮೌಲ್ಯವನ್ನು ಎತ್ತಿ ಹಿಡಿದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


