ಕೊರಟಗೆರೆ: ಸಂಕೇನಹಳ್ಳಿ ಕುಬೇರ ಗಣಪತಿ ದೇವಾಲಯದ ಸಮುದಾಯ ಭವನದ ಕಟ್ಟಡ ಕಾಮಗಾರಿಗೆ ಇತ್ತೀಚಿಗೆ ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ 5 ಲಕ್ಷ ರೂ. ಧನ ಸಹಾಯ ದೇವಾಲಯದ ನಿರ್ದೇಶಕರಿಗೆ ಹಸ್ತಾಂತರಿಸಿದರು.
ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಶ್ರೀ ಕುಬೇರ ಗಣಪತಿ ದೇವಾಲಯ ಸಮುದಾಯ ಭವನದ ಕಟ್ಟಡ ಕಾರ್ಮಕ್ರಮದ ವೇಳೆ ಪಿ.ಎನ್.ಕೃಷ್ಣಮೂರ್ತಿ ದಂಪತಿಗಳು ಭೇಟಿ ನೀಡಿ ಧನ ಸಹಾಯ ನೀಡಿ ಉದ್ಘಾಟನೆಗೆ ಮತ್ತಷ್ಟು ಸಹಾಯಹಸ್ತ ನೀಡುವ ಭರವಸೆ ನೀಡಿದರು.
ಕೋಳಾಲ ಜಿಪಂ ಮಾಜಿ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿ ಹೋಬಳಿಗೊಂದು ಸಮುದಾಯ ಭವನ ಕಟ್ಟಿಸುವ ಜವಾಬ್ದಾರಿ ನನ್ನದು. ಈಗ ಮಾವತ್ತೂರು ಅರಶೇಶ್ವರಿ ಸಮುದಾಯ ಭವನವೇ ಇದಕ್ಕೆ ಸಾಕ್ಷಿ. ದೇವಾಲಯಗಳ ಜೀರ್ಣೋದ್ದಾರದಿಂದ ಗ್ರಾಮಗಳಲ್ಲಿ ಶಾಂತಿ ನೆಲೆಸಲಿದೆ ಎಂದು ಹೇಳಿದರು.
ಬೆಂಗಳೂರಿನ ಚಂದ್ರಕಲಾ ಕೃಷ್ಣಮೂರ್ತಿ ಮಾತನಾಡಿ, ಹಳ್ಳಿಗೊಂದು ದೇವಾಲಯ ಇದ್ದರೇ ಶಾಂತಿ–ನೆಮ್ಮದಿ ತಾನಾಗಿಯೇ ನೆಲೆಸುತ್ತೆ. ಪಿ.ಎನ್.ಕೃಷ್ಣಮೂರ್ತಿ ಅವರು 5 ವರ್ಷ ಕೋಳಾಲ ಜಿಪಂ ಸದಸ್ಯರಾಗಿ ಕೊರಟಗೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದಾರೆ. 20 ವರ್ಷದಿಂದ ಕೊರಟಗೆರೆ ಕ್ಷೇತ್ರದಲ್ಲಿ ಜನಪರವಾಗಿ ಕೆಲಸ ಮಾಡಿದ್ದಾರೆ. ಮತದಾರರು ಮತ್ತೇ ಆಶೀರ್ವಾದ ಮಾಡಿದರೇ ಶಾಸಕರಾಗಿ ಸೇವೆ ಸಲ್ಲಿಸುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ತಾಪಂ ಸದಸ್ಯ ಆರ್.ಎಸ್.ರಾಜಣ್ಣ, ಮುಖಂಡರಾದ ಸುಮರಾಜು, ನರಸಿಂಹರಾಜು, ರಂಗರಾಜು, ಆರಾಧ್ಯ, ಸದಾಶಿವಯ್ಯ, ಸಿದ್ದಪ್ಪ, ಕರಿಬಸವಯ್ಯ, ನರಸಯ್ಯ, ಹೊಸಳಪ್ಪ, ರಾಮಾನುಜಯ್ಯ, ನಾಗಣ್ಣ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


