nammatumakuru

    Subscribe to Updates

    Get the latest creative news from FooBar about art, design and business.

    What's Hot

    ಶುಂಠಿ ಬೇಗ ಹಾಳಾಗದಂತೆ ಇಡುವುದು ಹೇಗೆ?

    July 25, 2026

    ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 56 ಜವಾನ ಹುದ್ದೆಗಳ ಭರ್ತಿ: ಆನ್‌ ಲೈನ್ ಅರ್ಜಿ ಆಹ್ವಾನ

    July 25, 2026

    ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ

    July 25, 2026
    Facebook Twitter Instagram
    ಟ್ರೆಂಡಿಂಗ್
    • ಶುಂಠಿ ಬೇಗ ಹಾಳಾಗದಂತೆ ಇಡುವುದು ಹೇಗೆ?
    • ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 56 ಜವಾನ ಹುದ್ದೆಗಳ ಭರ್ತಿ: ಆನ್‌ ಲೈನ್ ಅರ್ಜಿ ಆಹ್ವಾನ
    • ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ
    • NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
    • ಜು. 29ರಂದು ಔರಾದ್‌ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
    • ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
    • ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
    • ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ
    ಕೊರಟಗೆರೆ July 25, 2026

    ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ

    By adminJuly 25, 2026No Comments4 Mins Read
    g parameshwar

    ವರದಿ: ಮಂಜುಸ್ವಾಮಿ ಎಂ.ಎನ್.

    ಮೌಲ್ಯಾಧಾರಿತ ರಾಜಕಾರಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಪರೂಪದ ಜನನಾಯಕ, ಮಾಜಿ ಸಚಿವ ಸಿ. ವೀರಣ್ಣನವರು ನಿಧನರಾಗಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ರಾಜ್ಯದ ಹಲವು ಹಿರಿಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಅವರ ಶಿಸ್ತಿನ ಬದುಕು ಎಲ್ಲ ಕ್ಷೇತ್ರದ ಯುವಪೀಳಿಗೆಗೆ ಆದರ್ಶಪ್ರಾಯವಾದುದು. ನನಗಾಗಿ ಏನೊಂದನ್ನೂ ಗಳಿಸಿಕೊಳ್ಳದೆ, ಆಸೆ ಆಮಿಷಗಳಿಗೆ ಬಲಿಯಾಗದ ವಿರಳ ರಾಜಕಾರಣಿಗಳ ಸಾಲಿಗೆ ಅವರು ಸೇರುತ್ತಾರೆ. ಅಧಿಕಾರವಿದ್ದಾಗ ತುಟಿತುದಿಗೆರೆ ಮೆರೆಯದ, ಧರ್ಮವನ್ನೂ ಮಾಡಿಕೊಳ್ಳದ ಸ್ವಾಭಿಮಾನದ ಸಿ. ವೀರಣ್ಣನವರು ಸಾರ್ವಜನಿಕ ಜೀವನದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದ್ದಾರೆ.

    ರಾಜ್ಯ ರಾಜಕೀಯಕ್ಕೆ ಅಂತಹ ಉನ್ನತ ಮೌಲ್ಯಗಳನ್ನು ತಂದವರು ಸಿ. ವೀರಣ್ಣ. 1941ರಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದ ಈ ಸರಳಜೀವಿ, ಮುಂದೆ ಕರ್ನಾಟಕ ರಾಜಕೀಯದಲ್ಲಿ ಮೌಲ್ಯಗಳ ಹೊಸ ಪರಂಪರೆ ಆರಂಭಿಸಿದರು. ತಮ್ಮ ಬದುಕಿನ ಎಲ್ಲಾ ಘಟ್ಟಗಳಲ್ಲೂ ಬಡತನದಿಂದ ಶುರುವಾದ ಹೋರಾಟ, ಶಿಕ್ಷಣ ಮತ್ತು ವಕೀಲ ಜೀವನ, ಜನತಾಪಕ್ಷದ ಸಂಘಟನಾತ್ಮಕ, ಜನಸೇವೆಯ ರಾಜಕೀಯ, ಮಂತ್ರಿ ಸ್ಥಾನಗಳ ಹೊಣೆ, ವಾಲ್ಮೀಕಿ ಜನಾಂಗದ ಪರ ಹೋರಾಟ—ಎಲ್ಲೆಡೆ ನೈತಿಕತೆ ಮತ್ತು ಮನುಷ್ಯತ್ವವೇ ಇವರ ದಿಕ್ಕು ತೋರಿದ, ಕತ್ತಲೆಯನ್ನು ನಿವಾರಿಸಿದ ದೀಪವಾಗಿದ್ದಾರೆ.

    ವಾಲ್ಮೀಕಿ ಜನಾಂಗದ, ಕೃಷಿ ಕೆಲಸ ಮಾಡುತ್ತಿದ್ದ ಕಾಮಣ್ಣ ಮತ್ತು ಕಾಮಕ್ಕ ದಂಪತಿಗಳ ಪುತ್ರ ಸಿ. ವೀರಣ್ಣನವರು. ಬಡತನ ಇವರಿಗೆ ಜೀವನದ ಮೊದಲ ಪಾಠ. ಆದರೆ ಬಡತನ ಕಡಿಮೆ ಮಾಡಲಾಗದಿದ್ದರೂ, ಕನಸು ದೊಡ್ಡದಾಗಲು ಯಾರೂ ಅಡ್ಡಿಯಾಗಲಿಲ್ಲ. ಕೊರಟಗೆರೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕ ವೀರಣ್ಣನ ಬಗ್ಗೆ ಶಿಕ್ಷಕರು “ಸ್ವಭಾವದ ಮೃದುತ್ವ, ಮಾತಿನ ಶಿಸ್ತು, ಕಲಿಕೆಯಲ್ಲಿ ಆಸಕ್ತಿ” ಎಂದು ಪ್ರಶಂಸಿಸುತ್ತಿದ್ದರು.

    ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು, 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮುಂದುವರಿಸಿದಾಗಲೇಶ ಮನೆಯ ಆರ್ಥಿಕ ಸ್ಥಿತಿ ಗಂಭೀರವಾಗಿದ್ದರಿಂದ ಓದನ್ನು ನಿಲ್ಲಿಸಬೇಕಾಯಿತು.  ಇಲ್ಲಿ ಅವರ ಬದುಕಿಗೆ ಪ್ರವೇಶಿಸಿದ ಮಹತ್ವದ ವ್ಯಕ್ತಿ—-ಶಿಕ್ಷಕ ಗೋವಿಂದರಾಯರು. ಬಡ ವಿದ್ಯಾರ್ಥಿಗಳ ಪರ ಎದೆ ಬಾಗುವ ಅವರು, ಬಡತನದಲ್ಲಿ ಓದುತ್ತಿದ್ದ ಪ್ರತಿಭಾನ್ವಿತ ವೀರಣ್ಣನವರನ್ನು ತಮ್ಮ ನೆರಳಿಗೆ ತೆಗೆದುಕೊಂಡರು. ವೀರಣ್ಣ ಹೇಳುತ್ತಾರೆ: “ಗೋವಿಂದರಾಯರು ನನಗೆ ಗುರು ಮಾತ್ರವಲ್ಲ; ದಾರಿದೀಪ” ಎಂದು. ಈ ಗುರು-ಶಿಷ್ಯ ಬಾಂಧವ್ಯವು ನಂತರ ಕರ್ನಾಟಕಕ್ಕೆ ಒಬ್ಬ ಶ್ರೇಷ್ಠ ಜನನಾಯಕನನ್ನು ನೀಡಿದ ಮಹತ್ವದ ಘಟ್ಟವಾಯಿತು.

    ಶಿಕ್ಷಣ — ಹೋರಾಟ — ಮುಂದಿನ ದಾರಿ:

    ಗೋವಿಂದರಾಯರ ನೆರವಿನಿಂದ ವೀರಣ್ಣ ಪ್ರೌಢಶಿಕ್ಷಣ ಮುಗಿಸಿ, ಪಿಯುಸಿ (ಆ ದಿನಗಳಲ್ಲಿ ಇಂಟರ್ಮೀಡಿಯೇಟ್ ಎಂದಿತ್ತು) 1957-58ರಲ್ಲಿ ಮೊದಲ ಬ್ಯಾಚ್‌ ನಲ್ಲಿ ಸೇರಿದರು.

    1961ರಲ್ಲಿ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಾಗ, ಅವರ ಬದುಕಿನಲ್ಲಿ ಮತ್ತೊಂದು ಹೋರಾಟ ಹುಟ್ಟಿತು. ಬಡತನದಿಂದ ಮುಂದಿನ ಶಿಕ್ಷಣದ ಕನಸು ಮತ್ತೆ ತೊಡಕಾಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗಕ್ಕೆ ಅವಕಾಶ ಸಿಕ್ಕಿದ್ದರೂ, ಆರ್ಥಿಕ ಪರಿಸ್ಥಿತಿ ಅಡ್ಡಿಯಾಯಿತು. ವೀರಣ್ಣ ಅವರ ಬದುಕಿನ ಮಾರ್ಗವೇ ಹೋರಾಟ; “ನಿಲ್ಲಿಸದೇ ಮನುಷ್ಯ ನಿಲ್ಲುತ್ತಾನೆ, ಹೋರಾಟ ಸದಾ ಹರಿಯುವ ನೀರಿನಂತಿರಬೇಕು” ಎಂಬುದು ಅವರ ನಂಬಿಕೆಯಾಗಿತ್ತು.

    ಅವರು ಉದ್ಯೋಗ ವಿನಿಮಯ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡರು. ಅದರಿಂದ ಪಶುಸಂಗೋಪನಾ ಇಲಾಖೆಯಲ್ಲಿ ಮೇಲ್ವಿಚಾರಕರಾಗಿ ನೇಮಕವಾಗುವ ಅವಕಾಶ ದೊರಕಿತು. ಅಲ್ಲಿ ಅವರು ಕಾರ್ಯನಿರ್ವಹಿಸಿದ ರೀತಿಯೇ ವಿಶೇಷ—ಹಳ್ಳಿ-ಹಳ್ಳಿಗೆ ಹೋಗಿ ದನಗಳ ಆರೋಗ್ಯ ವಿಚಾರಿಸುವುದು, ರೈತರ ಜಾನುವಾರುಗಳ ಬಗ್ಗೆ ಕಾಳಜಿ ವಹಿಸುವುದು. ಇದರಿಂದ ರೈತರು ಅವರಿಗೆ ಮಗನಂತೆ ಪ್ರೀತಿ ತೋರಿದರು. ಒಮ್ಮೆ ಮೇಲಾಧಿಕಾರಿ ಅವಮಾನಕಾರಿ ಶಬ್ದ ಬಳಸಿದಾಗ, ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಳ್ಳದ ವೀರಣ್ಣ ಕ್ಷಣಾರ್ಧದಲ್ಲಿ ರಾಜೀನಾಮೆ ನೀಡಿದರು. ಅವರು ಅಧಿಕಾರಕ್ಕೆ ಹೆದರಲಿಲ್ಲ, ನೀತಿಗೆ ಮಾತ್ರ ಹೆದರಿದ್ದರು.

    ಶಿಕ್ಷಕ ಜೀವನ: ಬೆಳಗ್ಗಿನ ಓದು — ಮಧ್ಯಾಹ್ನ ಬೋಧನೆ

    ಸ್ವಾವಲಂಬಿ ಜೀವನಕ್ಕಾಗಿ ಕಾನೂನು ಓದುತ್ತಾ, ವೀರಣ್ಣ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ವಸಂತಯ್ಯರ ಸಹಕಾರ ಮತ್ತು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಇವರಿಗೆ ಶಿಕ್ಷಕ ವೃತ್ತಿಗೊಂದು ದಾರಿ ತೆರೆಯಿತು.

    ಬೆಳಿಗ್ಗೆ: ಕಾನೂನು ಕಾಲೇಜಿನ ವಿದ್ಯಾರ್ಥಿ. ಮಧ್ಯಾಹ್ನ: ಹೈಸ್ಕೂಲ್ ಶಿಕ್ಷಕ.

    ಶಿಕ್ಷಕರಾಗಿ ಅವರು ವಿದ್ಯಾರ್ಥಿಗಳ ಹೃದಯ ಗೆದ್ದವರು; ವಕೀಲರಾಗಿ ನಂತರ ಜನರ ಮನ ಗೆದ್ದವರು. 1964ರಲ್ಲಿ ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದಾಗ, ಜನ ಸೇವೆಗೆ ಅವರ ಸಂಬಂಧ ಮತ್ತಷ್ಟು ಗಟ್ಟಿಯಾಯಿತು.

    ರಾಜಕೀಯಕ್ಕೆ ಪ್ರವೇಶ:

    1971ರಲ್ಲಿ ಜನಸಂಘದ ಪಕ್ಷದ ಅಧ್ಯಕ್ಷರಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಅವರು, 1972ರ ಮೊದಲ ಚುನಾವಣೆಯಲ್ಲಿ ಸೋಲು ಕಂಡರೂ ಹೋರಾಟ ಮುಂದುವರಿಸಿದರು. 1978ರ ಸೋಲೂ ಅವರಿಗೆ ಬೇಸರ ತರಲಿಲ್ಲ; ಜನಸೇವೆಯ ನೆಲೆ ಬಿದ್ದಿತ್ತು. ಜನಮನಸ್ಸನ್ನು ಗೆಲ್ಲುವುದು ನಿಧಾನವಾದರೂ ಶಾಶ್ವತವಾಗಿ ನಿಲ್ಲುತ್ತದೆ ಎಂಬುದನ್ನು ಅವರು ನಂಬಿದ್ದರು. 1983ರಲ್ಲಿ ಜನತಾ ಪಕ್ಷದ ಟಿಕೆಟ್ ಪಡೆದು, ಕೊನೆಗೂ ಪ್ರಚಂಡ ಬಹುಮತದಿಂದ ಶಾಸಕರಾಗಿ ಆಯ್ಕೆಯಾದರು. ಇವರಲ್ಲಿದ್ದ ದೃಢತೆ, ನೈತಿಕತೆ, ನಾಯಕನಾಗುವ ಸಾಮರ್ಥ್ಯ ಕಂಡ ಪ್ರಭಾವಿ ರಾಜಕಾರಣಿ ಹಾಗೂ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು “ವೀರಣ್ಣ ನಮ್ಮ ವಿಧಾನಸಭೆಯ ಉಪಸಭಾಧ್ಯಕ್ಷ” ಎಂಬ ನಂಬಿಕೆಯಿಂದ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿಸಿದರು. ಇದು ಇವರು ರಾಜಕೀಯಕ್ಕೆ ತಂದಿದ್ದ ಮೌಲ್ಯಗಳ ದೊಡ್ಡ ಗೆಲುವಾಗಿತ್ತು.

    ವಾಲ್ಮೀಕಿ ಜನಾಂಗಕ್ಕೆ ಐತಿಹಾಸಿಕ ಕೊಡುಗೆ:

    ವಾಲ್ಮೀಕಿ, ನಾಯಕ, ನಾಯ್ಕ, ಬೇಡ, ಬೇಡರ್ — ಇವೆಲ್ಲ ಒಂದೇ ಸಮುದಾಯದ ಪರ್ಯಾಯ ಹೆಸರುಗಳು. ಆದರೆ ಸರ್ಕಾರದ ದಾಖಲೆಗಳಲ್ಲಿ “Nayaka” ಮಾತ್ರ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಇತ್ತು. ಅಕ್ಷರದ ವ್ಯತ್ಯಾಸಕ್ಕೆ ಲಕ್ಷಾಂತರ ಕುಟುಂಬಗಳ ಹಕ್ಕು ಕಸಿದುಕೊಳ್ಳುತ್ತಿತ್ತು. ಇದರ ವಿರುದ್ಧ ಹೋರಾಡಿದ ವೀರಣ್ಣ,  ವಿವಿಧ ಜಿಲ್ಲೆಗಳ ಶಾಸಕರಿಗೆ ಮನವರಿಕೆ ಮಾಡಿದರು. ಮುಖ್ಯಮಂತ್ರಿಗಳ ಮುಂದೆ ವಿಚಾರ ಮಂಡಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಗ್ರ ವರದಿ ರಚಿಸಿ ಸಲ್ಲಿಸಿದರು. ಕ್ಯಾಬಿನೆಟ್ ವಿರೋಧಗಳನ್ನು ಎದುರಿಸಿದರು. ಕೊನೆಗೆ ಮಂತ್ರಿ ಮಂಡಲವೂ ಸಂಪೂರ್ಣವಾಗಿ ಒಪ್ಪಿಕೊಂಡಿತು. ನಂತರ ಅದನ್ನು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ದೆಹಲಿಗೆ ಕಳುಹಿಸುತ್ತಾರೆ.  ಆಗ ಪ್ರಧಾನ ಮಂತ್ರಿಗಳಾಗಿದ್ದ ಚಂದ್ರಶೇಖರ್ ಅವರು ದೇವೇಗೌಡರಿಗೆ ಆಪ್ತರಾಗಿದ್ದರು. ಹೆಚ್.ಡಿ. ದೇವೇಗೌಡರ ನೆರವಿನಿಂದ ಪ್ರಧಾನಿಯವರನ್ನು ಭೇಟಿಯಾಗಿ ಚರ್ಚಿಸಿದರು. ದೆಹಲಿಯಲ್ಲಿ ಸಂಸದರು ಹಾಗೂ ಸಚಿವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟರು. ಬಳ್ಳಾರಿಯ ಸಂಸದರಾದ ಬಸವರಾಜೇಶ್ವರಿ, ಶ್ರೀನಿವಾಸ ಪ್ರಸಾದ್, ಕೃಷ್ಣರಾವ್ ಮುಂತಾದ ಸಂಸದರು ಮತ್ತು ಅಧಿಕಾರಿಗಳ ಸಹಕಾರ ಪಡೆದರು.

    ಸಂಸತ್ತಿನಲ್ಲಿ ಚರ್ಚೆ, ವಿರೋಧ ಹಾಗೂ ರಾಜಕೀಯ ಒತ್ತಡಗಳನ್ನೆಲ್ಲ ಎದುರಿಸಿ, ಕೊನೆಗೂ ಕೇಂದ್ರ ಸರ್ಕಾರದಲ್ಲಿ ಬಿಲ್ ಮಂಡನೆ ಮಾಡಿ ಅವಿರೋಧವಾಗಿ ಅಂಗೀಕರಿಸಿದರು. ಈ ಬಿಲ್ ಮೂಲಕ ವಾಲ್ಮೀಕಿ, ನಾಯಕ, ನಾಯ್ಕ, ಬೇಡ, ಬೇಡರ್ ಇವುಗಳನ್ನು ಒಂದೇ ಜನಾಂಗದ ಪರ್ಯಾಯ ಪದಗಳು ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿತು. ಇದು ಲಕ್ಷಾಂತರ ಕುಟುಂಬಗಳ ಶಿಕ್ಷಣ, ಉದ್ಯೋಗ ಹಾಗೂ ಸೌಲಭ್ಯಗಳ ದಾರಿ ತೆರೆದ ಮಹತ್ತರ ಐತಿಹಾಸಿಕ ತಿದ್ದುಪಡಿಯಾಗಿದೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


    Provided by
    Provided by
    admin
    • Website

    Related Posts

    ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!

    July 25, 2026

    ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ

    July 25, 2026

    ಧರ್ಮಸ್ಥಳ ಸಂಸ್ಥೆಯ ಸೇವೆ ಅನುಕರಣೀಯ: ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

    July 25, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    Uncategorized

    ಶುಂಠಿ ಬೇಗ ಹಾಳಾಗದಂತೆ ಇಡುವುದು ಹೇಗೆ?

    July 25, 2026

    ಶುಂಠಿಯು ಪ್ರತಿಯೊಬ್ಬರ ಅಡುಗೆಮನೆಯಲ್ಲಿಯೂ ಅತ್ಯಗತ್ಯವಾಗಿ ಬಳಸುವ ಒಂದು ಪ್ರಮುಖ ಪದಾರ್ಥ. ಚಹಾ, ಸಾರು, ಕರ್ರಿ ಅಥವಾ ವಿವಿಧ ಖಾದ್ಯಗಳಿಗೆ ಶುಂಠಿ…

    ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 56 ಜವಾನ ಹುದ್ದೆಗಳ ಭರ್ತಿ: ಆನ್‌ ಲೈನ್ ಅರ್ಜಿ ಆಹ್ವಾನ

    July 25, 2026

    ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ

    July 25, 2026

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.