ಗುಬ್ಬಿ: ವಿಶ್ವದ ಅತ್ಯಂತ ಹಳೆಯ ಸಮರ ಕಲೆ ಕೇರಳ ಮೂಲದ ಕಲರಿಪಯಟ್ಟು ಕಲೆಯನ್ನು ಆಶ್ರಮದ ಶಾಲಾ ಮಕ್ಕಳಿಗೆ ಕಲಿಸಲು ಚಿದಂಬರ ಪಬ್ಲಿಕ್ ಸ್ಕೂಲ್ ಆ. 17 ರಿಂದ 22 ರವರೆಗೆ ಆರು ದಿನಗಳ ಕಾಲ ಕಲರಿಪಯಟ್ಟು ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶ್ರೀ ಚಿದಂಬರಾಶ್ರಮ ಅಧ್ಯಕ್ಷ ಸಚ್ಚಿದಾನಂದ ಶರ್ಮ ತಿಳಿಸಿದ್ದಾರೆ.
ಸಾಂಸ್ಕೃತಿಕ ಪರಂಪರೆಯ ಸಮರ ಕಲೆ ಕಲರಿಪಯಟ್ಟು ಕಲಿತು ದೇಶ ವಿದೇಶದಲ್ಲೂ ಖ್ಯಾತಿ ಪಡೆದ ಸುದರ್ಶನ್ ಪಂಡಿತ್ ಅವರು ನಮ್ಮ ಚಿದಂಬ ರಾಶ್ರಮದ ಹಳೆಯ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎನಿಸಿದೆ. ಇವರ ಕಲೆಯ ಪ್ರಕಾರಗಳನ್ನು ಮಕ್ಕಳಿಗೆ ಕಲಿಸಲು ಇದೇ ತಿಂಗಳ 17 ಬೆಳಿಗ್ಗೆ 10.30 ಕ್ಕೆ ಶಿಬಿರ ಉದ್ಘಾಟನೆ ಆಶ್ರಮದ ಆರ್ಟ್ ಯೋಗ ಧ್ಯಾನ ಮಂದಿರದಲ್ಲಿ ಆಗಲಿದೆ ಎಂದರು.
ಸುದರ್ಶನ್ ಪಂಡಿತ್ 2000 ಇಸವಿಯಲ್ಲಿ ಕಲರಿಯ ಗುರುಕುಲಂ ಶ್ರೀ ರಂಜನ್ ಮುಲ್ಲರತ್ ಅವರ ಮಾರ್ಗದರ್ಶನದಲ್ಲಿ ಕಲರಿಪಯಟ್ಟು ಸಮರ ಕಲೆ ಕಲಿಕೆ ಆರಂಭಿಸಿ, ಇಂದು ಕಲರಿ ಸತ್ತಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ 90 ನಿಮಿಷಗಳ ಕಾಲ ಎಡಬಿಡದೆ ಏಕವ್ಯಕ್ತಿ ಕಲರಿಪಯಟ್ಟು ಕಲೆ ಪ್ರದರ್ಶನ ಮಾಡಿ, ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಮಾಡಿದ್ದಾರೆ ಎಂದರು.
ಹಂಪಿ ಉತ್ಸವ ಹಾಗೂ ದಸರಾ ಉತ್ಸವದಲ್ಲಿ ಪ್ರದರ್ಶನ ನೀಡಿ ಪ್ರಸ್ತುತ ಸಮರ ಕಲಾ ನಿರ್ವಹಣಾ ಸಂಸ್ಥೆ ಮುಖ್ಯಸ್ಥರಾಗಿ ಮಕ್ಕಳಿಗೆ ಸಮರ ಕಲೆ ಕಲಿಸುತ್ತಿದ್ದಾರೆ. ಇವರ ಶಿಬಿರದಲ್ಲಿ ಕಲಿಯುವ ಆಸಕ್ತ ಮಕ್ಕಳು ಆಶ್ರಮದ ಕಚೇರಿಗೆ ಭೇಟಿ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
