nammatumakuru

    Subscribe to Updates

    Get the latest creative news from FooBar about art, design and business.

    What's Hot

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!

    March 23, 2026

    ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!

    March 23, 2026
    Facebook Twitter Instagram
    ಟ್ರೆಂಡಿಂಗ್
    • ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
    • ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!
    • ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!
    • ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?
    • ಜೆಡಿಎಸ್ ಬಲಪಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಕೆ.ಎಂ.ಕೃಷ್ಣನಾಯಕ ಕರೆ
    • ಹಿಂದೆ ಜಾರಿಯಲ್ಲಿದ್ದ ಮೀಸಲಾತಿ ಮುಂದುವರಿಸಿ: ಮಾ. 24 ರಂದು ಬೆಂಗಳೂರು ಚಲೋ: ತಿಪ್ಪೇಸ್ವಾಮಿ
    • ಕಸಾಪ ಭವನಕ್ಕೆ ಜಾಗ ನೀಡಿ: ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಮನವಿ
    • ಸಚಿವ ಶಿವರಾಜ್ ತಂಗಡಗಿಗೆ ದಿಢೀರ್ ಎದೆನೋವು: ತುಮಕೂರಿನ ಆಸ್ಪತ್ರೆಗೆ ದಾಖಲು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಅದೊಂದು ಆಕಸ್ಮಿಕ  ಸಾವು ಅಂತ ಎಲ್ರು ಅಂದುಕೊಂಡಿದ್ರು, ಆದ್ರೆ ಅಸಲಿ ವಿಚಾರ ಬಯಲಾಯ್ತು!
    ಕೊರಟಗೆರೆ February 19, 2022

    ಅದೊಂದು ಆಕಸ್ಮಿಕ  ಸಾವು ಅಂತ ಎಲ್ರು ಅಂದುಕೊಂಡಿದ್ರು, ಆದ್ರೆ ಅಸಲಿ ವಿಚಾರ ಬಯಲಾಯ್ತು!

    By adminFebruary 19, 2022No Comments2 Mins Read
    murder

     

    ಕೊರಟಗೆರೆ: ಅದೊಂದು ಆಕಸ್ಮಿಕ  ಸಾವು ಅಂತ ಎಲ್ರು ಅಂದುಕೊಂಡಿದ್ರು… ಆದ್ರೆ ಪೊಲೀಸರ ತನಿಖೆಯಲ್ಲಿ ಅಣ್ಣ- ತಂಗಿಯ ಅಸಲಿ ಕಳ್ಳಾಟ ಬಯಲಾಗಿದೆ… ಅಷ್ಟಕ್ಕೂ ಆ ಸ್ಟೋರಿ ನೋಡಿದ್ರೆ  ಛೇ ಇವರೆಂತಾ ಅಣ್ಣ ತಂಗಿ ಅಂತ ಬಾಯಿಗೆ ಬಂದಾಗೆ ನೀವು ಕೂಡಾ ಬೈತಿರಾ…ಅದರ ಡಿಟೈಲ್ಸ್ ಸ್ಟೋರಿ ಇಲ್ಲಿದೆ.


    Provided by
    Provided by

    ಅವತ್ತು ಜನವರಿ 30 ಬೆಳ್ಳಂಬೆಳಗ್ಗೆ ಕಲ್ಪತರು ನಾಡು ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಜ್ಜನರಾವ್  ಬೀದಿಯ ನಿವಾಸಿ 43 ವರ್ಷದ ಸುಮಿತ್ರಮ್ಮ ಸಾವನ್ನಪ್ಪಿದ್ರು… ಏರಿಯಾ ಜನರೆಲ್ಲಾ ಸಾವಿತ್ರಮ್ಮ ಮನೆಯಲ್ಲಿದ್ದ ಸಂಪ್ ಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂದು ಕೊಂಡಿದ್ರು… ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು… ಸುಮಿತ್ರಮ್ಮನ ತಿಥಿ ಕಾರ್ಯವು ಸಹ ಮುಗಿದು ಹೋಗಿತ್ತು.. ಆದರೆ ದಿನ ಕಳೆದಂತೆ ಸುಮಿತ್ರಮ್ಮನ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಬರೋಕೆ ಶುರುವಾಗಿತ್ತು.. ಅನುಮಾನದ ಬೆನ್ನತ್ತಿದ ಪೊಲೀಸರಿಗೆ ಸಾವಿತ್ರಮ್ಮ ನದು ಆಕಸ್ಮಿಕ ಸಾವಲ್ಲ ಕೊಲೆ ಅನ್ನೋದು ತನಿಖೆ ವೇಳೆ ಕನ್ಪಮ್ ಆಗಿತ್ತು.. ಅಣ್ಣ ತಂಗಿಯಂತಿದ್ದ ಇಬ್ಬರನ್ನ ಠಾಣೆಗೆ ಕರೆತಂದು ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಸಾವಿತ್ರಮ್ಮನದು ಕೊಲೆ ಅನ್ನೋ ಅಸಲಿ ಸತ್ಯ ಹೊರಬಿದ್ದಿದೆ..

    ಇನ್ನು ಹೀಗೆ ಈ ಪೋಟೋದಲ್ಲಿ ಕಾಣ್ತಿರುವ ಇವ್ಳ ಹೆಸ್ರು ಶೈಲಜಾ.. ಇವ್ನ ಹೆಸ್ರು ಪುನೀತ್… ಇವರಿಬ್ಬರು ಬೇರ್ಯಾರು ಅಲ್ಲ ಕೊಲೆಯಾದ ಸುಮಿತ್ರಮ್ಮನ ಸ್ವತಃ ಅಕ್ಕನ ಮಗ… ಅಂದ್ರೆ ಶೈಲಜಾ ಹಾಗೂ ಪುನೀತ್ ಅಣ್ಣ ತಂಗಿಯ ಹಾಗೇ … ಹೊರಜಗತ್ತಿಗೆ ಇವರಿಬ್ಬರೂ ಇದಿದ್ದು ಅಣ್ಣ- ತಂಗಿಯ ಹಾಗೇ ಆದ್ರೆ ಇವರು ಮನೆಯಲ್ಲಿ ಮಾಡ್ತಿದಿದ್ದೆ ಬೇರೆ… ತಂಗಿಯ ಜೊತೆ ಅಣ್ಣ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ.. ಈ ವಿಷಯ ಸುಮಿತ್ರಮ್ಮ ಹಾಗೂ ಸುಮಿತ್ರಮ್ಮನ ಅಕ್ಕನಿಗೂ ಗೊತ್ತಿತ್ತು… ಈ ವಿಚಾರ ತಿಳಿತಿದ್ದಂತೆ ಇಬ್ಬರಿಗೂ ಬುದ್ದಿ ಮಾತು ಹೇಳಿ ಕಾಲ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ರು…ಆದ್ರೆ ಸ್ವಲ್ಪ ದಿನ ನಮ್ಮ ನಡುವೆ ಏನು ಇಲ್ಲಾ ಅಂತ ನಾಟಕವಾಡಿದ್ದ ಇವರಿಬ್ಬರೂ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿ ಬರ್ತಿದ್ದ ಸುಮಿತ್ರಮ್ಮನ ಕೊಲೆಗೆ ಸ್ಕೇಚ್ ಹಾಕಿದ್ರು…

    ನಮ್ಮಬ್ಬಿರ ನಡುವೆ ಏನು ಇಲ್ಲಾ ಅಂತ ಜನವರಿ 29 ರ ರಾತ್ರಿ ಸುಮಿತ್ರಮ್ಮನ‌ ಮನೆಗೆ ಎಂಟ್ರಿ ಕೊಟ್ಟಿದ್ದ ಪುನೀತ್, ಸಾವಿತ್ರಮ್ಮನ ಮನೆಯಲ್ಲೇ ಮಲಗಿದ್ದ… ಮೊದಲೇ ಪ್ಲಾನ್ ಇವರಿಬ್ಬರೂ ಮದ್ಯರಾತ್ರಿ ಸುಮಿತ್ರಮ್ಮನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ರು… ಬಳಿಕ ಯಾರಿಗೂ ಅನುಮಾನ ಬಾರದ ರೀತಿ ಮನೆ ಮುಂದೆ ಇದ್ದ ಸಂಪ್ ಗೆ ಸುಮಿತ್ರಮ್ಮ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಅಂತ ಕಥೆ ಕಟ್ಟಿ ನಾಟಕವಾಡಿದ್ರು… ಈ ಸಂಬಂಧ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು… ಜೊತೆಗೆ ಸುಮಿತ್ರಮ್ಮನ ತಿಥಿ ಕಾರ್ಯವು ಮುಗಿದಿತು.. ನಮ್ಮನ್ನ ಇನ್ಯಾರು ಕೇಳಲ್ಲ ಇನ್ಮುಂದೆ ನಾವು ಆಡಿದ್ದೆ ಆಟ ಅಂತ ಇಬ್ಬರು ಜೋಡಿ ಹಕ್ಕಿಗಳಾಗಿ ಏರಿಯಾ ಪೂರ್ತಿ ಮೇರೆಯೋಕೆ ಶುರು ಮಾಡಿದ್ರು… ಇವರಿಬ್ಬರ ಆಟೋಟೋಪ ನೋಡಿದ ಪೊಲೀಸರಿಗೆ ಅನುಮಾನ ಬಂದಿತ್ತು ..ಪೊಲೀಸ್ ಠಾಣೆಗೆ ಕರೆತಂದು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸುಮಿತ್ರಮ್ಮನದು ಆಕಸ್ಮಿಕ ಸಾವಲ್ಲ… ಕೊಲೆ ಅನ್ನೋದು ಬೆಳಕಿಗೆ ಬಂದಿದೆ…

    ಸದ್ಯ ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಅಣ್ಣ ತಂಗಿ ಇಬ್ಬರು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ‌…

    ಕ್ಯಾಮರಾ ಮ್ಯಾನ್ ದೇವರಾಜ್ ಜೊತೆ  ಮಂಜುಸ್ವಾಮಿ ಎಂ.ಎನ್. ಕೊರಟಗೆರೆ

    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

     

    admin
    • Website

    Related Posts

    ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?

    March 23, 2026

    ಸಿದ್ದರಬೆಟ್ಟ ಶ್ರೀ ಮಠದ 20ನೇ ವರ್ಷದ ವಾರ್ಷಿಕೋತ್ಸವ: ಜೂನ್ 21ಕ್ಕೆ ಅದ್ಧೂರಿ ಕಾರ್ಯಕ್ರಮ, ಡಾ. ವೀರೇಂದ್ರ ಹೆಗ್ಗಡೆಯವರಿಗೆ ‘ಸಿದ್ಧ ಶ್ರೀ’ ಪ್ರಶಸ್ತಿ

    March 22, 2026

    ಟೀಕೆ ಟಿಪ್ಪಣಿಗಳಿಗೆ ಅಭಿವೃದ್ದಿಯೇ ಉತ್ತರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

    March 16, 2026

    Leave A Reply Cancel Reply

    Our Picks

    ದಾಖಲೆ ಬರೆದ ನರೇಂದ್ರ ಮೋದಿ: ಮುಖ್ಯಮಂತ್ರಿ, ಪ್ರಧಾನಿಯಾಗಿ ದೀರ್ಘಾವಧಿ ಆಡಳಿತ ನಡೆಸಿದ ನಾಯಕ

    March 23, 2026

    ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ವಿಶಾಲ ಹೃದಯವಿರಲಿಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 20, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಏಪ್ರಿಲ್ 1ರಿಂದ ಬೇಸಿಗೆ ವಿಶೇಷ ಕಲಿಕಾ ಶಿಬಿರ: 2ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

    March 23, 2026

    ತುಮಕೂರು: ವಿಜ್ಞಾನ ಬಿಂದು, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಹಕಾರದಲ್ಲಿ ಶೈಕ್ಷಣಿಕ ಯೋಜನೆಗಳನ್ನು ರೂಪಿಸಿದೆ. ಕಲಿಕೆಯಲ್ಲಿ ಆಸಕ್ತಿ ಮೂಡಿಸಲು…

    ಹೆಚ್ಚುತ್ತಿದೆ ಗ್ಯಾಸ್ ಸಿಲಿಂಡರ್ ಕಳ್ಳತನ ಪ್ರಕರಣ: ಶಾಲೆಗೆ ನುಗ್ಗಿ 6 ಸಿಲಿಂಡರ್ ದೋಚಿದ ಕಳ್ಳರು!

    March 23, 2026

    ಐಪಿಎಲ್ 2026: ತುಮಕೂರು, ಮೈಸೂರು ಸೇರಿದಂತೆ ದೇಶದ 15 ನಗರಗಳಲ್ಲಿ ‘ಫ್ಯಾನ್ ಪಾರ್ಕ್’ ಘೋಷಿಸಿದ ಬಿಸಿಸಿಐ!

    March 23, 2026

    ಜೂನ್ 21ರಂದು ಸಿದ್ದರಬೆಟ್ಟದಲ್ಲಿ ಉಚಿತ ಸಾಮೂಹಿಕ ಆದರ್ಶ ವಿವಾಹ: ನೋಂದಾಯಿಸುವುದು ಹೇಗೆ?

    March 23, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.