nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್

    May 14, 2025

    ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು

    May 14, 2025

    ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ

    May 14, 2025
    Facebook Twitter Instagram
    ಟ್ರೆಂಡಿಂಗ್
    • ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್
    • ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು
    • ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ
    • ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ
    • ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಡ್ಲಾಪುರ ಪಿಡಿಓ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
    • ಉದ್ಯೋಗ: ಮೇ 16ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ
    • ರಾಕೇಶ್ ಪೂಜಾರಿ ಸಾವಿಗೂ ಕಾಂತಾರ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ: ಚಿತ್ರತಂಡ ಸ್ಪಷ್ಟನೆ
    • ಬಿ.ವಿ.ಎ: ಚಿತ್ರಕಲಾ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ರೈತರ ಮೇಲೆ ಅರಣ್ಯಾಧಿಕಾರಿ ದುಗ್ಗಪ್ಪ ದರ್ಪ: ದೌರ್ಜನ್ಯ ತಡೆಯಲು ಜನ ಪ್ರತಿನಿಧಿಗಳು ವಿಫಲ
    ಗುಬ್ಬಿ March 7, 2022

    ರೈತರ ಮೇಲೆ ಅರಣ್ಯಾಧಿಕಾರಿ ದುಗ್ಗಪ್ಪ ದರ್ಪ: ದೌರ್ಜನ್ಯ ತಡೆಯಲು ಜನ ಪ್ರತಿನಿಧಿಗಳು ವಿಫಲ

    By adminMarch 7, 2022No Comments2 Mins Read
    aranya

    ಗುಬ್ಬಿ: ತಾಲೂಕಿನ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವ ಗುಬ್ಬಿ ವಲಯ ಅರಣ್ಯಾಧಿಕಾರಿ ದುಗ್ಗಪ್ಪನವರ ದರ್ಪ ತಾಲೂಕಿನಲ್ಲಿ ಹೆಚ್ಚಾಗಿದ್ದು, ಇವರ ದರ್ಪದ ಆಡಳಿತವನ್ನು ನಿಯಂತ್ರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿರುವುದು ತಾಲೂಕಿನ ರೈತರ ದುರಾದೃಷ್ಟಕರವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್ 164ರಲ್ಲಿ ಸುಮಾರು     2-34 ಗುಂಟೆ ಜಮೀನನ್ನು ಬಡ ರೈತ ದೊಡ್ಡ ತಿಮ್ಮಯ್ಯ ಹೊಂದಿದ್ದು,  ಸುಮಾರು 30 – 40 ವರ್ಷಗಳಿಂದ ಈ ಜಮೀನನ್ನು ನಂಬಿ ಸಂಸಾರವನ್ನು ನಡೆಸುತ್ತಿದ್ದಾರೆ. ಈ ನಡುವೆ ಏಕಾಏಕಿ ಅರಣ್ಯಾಧಿಕಾರಿ ದುರ್ಗಪ್ಪ ಯಾವುದೇ ಮುನ್ಸೂಚನೆ ನೀಡದೆ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಯೊಡನೆ ಜಮೀನಿಗೆ ಧಾವಿಸಿ, ಅಲ್ಲಿ ಬೆಳೆದಿದ್ದ ಸುಮಾರು 50 ರಿಂದ 60 ಫಸಲು ಬಿಡುತ್ತಿರುವ ಅಡಿಕೆ ಮರ ಹಾಗೂ ಮೂವತ್ತು ವರ್ಷದಿಂದ ಕಾಪಾಡಿಕೊಂಡು ಬಂದಂತಹ 15 ತೆಂಗಿನ ಮರಗಳನ್ನು ಧರೆಗೆ ಉರುಳಿಸಿ ತನ್ನ ಅಹಂಕಾರವನ್ನು ಕುಟುಂಬದ ಮೇಲೆ ತೋರಿಸಿದ್ದು, ಬಡ ಕುಟುಂಬಗಳು ಇವರ ಆಡಳಿತದಿಂದ ಕಂಗಾಲಾಗಿದ್ದಾರೆ.


    Provided by

    ಈ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಅಳಲನ್ನು ತೋಡಿಕೊಂಡ ದೊಡ್ಡ ತಿಮ್ಮಯ್ಯನವರ ಕುಟುಂಬ ನಾವು ಯಾವುದೇ ಒತ್ತುವರಿ ಮಾಡಿರುವುದಿಲ್ಲ. ಕಳೆದ ಎರಡು ತಿಂಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿ  ಸೇರಿ ಭೂಮಾಪನ ಅಳತೆ ನಡೆಸಿ ದುಗ್ಗಪ್ಪ ನವರ ಸಮ್ಮುಖದಲ್ಲೇ ಗಡಿ ಪ್ರದೇಶವನ್ನು ಗುರುತಿಸಿ ಕಲ್ಲನ್ನು ನೆಟ್ಟಿದ್ದು, ಕಲ್ಲಿನ ಮೇಲೆ ಅರಣ್ಯ ಇಲಾಖೆಯ ಸೀಮಿತ ಎಂದು ನಮೂದಿಸಿರುವುದು ಒಂದೆಡೆಯಾದರೆ ನಮ್ಮ ಜಮೀನನ್ನು ಹೊರತುಪಡಿಸಿ ಅರಣ್ಯ ಇಲಾಖೆಯ ಜಮೀನನ್ನು ಇಲ್ಲಿಯವರೆಗೂ ಒತ್ತುವರಿ ಮಾಡಿರುವುದಿಲ್ಲ ಎಂದು ರೈತ ಮಹಿಳೆ ಶಾರದಮ್ಮ ತಮ್ಮ ಅಳಲನ್ನು ತೋಡಿಕೊಂಡರು.

    ದೊಡ್ಡ ತಿಮ್ಮಯ್ಯನವರ ಮಗ ಆರ್.ಎಪ್. ಒ ದುಗ್ಗಪ್ಪ ನವರನ್ನು ಪರಿಪರಿಯಾಗಿ ಹೇಳಿದರೂ 30 ವರ್ಷಗಳಿಂದ ಬೆಳೆಸಿದ ಅಡಿಕೆ ತೆಂಗು ಮತ್ತು  ವೀಳ್ಯದೆಲೆ  ಅಂಬುಗಳನ್ನು ಮನುಷ್ಯತ್ವವಿಲ್ಲದೆ ಧರೆಗೆ ಉರುಳಿಸಿ ತಮ್ಮ ಅಧಿಕಾರವನ್ನು ನಮ್ಮ ಕುಟುಂಬದ ಮೇಲೆ ಸೇರಿಸಿಕೊಂಡಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಕೇವಲ ಒಂದು ದಿನ ಅವಧಿ ನೀಡಿ ನಮ್ಮ ಜಮೀನನ್ನು ಸರ್ಕಾರದ ಸರ್ವೇ ಪ್ರಕಾರ ಅಳತೆ ಮಾಡಿಸಿ ಅರಣ್ಯ ಜಮೀನು ಆದರೆ ಬಿಟ್ಟುಕೊಡುತ್ತೇವೆ ಎಂದು ಅಂಗಲಾಚಿ ಬೇಡಿದರೂ ಸಹ ಈತನ ಮನಸ್ಸು ಕರಗದೆ ತನ್ನ ತಾಯಿ ಹೆಂಡತಿ ಹಾಗೂ ತಂಗಿಯರನ್ನು ಹೀನ ಮಾನವಾಗಿ ಹೀಯಾಳಿಸಿ ನಮಗೆ ಅನ್ಯಾಯವೆಸಗಿದ್ದಾರೆ. ಎಂದು ದೂರಿದ ಅವರು ನನಗೆ ನ್ಯಾಯ ರಕಿಸಿಕೊಡುವಲ್ಲಿ ತಾಲೂಕು ಆಡಳಿತಕ್ಕೆ ಮೊರೆ ಹೋಗುತ್ತೇನೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ನಾನು ಮತ್ತು ನನ್ನ ಕುಟುಂಬ ವಿಷ ಕುಡಿದು ಸಾಯುತ್ತೇವೆ ಎಂದು ಕಣ್ಣೀರು ಹಾಕಿದ್ದಾರೆ.

    ಅರಣ್ಯವನ್ನು ಬೆಳೆಸಿ ಎಂದು ಸರ್ಕಾರವು ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಗುಬ್ಬಿ ತಾಲೂಕಿನ ಅರಣ್ಯಧಿಕಾರಿ ದುಗ್ಗಪ್ಪನ ದುರ್ವರ್ತನೆಯಿಂದ ಬೆಳೆದ ಮರಗಳನ್ನು ತಿಳಿಸುತ್ತಿರುವುದು ಎಷ್ಟು ಸಮಂಜಸ. ಈತನ ದೌರ್ಜನ್ಯಕ್ಕೆ ಈಗಾಗಲೇ ಸಾಕಷ್ಟು ರೈತರು ಬೇಸತ್ತಿದ್ದು ತಾಲೂಕಿನ ಹೋಬಳಿಯ ಹಂಗರಹಳ್ಳಿ ಗ್ರಾಮದ ರೈತರನ್ನು ಒಕ್ಕಲೆಬ್ಬಿಸಲು ಹೋಗಿ ಚೀಮಾರಿ ಹಾಕಿಸಿಕೊಂಡ ಘಟನೆ ನಡೆದಿದ್ದರೂ ಸಹ ಅರಣ್ಯ ಇಲಾಖೆಯ ಸ್ವತ್ತನ್ನು ಉಳಿಸುತ್ತೇನೆ ಎಂಬ ಭ್ರಮೆಯಿಂದ ಹೊರ ಬರುವುದು ಅಧಿಕಾರ ಕರ್ತವ್ಯವಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಅರಣ್ಯ ಒತ್ತುವರಿ ಮತ್ತು ಪಟ್ಟ ಜಮೀನು ಸೇರಿ ಮೂರು ಎಕರೆ ಮೀರಿದ ಅರಣ್ಯ ಒತ್ತುವರಿದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ. ಅರಣ್ಯ ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸದ ಹಿನ್ನೆಲೆ ಹಾಗೂ ಅರಣ್ಯ ಒತ್ತುವರಿದಾರರಲ್ಲಿ ಮೂಡಿರುವ ಆತಂಕದ ಬಗ್ಗೆ ಅರಿತ ಸರ್ಕಾರವು ಒತ್ತುವರಿದಾರರ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳ ಅರಣ್ಯ ಒತ್ತುವರಿದಾರರನ್ನು ಮುಂದಿನ ಸೂಚನೆಯ ವರೆಗೂ ಒಕ್ಕಲೆಬ್ಬಿಸಿ ಬಾರದೆಂದು ಆದೇಶಿಸಿ 2016ರ ಜೂ.28 ರಂದು ಹಿಂದಿನ ಸುತ್ತೋಲೆಯಲ್ಲಿ ಉಲ್ಲೇಖಿಸಿದ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದ್ದರು ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಉಲ್ಲಂಘಿಸಿ ತಾಲೂಕಿನ ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಲು ಹೊರಟಿರುವ ದುಗ್ಗಪ್ಪನ ಅವರ ಮುಂದಿನ ನಡೆ ಏನು ಎಂಬುದನ್ನು ಕಾದುನೋಡಬೇಕಾಗಿದೆ.

    ವರದಿ: ಡಿ.ಮಂಜುನಾಥ್,  ಗುಬ್ಬಿ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ಸ್ನೇಹಿತನ ಜೊತೆ ಪತ್ನಿ ಪರಾರಿ : ಸೆಲ್ಫಿ ವಿಡಿಯೋ ಫೇಸ್ ಬುಕ್ ಗೆ ಹರಿಬಿಟ್ಟು ನೇಣಿಗೆ ಶರಣಾದ ಪತಿರಾಯ..!!.

    February 18, 2025

    ಕೆರೆಗೆ ಬಿದ್ದು ತಾಯಿ– ಮಗಳ ದಾರುಣ ಸಾವು

    January 10, 2025

    ಹಕ್ಕು ಪತ್ರ ವಿತರಣೆಯಲ್ಲಿ ಲೋಪ: ದಲಿತ ಕುಟುಂಬಗಳಿಂದ ಆಹೋರಾತ್ರಿ ಧರಣಿ

    December 4, 2024
    Our Picks

    ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ

    May 14, 2025

    ವಾಯುನೆಲೆ ಮೇಲೆ ಭಾರತ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ: ಪಾಕಿಸ್ತಾನದ ಮಿಲಿಟರಿ ವಕ್ತಾರ

    May 10, 2025

    ಶ್ರೀನಗರ, ಪಠಾಣ್ ಕೋಟ್ ನಲ್ಲಿ ಹಲವು ಕಡೆ ಸ್ಫೋಟ: ಅಮೃತಸರದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ

    May 10, 2025

    ಪಾಕಿಸ್ತಾನದ ಡ್ರೋನ್ ದಾಳಿ: ಒಂದೇ ಕುಟುಂಬದ ಮೂವರಿಗೆ ಗಾಯ: ಒಬ್ಬರ ಸ್ಥಿತಿ ಗಂಭೀರ

    May 10, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಹಜ್ ಯಾತ್ರಿಕರು ಸಂಪೂರ್ಣ ಖರ್ಚು ವೆಚ್ಚವನ್ನು ತಾವೇ ಭರಿಸಿಕೊಳ್ಳಬೇಕಾಗಿದೆ: ಸಚಿವ ರಹೀಮ್ ಖಾನ್

    May 14, 2025

    ತುಮಕೂರು: ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದ ಸಂದರ್ಭದಲ್ಲಿ ಹಜ್ ಯಾತ್ರಿಗಳಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ…

    ಕುಣಿಗಲ್:  ಐಸ್ಕ್ರೀಂ ಫ್ಯಾಕ್ಟರಿ ಮಾಲೀಕನ ಸಾವು ಪ್ರಕರಣ ಸ್ಪೋಟಕ ಟ್ವಿಸ್ಟ್‌!: ಕೊಲೆ ನಡೆದಿರುವುದು ಬಯಲು

    May 14, 2025

    ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷಗಳ ಸಂಭ್ರಮ: ಮೇ 20ರಂದು ಸಾಧನಾ ಸಮಾವೇಶ

    May 14, 2025

    ಪಾಕಿಸ್ತಾನ ಗಡಿ ಪ್ರವೇಶ ಮಾಡಿದ್ದ BSF ಯೋಧ ಬಿಡುಗಡೆ

    May 14, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.