Author: admin

ಮೊದಲ ಪೋಕ್ಸೋ ಕೇಸಲ್ಲಿ ಮುರುಘಾಶ್ರೀ ಜೈಲಿನಿಂದ ಬಿಡುಗಡೆಯಾದರು ಸಹ ಅವರ ವಿರುದ್ಧ ದೂರುಗಳು ಮಾತ್ರ ಇನ್ನೂ ನಿಂತಿಲ್ಲ. ಮುರುಘಾಶ್ರೀ ವಿರುದ್ಧ ಚಿತ್ರದುರ್ಗದ ಎಸ್‌ ಪಿ ಕಚೇರಿಗೆ ವಕೀಲರಾದ ಮಧುಕುಮಾ‌ರ್ ಮತ್ತೊಂದು ದೂರು ಸಲ್ಲಿಸಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾದ ಮುರುಘಾಶ್ರೀ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿರುವುದು ಸಹ ಅಪರಾಧವಾಗಿದೆ ಎಂದು ಮಧುಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುರುಘಾಶ್ರೀಗೆ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹೈಕೋರ್ಟಿಗೆ ಮನವಿ ಮಾಡಿದ್ದಾರೆ.

Read More

ರಾಜಸ್ಥಾನದಲ್ಲಿ ಕಾರು ಅಪಘಾತದಲ್ಲಿ ಐವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುವ ಮುನ್ನ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ಅಪಘಾತ ಸಂಭವಿಸಿದೆ. ಪೊಲೀಸ್ ತಂಡವು ಪ್ರಧಾನಿ ಭೇಟಿಗೆ ಮುನ್ನ ಕರ್ತವ್ಯಕ್ಕಾಗಿ ನಾಗೌರ್‌ನಿಂದ ಜುಂಜುನುಗೆ ತೆರಳುತ್ತಿತ್ತು. ಅಷ್ಟರಲ್ಲಿ ಪೊಲೀಸ್ ವಾಹನ ಲಾರಿಗೆ ಡಿಕ್ಕಿ ಹೊಡೆದಿದೆ. ಪೊಲೀಸ್ ವಾಹನವನ್ನು ಓವರ್‌ ಟೇಕ್ ಮಾಡಿದ ನಂತರ ವೇಗವಾಗಿ ಬಂದ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ ಎಂದು ವರದಿಯಾಗಿದೆ. ಟ್ರಕ್‌ ಗೆ ವಾಹನ ಡಿಕ್ಕಿ ಹೊಡೆದು ಐವರು ಅಧಿಕಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Read More

ಏಕದಿನ ವಿಶ್ವಕಪ್ ಫೈನಲ್‌ ನಲ್ಲಿ ಟೀಂ ಇಂಡಿಯಾ ಸೋತಿದೆ. ಈ ಹಿನ್ನೆಲೆಯಲ್ಲಿ ಆಂದ್ರಪ್ರದೇಶದ ತಿರುಪತಿಯಲ್ಲಿ ಭಾರತ ತಂಡದ ಸೋಲನ್ನು ಅರಗಿಸಿಕೊಳ್ಳಲಾಗದೆ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಕ್ಯಾಪ್ಟನ್ ರೋಹಿತ್ ಜೊತೆ ಇತರ ಆಟಗಾರರು ಕಣ್ಣೀರು ಹಾಕುವ ವೀಡಿಯೊಗಳನ್ನು ನೋಡುವಾಗ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಅವರನ್ನು ತಿರುಪತಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದ್ರೂ ಬದಕುಳಿಯಲು ಸಾಧ್ಯವಾಗಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Read More

ತಮಿಳಿನ ಜನಪ್ರಿಯ ನಟ ಹಾಗೂ ಡಿಎಂಯುಡಿ ಸಂಸ್ಥಾಪಕ ವಿಜಯಕಾಂತ್ (70) ಅಸ್ವಸ್ಥರಾಗಿದ್ದಾರೆ. ಕುಟುಂಬಸ್ಥರು ಕೂಡಲೇ ಅವರನ್ನು ಚೆನ್ನೈನ ಮಿಯಾತ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರು ಕೆಲವು ದಿನಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಆದರೆ ಇದೀಗ ಅವರ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಜಯಕಾಂತ್ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲೂ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರ ನಂತರ ಅವರು ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಡಿಎಂಯುಡಿ ಪಕ್ಷವನ್ನು ಸ್ಥಾಪಿಸಿದರು.

Read More

ಉತ್ತರ ಪ್ರದೇಶದ ಬರೇಲಿ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ ದುಷ್ಕೃತ್ಯವೊಂದು ನಡೆದಿದೆ. ಶಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಟಿಯಾ ಗ್ರಾಮದ ಅಂಜಲಿ(35) ಎಂಬಾಕೆಯ ಪತಿ ನೇಪಾಳ ಸಿಂಗ್ ತನ್ನ ಪತ್ನಿಯನ್ನ ಸಜೀವವಾಗಿ ದಹನ ಮಾಡಿದ್ದಾನೆ. ಪತ್ನಿ ಅಂಜಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ನೇಪಾಳ ಸಿಂಗ್ ಇವರಿಬ್ಬರನ್ನು ಹುಲ್ಲಿನ ಬಣವೆಯ ಮೇಲೆ ಕಂಡು, ಕೋಪದಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಅಂಜಲಿ ಸಜೀವ ದಹನವಾಗಿದ್ದಾಳೆ. ಗೆಳೆಯನ ಸ್ಥಿತಿ ತಿಳಿದುಬಂದಿಲ್ಲ. ಪರ ಪುರುಷನೊಂದಿಗೆ ಹೆಂಡತಿಯ ಸಂಬಂಧ; ಪತ್ನಿ, ಮಕ್ಕಳನ್ನು ಕೊಂದ ವ್ಯಕ್ತಿ ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಖರ್ದಾದಲ್ಲಿ ಇತ್ತೀಚಿನ ದೌರ್ಜನ್ಯ ನಡೆದಿದೆ. ವೃಂದಾಬನ್ ಕರ್ಮಾಕರ್ ಅವರು ವೃತ್ತಿಯಲ್ಲಿ ಗಾರ್ಮೆಂಟ್ ವ್ಯಾಪಾರಿ. ಬೇರೆ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ಕರ್ಮಾಕರ್ ತಮ್ಮ ಪತ್ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದ. ಅಷ್ಟಾದರೂ ಆಕೆ ವಿವಾಹೇತರ ಸಂಬಂಧವನ್ನು ಬಿಟ್ಟಿಲ್ಲ. ಇದರಿಂದ ಕೋಪಗೊಂಡ ಕರ್ಮಾಕರ್ ಹರಿತವಾದ ಆಯುಧದಿಂದ ಪತ್ನಿಯನ್ನು ಕೊಂದಿದ್ದಾನೆ. ನಂತರ ತನ್ನ 16…

Read More

ಕುಂಬಾರಪೇಟೆ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮಕ್ಕಳ ಆಟಿಕೆ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮಕ್ಕಳ ಆಟದ ಸಾಮಾನು, ಎಲೆಕ್ಟ್ರಾನಿಕ್ಸ್ ವಸ್ತು ಮಾರಾಟದ ಮಳಿಗೆಯ ಮೂರನೇ ಮಹಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ನೋಡ ನೋಡುತ್ತಲೇ ಬೆಂಕಿಯ ಕೆನ್ನಾಲಿಗೆ 6ನೇ ಮಹಡಿವರೆಗೂ ಹಬ್ಬಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಾಗ ತಡವಾಗಿದ್ದರಿಂದ ಬೆಂಕಿಯು ಆರನೇ ಮಹಡಿಗೂ ಹಬ್ಬಿದೆ. ಸದ್ಯ, ನೀರು ಖಾಲಿಯಾಗಿದ್ದರಿಂದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಡಪಡುತ್ತಿದ್ದರು. ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಣೆ ಮಾಡಲಾಗಿದೆ. ಕುಂಬಾರಪೇಟೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಐದು ಅಂತಸ್ತಿನ ಕಟ್ಟಡದಲ್ಲಿ 3 ಅಂತಸ್ತು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ನೀರು ಹಾಕಿದಷ್ಟು ಹೆಚ್ಚಾಗಿ ಬೆಂಕಿ ಉರಿಯುತ್ತಿತ್ತು.

Read More

2023 ರ ವಿಶ್ವ ಸುಂದರಿ ಕಿರೀಟವನ್ನು ನಿಕರಾಗುವಾ ಮೂಲದ ಶೆಯ್ನಿಸ್ ಪಲಾಸಿಯೋಸ್ ಪಡೆದರು. ಎಲ್ ಸಾಲ್ವಡಾರ್‌ ನಲ್ಲಿ ಸೌಂದರ್ಯ ಸ್ಪರ್ಧೆ ನಡೆಯಿತು. ಮೊದಲ ರನ್ನರ್ ಅಪ್ ಥಾಯ್ಲೆಂಡ್ ‌ನ ಅಂಟೋನಿಯಾ ಪೊರ್ಸಿಲಿಡ್. ಆಸ್ಟ್ರೇಲಿಯಾದ ಮೊರೆ ವಿಲ್ಸನ್ ಎರಡನೇ ರನ್ನರ್ ಅಪ್ ಆಗಿಯೂ ಆಯ್ಕೆಯಾದರು. ಕಳೆದ ವರ್ಷದ ವಿಶ್ವ ಸುಂದರಿ ಬೋನಿ ಗೇಬ್ರಿಯಲ್ ಶೀನೀಸ್‌ಗೆ ಪ್ರಶಸ್ತಿಯನ್ನು ತೊಡಿಸಿದರು. 23 ವರ್ಷದ ಶೆಯ್ನಿಸ್ ಪಲಾಸಿಯೋಸ್ ಟಿವಿ ನಿರೂಪಕಿ ಮತ್ತು ರೂಪದರ್ಶಿ. ಜಾಗತಿಕ ಸ್ಪರ್ಧೆಯಲ್ಲಿ ಸ್ಪರ್ಧಿಸುವ ತನ್ನ ಬಾಲ್ಯದ ಕನಸು ನನಸಾಗಿದೆ ಎಂದು ಶೆಯ್ನಿಸ್ ಪಲಾಸಿಯೋಸ್ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ. ಪೋಸ್ಟ್ ಫೈನಲ್‌ ಗೆ ಗಂಟೆಗಳ ಮೊದಲು. ‘ಈ ಸಂದರ್ಭವನ್ನು ನನ್ನೊಳಗಿನ ಮಗುವಿಗೆ ಅರ್ಪಿಸುತ್ತೇನೆ. ಇತರರು ಹೇಳುವುದಕ್ಕಿಂತ ಎತ್ತರದ ಕನಸು ಅಸಾಧ್ಯ’ – ಶೀನಿಜ್ ಹೇಳಿದರು. 2016 ರಿಂದ, ಶೆಯ್ನಿಸ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ. ಮಿಸ್ ಟೀನ್ ನಿಕರಾಗುವಾ 2016 ಮತ್ತು ಮಿಸ್ ವರ್ಲ್ಡ್ ನಿಕರಾಗುವಾ 2020 ಪ್ರಶಸ್ತಿಗಳನ್ನು ಗೆದ್ದ ನಂತರ, ಶೆಯ್ನಿಸ್ ಮಿಸ್ ವರ್ಲ್ಡ್…

Read More

ಮದುವೆ ನಿಗದಿಯಾಗಿದ್ದರೂ ಪ್ರೀತಿಗೆ ಮನಸೋತ ಮಗಳು ಮದುವೆ ಹಿಂದಿನ ದಿನ ಪ್ರಿಯಕರನೊಂದಿಗೆ ಓಡಿ ಹೋದ ಪರಿಣಾಮ ಅವಮಾನ ತಾಳದೇ ವಧುವಿನ ತಂದೆ ಆತ್ಮಹತ್ಯೆಗೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಟ್ಟೇಗೌಡ(55) ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ನವೆಂಬರ್ 19ರಂದು ಈತನ ಮಗಳ ಮದುವೆ ನಿಗದಿಯಾಗಿತ್ತು. ಈ ಕುರಿತು ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ. ನ.೧೭ ರಂದು ಪುಟ್ಟೇಗೌಡ, ಪುಟ್ಟೇಗೌಡ ಸಹೋದರ ಶಿವೇಗೌಡ, ಸುಚಿತ್ರಳ ಸೋದರ ಮಾವ ಪುಟ್ಟಬುದ್ಧಿ ಲಗ್ನ ಕಟ್ಟಿಸಲು ನವ ವಧು ಸುಚಿತ್ರಳ ಜೊತೆ ಗುಂಡ್ಲುಪೇಟೆ ಹೋಗಿದ್ದರು. ಪುಟ್ಟೇಗೌಡ, ಶಿವೇಗೌಡ, ಪುಟ್ಟಬುದ್ಧಿ ಲಗ್ನ ಕಟ್ಟಿಸಲು ಪುರೋಹಿತರ ಮನೆಗೆ ತೆರಳುವುದಕ್ಕೂ ಮುಂಚೆ ಸುಚಿತ್ರ ಬ್ಯೂಟಿ ಪಾರ್ಲರ್‌ ಗೆ ಮೇಕಪ್‌ ಮಾಡಿಸುತ್ತೇನೆ ಎಂದು ಹೋಗಿದ್ದಾರೆ. ಸುಚಿತ್ರಳ ಪ್ರಿಯಕರ ಹೂರದಹಳ್ಳಿ ಗ್ರಾಮದ ಅನ್ಯ ಕೋಮಿನ ಮಲ್ಲೇಶ್‌ ಬ್ಯೂಟಿ ಪಾರ್ಲರ್‌ ಗೆ ಬಂದು ಕೆಲ ಕಾಲ ಮಾತನಾಡಿ ನಂತರ ಬೈಕ್ ‌ನಲ್ಲಿ ಪರಾರಿಯಾದರು ಎಂದು…

Read More

ಕಲಬುರುಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಣಮಗೇರಾ ಸರಕಾರಿ ಶಾಲಾ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿರುವ ಎರಡನೇ ತರಗತಿ ವಿದ್ಯಾರ್ಥಿನಿ ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟ ವಿದ್ಯಾರ್ಥಿನಿ ಮಹಾಂತಮ್ಮ(8) ಅವರ ತಾಯಿ ಸಂಗೀತಾ ಅವರು ನೀಡಿದ ದೂರಿನ ಮೇರೆಗೆ ದೇವಲಗಾಣಗಾಪುರ ಪೊಲೀಸರು ಶಾಲಾ ಮುಖ್ಯ ಶಿಕ್ಷಕಿ, ಅಡುಗೆ ಸಿಬ್ಬಂದಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸೇರಿ 7 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶಾಲೆಗೆ ಹೋಗಿದ್ದ ಮಗಳು ಸಾಂಬಾರ್ ‌ನಲ್ಲಿ ಬಿದ್ದು ಮೃತಪಟ್ಟ ಹಿನ್ನೆಲೆಯಲ್ಲಿ ಮಹಾಂತಮ್ಮ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದಕ್ಕೆಲ್ಲ ಬಿಸಿಯೂಟದ ಸಿಬ್ಬಂದಿಯೇ ಕಾರಣ ಎಂದು ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Read More

ಈಗ ನೀವು ಆನ್‌ ಲೈನ್‌ ನಲ್ಲಿಯೂ ಕಾರನ್ನು ಖರೀದಿಸಬಹುದು. ಇ-ಕಾಮರ್ಸ್ ದೈತ್ಯ ಅಮೆಜಾನ್ ಮುಂದಿನ ವರ್ಷದಿಂದ ಮಾರಾಟ ಆರಂಭಿಸಲಿದೆ. ಈ ಮಟ್ಟಿಗೆ ಹ್ಯುಂಡೈ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಗ್ರಾಹಕರು ತಮ್ಮ ಆಯ್ಕೆಯ ಕಾರು ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಆನ್ಲೈನ್ ‌ನಲ್ಲಿ ನಗದು ಪಾವತಿಸಬೇಕು. ಕಾರನ್ನು ಹತ್ತಿರದ ಡೀಲರ್‌ ನಿಂದ ತೆಗೆದುಕೊಳ್ಳಬಹುದು ಅಥವಾ ನಿಮ್ಮ ಮನೆಗೆ ತಲುಪಿಸಬಹುದು. ಈ ಸೌಲಭ್ಯವು ಮೊದಲು ಅಮೆರಿಕದಲ್ಲಿ ಲಭ್ಯವಿದ್ದರೂ, ಇದು ಕ್ರಮೇಣ ಇತರ ದೇಶಗಳಿಗೆ ವಿಸ್ತರಿಸಲಿದೆ.

Read More