Author: admin

ದಿ ವೀಕ್ ನಿಯತಕಾಲಿಕೆ ಮತ್ತು ಮಲಯಾಳ ಮನೋರಮಾ ದೈನಿಕದ ದೆಹಲಿ ರೆಸಿಡೆಂಟ್ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ ಮೂರ್ತಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. 68 ವರ್ಷದ ಅವರು ಇತ್ತೀಚೆಗೆ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ.

Read More

ಓಲಾ ಕ್ಯಾಬ್ ಬುಕ್ಕಿಂಗ್ ರದ್ದುಗೊಳಿಸಿದ್ದಕ್ಕೆ ಕುಪಿತಗೊಂಡ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಶ್ಲೀಲ ಸಂದೇಶ ಕಳುಹಿಸಿದ್ದ ಚಾಲಕನನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಸಲೂರು ನಿವಾಸಿ ದಿನೇಶ್ ಬಂಧಿತ ಆರೋಪಿ. ಶಾಲೆಯಲ್ಲಿ ಪೋಷಕರ ಸಭೆ ಮುಕ್ತಾಯವಾದ ಬಳಿಕ ಪುತ್ರಿಯೊಂದಿಗೆ ಮನೆಗೆ ತೆರಳಲು ಮಹಿಳೆ ಕ್ಯಾಬ್‌ ಬುಕ್ ಮಾಡಿದ್ದರು. ಕ್ಯಾಬ್ ಬರುವುದು ತಡವಾಗಿದ್ದಕ್ಕೆ ಬುಕ್ಕಿಂಗ್ ರದ್ದುಗೊಳಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಚಾಲಕ ಮಹಿಳೆಗೆ ಕರೆ ಮಾಡಿ ನಿಂದಿಸಿದ್ದ. ಕ್ಯಾಬ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಮಹಿಳೆಯ ವಾಟ್ಸಾಪ್‌ ಗೆ ಚಾಲಕ ಅಶ್ಲೀಲ ಫೋಟೋಸ್ ಮತ್ತು ವಿಡಿಯೋಗಳನ್ನು ಕಳುಹಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 32 ವರ್ಷದ ಮಹಿಳೆ, ತನ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಕ್ಯಾಬ್ ಬುಕ್ ಮಾಡಿದ್ದಾಳೆ. ಕ್ಯಾಬ್ ಬರುವುದು ತಡವಾಗಿದ್ದರಿಂದ ರೈಡ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಚಾಲಕ ಮಹಿಳೆಯ ವಾಟ್ಸಪ್‌ಗೆ ನಗ್ನ ಚಿತ್ರ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾನೆ. ಪೊಲೀಸರು  ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Read More

ದಾಸರಹಳ್ಳಿ ಜಂಕ್ಷನ್ ‌ನಲ್ಲಿ ಲಾರಿಯೊಂದು ಬೈಕ್‌ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಸವಾರ ಎಚ್. ಎಸ್. ನಾಗಭೂಷಣ್ (32) ಅವರು ಮೃತಪಟ್ಟಿದ್ದಾರೆ. ‘ಮಧುಗಿರಿ ತಾಲ್ಲೂಕಿನ ನಾಗಭೂಷಣ್ ಅವರು ಆರ್. ಎಂ. ಸಿ ಯಾರ್ಡ್ ಬಳಿಯ ದಿನಸಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಯಶವಂತಪುರದ ಕೊಠಡಿಯೊಂದರಲ್ಲಿ ವಾಸವಿದ್ದರು’ ಎಂದು ಪೀಣ್ಯ ಸಂಚಾರ ಪೊಲೀಸರು ಹೇಳಿದರು. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್. ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿಂದಾಗಿ ಈ ಎಚ್ಚರಿಕೆ ನೀಡಲಾಗಿದೆ. ಇಸ್ರೇಲ್ ರಾಯಭಾರಿ ಕಚೇರಿ ಮುಂದೆ ಮತ್ತು ಯಹೂದಿಗಳ ಆರಾಧನಾ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಹೂದಿ ನಿವಾಸಗಳಿಗೆ ಭದ್ರತೆ ಒದಗಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 13 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ ಮೃತರಲ್ಲಿ ಇಸ್ರೇಲ್ ನಾಗರಿಕರು ಮತ್ತು ವಿದೇಶಿ ಪ್ರಜೆಗಳೂ ಸೇರಿದ್ದಾರೆ. ಹಮಾಸ್ ಸುಮಾರು 150 ಒತ್ತೆಯಾಳುಗಳನ್ನು ತೆಗೆದುಕೊಂಡಿತು. ಅದೇ ಸಮಯದಲ್ಲಿ, ಇಸ್ರೇಲ್ ನಲ್ಲಿ  ನೆಲದ ಯುದ್ಧವು ಸನ್ನಿಹಿತವಾಗಿದೆ ಎಂಬ ಸೂಚನೆಗಳಿವೆ. ಇಸ್ರೇಲ್ ಸೇನೆಯು ಉತ್ತರ ಗಾಜಾದಲ್ಲಿ 1.1 ಮಿಲಿಯನ್ ಜನರನ್ನು 24 ಗಂಟೆಗಳ ಒಳಗೆ ದಕ್ಷಿಣ ಗಾಜಾಕ್ಕೆ ತೆರಳುವಂತೆ ಆದೇಶಿಸಿತು. ಸ್ಥಳಾಂತರಿಸುವುದು ಅಪ್ರಾಯೋಗಿಕ ಎಂದು ಯುಎನ್ ಹೇಳುತ್ತದೆ. ಪ್ರತಿಕ್ರಿಯಿಸಿದರು.…

Read More

ದೆಹಲಿಯಲ್ಲಿ ಕತ್ತು ಸೀಳಿ ತಂದೆಯನ್ನು ಕೊಂದ ಮಗ. ರಾಷ್ಟ್ರ ರಾಜಧಾನಿಯ ಪಂಜಾಬಿ ಬಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶವವನ್ನು ಹೂಳಲು ಯತ್ನಿಸುತ್ತಿದ್ದಾಗ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಯುವಕನ ವರ್ತನೆಯಿಂದ ಅನುಮಾನಗೊಂಡ ಸ್ಮಶಾನದ ನೌಕರ ಪೊಲೀಸರಿಗೆ ಕರೆ ಮಾಡಿದ್ದಾನೆ. ಮೃತರನ್ನು ಪಂಜಾಬಿ ಬಾಗ್‌ ನ ಮದಿಪುರ ಗ್ರಾಮದ ಸತೀಶ್ ಯಾದವ್ ಎಂದು ಗುರುತಿಸಲಾಗಿದೆ. ಪುತ್ರ ರಿಂಕು ಯಾದವ್ ಅಂತಿಮ ಸಂಸ್ಕಾರಕ್ಕಾಗಿ ತಂದೆಯ ಪಾರ್ಥಿವ ಶರೀರದೊಂದಿಗೆ ಪಶ್ಚಿಮ ಪುರಿ ಸ್ಮಶಾನಕ್ಕೆ ಆಗಮಿಸಿದರು. ಮೃತದೇಹದ ಕುತ್ತಿಗೆ ಮತ್ತು ಮಣಿಕಟ್ಟಿನ ಮೇಲೆ ಗಾಯಗಳಾಗಿರುವುದನ್ನು ಸ್ಮಶಾನದ ಉಸ್ತುವಾರಿ ಗಮನಿಸಿದರು. ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ದೆಹಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ರಿಂಕು ಅವರನ್ನು ಠಾಣೆಗೆ ಕರೆದೊಯ್ದಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಕೊಲೆಯ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬ್ಲೇಡ್‌ ನಿಂದ ಕತ್ತು ಕೊಯ್ದು ತಂದೆಯನ್ನು ಕೊಂದಿರುವುದಾಗಿ ರಿಂಕು ತಪ್ಪೊಪ್ಪಿಕೊಂಡಿದ್ದಾಳೆ. ಗುರುವಾರ ಕೊಲೆ ನಡೆದಿದೆ. ತಂದೆ ಕುಡಿತದ ಚಟ ಹೊಂದಿದ್ದು, ಮನೆಯಲ್ಲಿ ನಿತ್ಯ ಸಮಸ್ಯೆ ಸೃಷ್ಟಿಸುತ್ತಿದ್ದರು ಎಂದು ರಿಂಕು ಪೊಲೀಸರಿಗೆ…

Read More

ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ನೌಕರರು ಮೃತಪಟ್ಟರೆ ಅವರ ಕುಟುಂಬಕ್ಕೆ  2 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಥಮ ಸಭೆಯನ್ನು ನಡೆಸಿದ ಬಳಿಕ ಅವರು ಮಾಹಿತಿ ನೀಡಿದರು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅರ್ಚಕರು ಮತ್ತು ನೌಕರರಿಗೆ ಆರೋಗ್ಯ ಕಾರ್ಡ್ ವಿತರಿಸಲಾಗುವುದು. ನೋಂದಣಿ ಶುಲ್ಕವನ್ನು ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಭರಿಸಲಾಗುವುದು ಎಂದರು.

Read More

ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಎಸ್‌ ಐಟಿ ಅಧಿಕಾರಿಗಳು ಅಂದಿನ ಸಿಸಿಬಿ ಎಸ್‌ ಪಿ ಆಗಿದ್ದ ಡಿವೈಎಸ್ಪಿ ಗೌತಮ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಗೌತಮ್ ಅವರಿಗೆ ನೋಟೀಸ್ ನೀಡಿ ಸತತ ಎರಡು ದಿನ ಎಸ್ ಐಟಿ ವಿಚಾರಣೆ ನಡೆಸಿದೆ. ಗೌತಮ್ ವಿಚಾರಣೆ ಬೆನ್ನಲ್ಲೇ ಸಿಸಿಬಿ ಕಚೇರಿಯಲ್ಲೂ ಸಹ ಎಸ್‌ ಐಟಿ ಅಧಿಕಾರಿಗಳು ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ. ಕೆಜಿ ನಗರ ಡ್ರಗ್ಸ್ ಕೇಸ್ ಪ್ರಕರಣ ಸಂಬಂಧ ಸಿಸಿಬಿ ಕಚೇರಿಯಲ್ಲಿ ಮಹಜರ್ ಪ್ರಕ್ರಿಯೆ ನಡೆಡಿದೆ.

Read More

ಬೆಂಗಳೂರು: ರೈತರಿಗೆ ವಿದ್ಯುತ್ ಕೊರತೆ ಆಗದಂತೆ ಆಕಸ್ಮಿಕ‌ ಸಂದರ್ಭಕ್ಕೆ ಅಗತ್ಯವಾದ ಯೋಜನೆ/ ಸಿದ್ಧತೆ ಏಕೆ ಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ  ಇಂದು ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸುವ ವೇಳೆಯಲ್ಲಿ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇರುವ ವಿದ್ಯುತ್ ಅನ್ನು ವೈಜ್ಞಾನಿಕವಾಗಿ ಬೇರೆ ಬೇರೆ ಬ್ಯಾಚ್ ಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಮೊದಲೇ ಹೀಗೆ ಮಾಡಿದ್ದರೆ ವಿದ್ಯುತ್ ಕೊರತೆಯ ನಡುವೆಯೂ ರೈತರಿಗೆ ಸಮಸ್ಯೆ ಆಗದಂತೆ ನಿರ್ವಹಿಸಬಹುದಿತ್ತು. ಕಚೇರಿಯಲ್ಲೇ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಚೀಫ್ ಎಂಜಿನಿಯರ್ ಗಳು ಫೀಲ್ಡ್ ಗೆ ಹೋಗಬೇಕು. ಪರಿಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಸಿ ಅವರ ಸಮಸ್ಯೆಗಳನ್ನು ಆಲಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು. ಹಿಂದಿನ ಸರ್ಕಾರದಲ್ಲಿ ಉತ್ತಮವಾದ ಅಗತ್ಯ ಮಳೆ ಆಗಿದ್ದರೂ ವಿದ್ಯುತ್ ಉತ್ಪಾದನೆ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಮಳೆ ಕೊರತೆ ಆಗಿ, ಬರಗಾಲ…

Read More

ತುಮಕೂರು: ಜಿಲ್ಲೆಯ ತಿಪಟೂರು ನಗರದಲ್ಲಿ ಮಹಿಷಾಸುರ ದಸರಾ ಉತ್ಸವವನ್ನು ಛಲವಾದಿ ಮಹಾಸಭಾ ಹಾಗೂ ಬೌದ್ಧ ಮಹಾಸಭಾ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಆಚರಣೆ ಮಾಡಿದವು. ತಿಪಟೂರು ನಗರದ ಪ್ರಮುಖ ರಸ್ತೆಯಲ್ಲಿ ಮಹಿಷಾಸುರನ ಬೃಹತ್ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವ ಮೂಲಕ ಸಂಘಟನೆಗಳ ಕಾರ್ಯಕರ್ತರು ಮಹಿಷಾಸುರ ದಸರಾವನ್ನು ಆಚರಿಸಿದರು. ಅಲ್ಲದೆ ಮೈಸೂರಿನಲ್ಲಿ ಮಹಿಷಾಸುರ ದಸರಾ ಆಚರಣೆಗೆ ಅಲ್ಲಿನ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸುತ್ತಿರುವುದು ಕೂಡ ಖಂಡನೀಯ ಎಂದು ತಿಳಿಸಿದರು. ಚಕ್ರವರ್ತಿ ಮಹಿಷಾಸುರನ ದಸರಾವನ್ನು ಮೈಸೂರಿನಲ್ಲಿ ಆಚರಣೆ ಮಾಡಲಾಗುತ್ತಿದ್ದು ಅದರಲ್ಲಿ ಪಾಲ್ಗೊಳ್ಳಲು ತಿಪಟೂರಿನಿಂದ ವಿವಿಧ ಪ್ರಗತಿಪರ ಚಿಂತಕರ ತೆರಳುತ್ತಿದ್ದೇವೆ ಎಂದು ಇದೆ ವೇಳೆ ತಿಳಿಸಿದರು. ಅರಸನಾಗಿ ಇದ್ದ ಮಹಿಷಾಸುರನನ್ನು ರಾಕ್ಷಸನ ಸ್ವರೂಪವಾಗಿ ಮಾಡಿರುವುದು ಖಂಡನೀಯ ಆದರೆ ಮಹಿಶಾಸುರನ ಮೂಲ ನಿವಾಸಿಗಳಾದ ನಾವೆಲ್ಲರೂ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಮುಂದೆ ಸಾಗುತ್ತಿದ್ದೇವೆ ಸಾಗಲಿದ್ದೇವೆ ಎಂದು ಹೇಳಿದರು.

Read More

ತುಮಕೂರು: ಗ್ಯಾಸ್ ಕಟರ್ ಬಳಸಿ ರಾತ್ರೋರಾತ್ರಿ ಜ್ಯುವೆಲರಿ ಶಾಪ್ ಗೆ ಕನ್ನ ಹಾಕಿದ ಕಳ್ಳರು ಸುಮಾರು ಐದು ಲಕ್ಷ ರೂ ಬೆಲೆ ಬಾಳುವ ಸುಮಾರು 6 ಕೆ.ಜಿ ಬೆಳ್ಳಿ ವಸ್ತುಗಳನ್ನ ದೋಚಿ  ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ  ಕೆ.ಜಿ.ಟೆಂಪಲ್ ಗ್ರಾಮದಲ್ಲಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಜಿ.ಟಿಂಪಲ್ ಗ್ರಾಮದ ಮೋಹನ್ ಲಾಲ್ ಮಾಲೀಕತ್ವದ ಭವಾನಿ ಜ್ಯುವೆಲರಿ ಶಾಪ್ ನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಒಂದು ಗಂಟೆ ಸಮಯದಲ್ಲಿ ಅಂಗಡಿ ಮಾಲೀಕ ಮೋಹನ್ ಲಾಲ್ ಅವರ ಮೊಬೈಲ್ ಗೆ ಅಲಾರಾಂ ಸೆನ್ಸಾರ್ ಎಚ್ಚರಿಕೆ ಕೊಟ್ಟ ಹಿನ್ನಲೆ ಹೆಣ್ಣೂರು ನಿವಾಸಿ ಅಂಗಡಿ ಮಾಲೀಕ ತಕ್ಷಣ ಕೆ ಜಿ ಟೆಂಪಲ್ ಸ್ನೇಹಿತರಿಗೆ ಮಾಹಿತಿ ತಿಳಿಸಿದ್ದಾರೆ. ಕೂಡಲೇ ಅಂಗಡಿ ಬಳಿ ಬಂದವರು ಗಲಾಟೆ ಮಾಡಲಾಗಿ ಹಿಂಬದಿಯಿಂದ ಕಳ್ಳರು ಓಡಿ ಹೋಗಿದ್ದಾರೆ ಎನ್ನಲಾಗಿದೆ. ಗ್ಯಾಪ್ ಕಟರ್ ಸಿಲಿಂಡರ್ ಹಗ್ಗದ ಮೂಲಕ ತಂದು ಅದನ್ನು ಬಳಸಿ ತಡರಾತ್ರಿ ಜ್ಯುವೆಲರಿ ಶಾಪ್ ಗೆ ನುಗ್ಗಿರುವ ಆರೇಳು…

Read More