Subscribe to Updates
Get the latest creative news from FooBar about art, design and business.
- ಮೊಹರಂ ಆಚರಣೆ ವೇಳೆ ಅಗ್ನಿ ಕುಂಡದಲ್ಲಿ ಬಿದ್ದ ಯುವಕ
- ಕಾಲುವೆಯ ಸೇತುವೆಗೆ ಬೈಕ್ ಡಿಕ್ಕಿ: ಇಬ್ಬರು ಸಾವು
- ಹೃದಯಾಘಾತಕ್ಕೆ ಕೋವಿಡ್ ಲಸಿಕೆ ನೇರ ಕಾರಣ ಅಲ್ಲ: ಸಚಿವ ದಿನೇಶ್ ಗುಂಡೂರಾವ್
- ಕಾಂಗ್ರೆಸ್ ಹೈಕಮಾಂಡ್ ನಮಗೆ ದೇವಸ್ಥಾನ ಇದ್ದ ಹಾಗೆ: ಡಿ.ಕೆ.ಶಿವಕುಮಾರ್
- ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ: 2 ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ!
- ನಾಲ್ಕು ತಿಂಗಳುಗಳಿಂದ ಭೀತಿ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೆರೆ
- ಉತ್ತಮ ರಸ್ತೆಗಳು ಬೇಕು ಅಂದ್ರೆ, ಗ್ಯಾರೆಂಟಿ ಬಂದ್: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ!
- ಶಿವಾರ್ಚಕ ಎಂದು ಜಾತಿ ಗಣತಿಯಲ್ಲಿ ಬರೆಸಬೇಕು: ವಿದ್ವಾನ್ ಎಂ.ಮಲ್ಲಣ್ಣ ಕರೆ
Author: admin
ಕೇಂದ್ರ ಸರ್ಕಾರದ ಅೀನದಲ್ಲಿರುವ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (ಎನ್ಐಒಎಸ್) ತನ್ನ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದ್ದು, 10ನೇ ತರಗತಿಯಲ್ಲಿ ಶೇ.57ರಷ್ಟು, 12ನೇ ತರಗತಿಯಲ್ಲಿ ಶೇ.42ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 2021ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 10ನೇ ತರಗತಿ (ಎಸ್ಎಸ್ಎಲ್ಸಿ)ಗೆ ಒಟ್ಟು 57,258 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ ಹಾಜರಾಗಿದ್ದವರ ಪೈಕಿ 51154 ಪೈಕಿ 29,157 ಮಂದಿ ತೇರ್ಗಡೆಯಾಗಿದ್ದಾರೆ.ಇದರಲ್ಲಿ ವಿದ್ಯಾರ್ಥಿಗಳು ಶೇ.57.53ರಷ್ಟು, ವಿದ್ಯಾರ್ಥಿನಿಯರು ಶೇ.55.74 ಫಲಿತಾಂಶ ಪಡೆದಿದ್ದಾರೆ. ತೃತೀಯ ಲಿಂಗಿಗಳು 13 ಜನ ಪರೀಕ್ಷೆಗೆ ಹಾಜರಾಗಿ ಎಂಟು ಮಂದಿ ತೇರ್ಗಡೆಯಾಗಿದ್ದಾರೆ.ಹಿರಿಯ ಸೆಕೆಂಡರಿ 12ನೇ ತರಗತಿಗೆ 82,043 ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ 80,399 ಮಂದಿ ಪರೀಕ್ಷೆಗೆ ಹಾಜರಾಗಿ, 34278 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳು ಶೇ.42.94, ವಿದ್ಯಾರ್ಥಿನಿಯರು ಶೇ.41.97ರಷ್ಟು ಫಲಿತಾಂಶ ಪಡೆದಿದ್ದಾರೆ.ತೃತೀಯ ಲಿಂಗಿಗಳ ಪೈಕಿ ಎಂಟು ನೋಂದಣಿ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು, ಆರು ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಎನ್ಐಒಎಸ್ ಮಂಡಳಿ ತಿಳಿಸಿದೆ.ಫಲಿತಾಂಶವನ್ನು ಸಂಸ್ಥೆಯ ವೆಬ್ ಸೈಟ್ ನಿಂದ ಅಥವಾ…
ಚೆನ್ನೈ: ಕೊರೊನಾ ಹೆಚ್ಚಾಗಿರುವುದರಿಂದ ನೈಟ್ ಕಫ್ರ್ಯೂ ಹಾಗೂ ವೀಕೆಂಡ್ ಕರ್ಫ್ಯೂಗಳನ್ನು ಜಾರಿ ಮಾಡಿದ್ದರೂ ಕೂಡ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವ ಸಾರ್ವಜನಿಕರಿಂದ 3.45 ಕೋಟಿ ರೂ.ಗಳನ್ನು ಪೊಲೀಸರು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ. ಪೊಲೀಸ್ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಮಾಸ್ಕ್ ಧರಿಸದೆ ಉಡಾಫೆ ತೋರಿಸುತ್ತಿದ್ದ 1.64 ಲಕ್ಷ ಮಂದಿ, ಸಾಮಾಜಿಕ ಅಂತರ ಕಾಪಾಡದ 2,000 ಜನರು, ಹಾಗೂ ಅನಗತ್ಯವಾಗಿ ಗುಂಪು ಗೂಡಿದ್ದ 1,552 ಮಂದಿಗೆ ದಂಡ ವಿಧಿಸಲಾಗಿದೆ. ಇನ್ನು ನೈಟ್ ಕರ್ಫ್ಯೂ ಇದ್ದರೂ ಕೂಡ ಅಗತ್ಯ ದಾಖಲೆ, ಮಾಹಿತಿ ನೀಡದೆ ಬೇಕಾಬಿಟ್ಟಿ ಅಡ್ಡಾಡುತ್ತಿದ್ದ ಸವಾರರು ಹಾಗೂ ಚಾಲಕರನ್ನು ತಡೆದು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಚೆನ್ನೈ ನಗರ ಒಂದರಲ್ಲೇ 300 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೋವಿಡ್ ನಿಯಮಗಳನ್ನು ಮೀರಿ ಸಾರ್ವಜನಿಕರ ಸ್ಥಳಗಳಲ್ಲೇ ಮಾಸ್ಕ್ ಧರಿಸದೆ ಓಡಾಡುತ್ತಿರುವುದರಿಂದ ಪೊಲೀಸರು ದಂಡ ವಿಧಿಸುತ್ತಿದ್ದು ಚೆನ್ನೈ ನಗರ ಒಂದರಲ್ಲೇ 43,417 ಮಂದಿಯಿಂದ 86 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಮಾಹಿತಿ ನೀಡಿದೆ. ವರದಿ:…
ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸಿ ಪ್ರೋ ತ್ಸಾಹಿಸಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ಒಟ್ಟು 5890.27 ಎಕರೆ ಜಮೀನನ್ನು ಉದ್ಯಮಿಗಳಿಗೆ ಮೀಸಲಿಟ್ಟಿದೆ. ರಾಜ್ಯದಲ್ಲಿ ಹೊಸದಾಗಿ ಕೈಗಾರಿಕೆ ಆರಂಭಿಸಲು ಬರುವ ಉದ್ಯಮಿಗಳು ತಾವು ಬಯಸುವ ಜಿಲ್ಲೆಗಳಲ್ಲಿ ತತ್ಕ್ಷಣವೇ ಜಮೀನು ನೀಡಲು 5890.27 ಎಕರೆ ಜಮೀನನ್ನು ನೀಡಲು ಸಿದ್ದತೆ ನಡೆಸಿದೆ. ಸುಮಾರು 2582734 ಎಕರೆಯಷ್ಟು ಭೂಮಿಯನ್ನು ಕೆಐಎಡಿಬಿಯು ಭೂ ಸ್ವಾೀಧಿನ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, 14,200 ಎಕರೆ ಭೂಮಿಯನ್ನು ಸ್ವಾೀಧಿನಪಡಿಸಿಕೊಳ್ಳಲು ಮುಂದಾಗಿದೆ. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಬಹುನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶ ಜರುಗಲಿದ್ದು, ರಾಜ್ಯಕ್ಕೆ ದೇಶ, ವಿದೇಶಗಳಿಂದ ರಾಜ್ಯಕ್ಕೆ ದೊಡ್ಡ ದೊಡ್ಡ ಉದ್ಯಮಿಗಳು ಆಗಮಿಸುವ ನಿರೀಕ್ಷೆಯಿದೆ.ಈಗಿನ ಉದ್ಯಮಿಗಳಿಗೆ ತತ್ಕ್ಷಣವೇ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ ತಕ್ಷಣವೇ ಅವರು ನಿರೀಕ್ಷಿಸಿದ ಕಡೆ ಭೂಮಿ, ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ ಮಾತ್ರ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ.ಸ್ವಲ್ಪ ವಿಳಂಬವಾದರೆ ಈ ಉದ್ಯಮಿಗಳನ್ನು ಬೇರೆ ರಾಜ್ಯದವರು ಸೆಳೆಯುತ್ತಾರೆ. ಹಿಂದಿನ ಕೆಲವು…
ತಿಪಟೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ ತಿಪಟೂರು , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ತಿಪಟೂರು ಹಾಗೂ ಗ್ರಾಮ ಪಂಚಾಯಿತಿ ಈಚನೂರು ವತಿಯಿಂದ ಆಯೋಜಿಸಲಾಗಿದ್ದ ಅಂಗನವಾಡಿ ಕಟ್ಟಡಗಳನ್ನು ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಿದರು. ಆರ್. ಐ. ಡಿ. ಎಫ್. -22 ರ ಯೋಜನೆಯಡಿಯಲ್ಲಿ ರೂ 9.17 ಲಕ್ಷ ಅಂದಾಜು ಮೊತ್ತ ಅನುದಾನದಲ್ಲಿ ತಿಪಟೂರು ನಗರಸಭಾ ವ್ಯಾಪ್ತಿಯ ತಮಿಳು ಕಾಲನಿ-ಬಿ, ಚಿಕ್ಕಲಕ್ಕಿಪಾಳ್ಯ ಹಾಗೂ ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಕಾವಲು ಅಂಗನವಾಡಿ ಕೇಂದ್ರಗಳ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗಿತ್ತು. ನಗರಸಭೆ ಅಧ್ಯಕ್ಷ ಪಿ. ಜೆ. ರಾಮ್ ಮೋಹನ್, ಉಪಾಧ್ಯಕ್ಷ ಗಣೇಶ್ , ನಗರಸಭಾ ಸದಸ್ಯರಾದ ಲತಾ ಲೋಕೇಶ್ , ಜೈರಾಜು, ಮೋಹನ್ ರಾಜು, ಈಚನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಎಸ್., ಗ್ರಾಮ ಪಂಚಾಯಿತಿ ಸದಸ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ. ಓಂಕಾರಪ್ಪ, ಹಾಗೂ ಸಿದ್ದೇಶ್ ಇಂಜಿನಿಯರ್ ನಿರ್ಮಿತಿ ಕೇಂದ್ರ ತುಮಕೂರು ಮೊದಲಾದವರು ಇದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ…
ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಪ್ರಾಥಮಿಕ ಕೃಷಿ ಸಹಕಾರಿ ನಿಯಮಿತದಲ್ಲಿ ಕೋಟ್ಯಂತರ ರೂ.ಗಳ ದುರ್ಬಳಕೆಯಾಗಿದೆ ಎಂದು ನಿಯಮಿತದ ಸಿಇಒ ಮತ್ತು ಅಧ್ಯಕ್ಷರ ವಿರುದ್ಧ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕ ನಾಗರಾಜ್ ಆರೋಪಿಸಿದರು. ನಗರದ ಸಹಕಾರ ಇಲಾಖೆಯ ಕಚೇರಿ ಮುಂದೆ ಅವರು ಮಾತನಾಡಿದರು. ಇದೇ ವೇಳೆ ಮಾತನಾಡಿದ ಉಪಾಧ್ಯಕ್ಷ ವಿನಯ್ ಮತ್ತು ನಿರ್ದೇಶಕ ಪ್ರಕಾಶ್ ಯಾದವ್, ಸಾಮಾನ್ಯ ಸಭೆಯನ್ನು ಕೇಂದ್ರ ಸ್ಥಾನ ಬಿಟ್ಟು ಅಧ್ಯಕ್ಷರ ಊರಾದ ಕಲ್ಕೆರೆಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಿ, ನಿಯಮ ಉಲ್ಲಂಘಿಸಲಾಗಿದೆ. ಆರೋಪ ಸಾಬೀತಾದಲ್ಲಿ ನಿಯಮಿತವನ್ನು ಸೂಪರ್ ಸೀಡ್ ಮಾಡಬೇಕೆಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಚಂದ್ರಶೇಖರ್ ಮತ್ತು ದೇವಿರಮ್ಮ, ಮಾಜಿ ನಿರ್ದೇಶಕ ನಾಗರಾಜ್ ಹಾಗೂ ಗ್ರಾಮಸ್ಥ ರಾಜಣ್ಣ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು. ವರದಿ: ಆನಂದ್ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಪಾವಗಡ: ಅಪಘಾತದಲ್ಲಿ ತಮ್ಮೆರಡು ಕಾಲುಗಳನ್ನು ಕಳೆದುಕೊಂಡಿರುವ ಕೆ.ಟಿ.ಹಳ್ಳಿ ಗ್ರಾಮದ ಹನುಮಂತರಾಯಪ್ಪ ಅವರಿಗೆ ಪಾವಗಡ ತಾಲ್ಲೂಕಿನ ಸಮಾಜ ಸೇವಕರಾದ ನೇರಳೆ ಕುಂಟೆ ನಾಗೇಂದ್ರ ಕುಮಾರ್ ಆರ್ಥಿಕ ನೆರವು ನೀಡಿದರು. ಅತ್ಯಂತ ಕಡುಬಡತನದಲ್ಲಿರುವ ಹನುಮಂತರಾಯಪ್ಪನವರು ತೀವ್ರ ಸಂಕಷ್ಟದಲ್ಲಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಕೂಡ ಆರ್ಥಿಕವಾಗಿ ಅಶಕ್ತರಾಗಿದ್ದಾರೆ. ಈ ಮಾಹಿತಿ ಪಡೆದ ನೇರಳೆ ಕುಂಟೆ ನಾಗೇಂದ್ರ ಕುಮಾರ್, ಹನುಮಂತರಾಯಪ್ಪ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದರು. ವರದಿ: ನಂದೀಶ್ ನಾಯ್ಕ ಪಿ., ಪಾವಗಡ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ: ಬರದ ನಾಡಾದ ಮಧುಗಿರಿಯಲ್ಲಿ ಇಲ್ಲಿಯವರೆಗೂ ಅಧಿಕಾರ ನಡೆಸಿದ ಶಾಸಕರು ಕೋಟ್ಯಂತರ ಅನುದಾನ ತಂದು ನೂರಾರು ಚೆಕ್ ಡ್ಯಾಮ್ ಹಾಗೂ ಕೆರೆಗಳ ಅಭಿವೃದ್ಧಿ ಮಾಡಿ ರೈತರಿಗೆ ನೆರವಾಗುತ್ತಿದ್ದಾರೆ. ಆದರೆ ಇಲ್ಲೊಬ್ಬ ಕಿಡಿಗೇಡಿ ಜೆಸಿಬಿ ಬಳಸಿ ರಸ್ತೆ ಹಾಗೂ ಕೆರೆಯ ಕೋಡಿ ಒಡೆದು ಹಾಕಿ ಕೆರೆಯ ನೀರನ್ನು ಪೋಲು ಮಾಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ತಾಲೂಕಿನ ದೊಡ್ಡೇರಿ ಹೋಬಳಿಯ ಸಿದ್ದರಾಗಲು ಬಳಿಯ ಕೆರೆಯು ನೂರಾರು ಎಕರೆ ಭೂಮಿಗೆ ನೀರು ನಿರುಣಿಸುತ್ತಿದ್ದು, ಅರಣ್ಯದ ಮಧ್ಯೆ ಇರುವ ಕಾರಣ ಸಾವಿರಾರು ಜೀವರಾಶಿಗಳಿಗೆ ನೀರಿನ ಆಸರೆಯಾಗಿತ್ತು. ಈ ಕೆರೆಯು ಕಳೆದ ವರ್ಷ ಸುರಿದ ಮಳೆಗೆ ತುಂಬಿತ್ತು, ಆದರೆ ಇದೀಗ ಈ ಕೆರೆಯ ಹಿಂಭಾಗದ ಜಮೀನಿನವರು ಕೆರೆಕೋಡಿಯನ್ನು ಒಡೆದು ಹಾಕಿ ನೀರು ಪೋಲಾಗುವಂತೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಕೃತ್ಯ ನಡೆಸಿದವರನ್ನು ತಕ್ಷಣವೇ ಪೊಲೀಸರು ಬಂಧಿಸಬೇಕು ಎಂದು ಇಲ್ಲಿನ ರೈತರು ಆಗ್ರಹಿಸಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ವರದಿ: ಅಬಿದ್…
ಸರಗೂರು: ತಾಲ್ಲೂಕು ರಾಷ್ಟ್ರೀಯ ಹಬ್ಬ ಸಮಿತಿ ವತಿಯಿಂದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಚಲುವರಾಜು, ಶಿವಯೋಗಿ ಸಿದ್ದರಾಮೇಶ್ವರರವರು 12 ನೇ ಶತಮಾನದಲ್ಲಿ ಬಸವಣ್ಣರವರ ಕಾಲದಲ್ಲಿ ವಚನಕಾರವಾಗಿದ್ದರು ಎಂದು ಸಿದ್ದರಾಮೇಶ್ವರ ಇತಿಹಾಸವನ್ನು ವಿವರಿಸಿದರು. ಇದೇ ವೇಳೆ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ನಾಗರಾಜು. ವಕೀಲರಾದ ಚೌಡಹಳ್ಳಿ ಜವರಯ್ಯ, ಶಿಕ್ಷಕರಾದ ಕೆ.ಸಿ.ಕೋಡಯ್ಯ, ಶಿವಯೋಗಿ ಸಿದ್ದರಾಮೇಶ್ವರ ಅವರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾರಾಯಣ, ಕಾರ್ಯಾಧ್ಯಕ್ಷ ಬೋಜಯ್ಯ, ಪಟ್ಟಣ ಪಂಚಾಯಿತಿ ಸದಸ್ಯೆ ಹೇಮಾವತಿರಮೇಶ, ಮಹದೇವ, ಹನುಮಬೋವಿ, ಚಲುವರಾಜು, ವೀರಭದ್ರ ಸಿದ್ದಪುರ ವೆಂಕಟರಾಮ, ಶೀರಾದ್ದಾರ್ ಹರೀಶ್, ಗುರುರಾಜು, ರಾಜನಿರೀಕ್ಷಕರು ಮುಜೀಪ್, ರವಿಚಂದ್ರ ಹಾಗೂ ಭೋವಿ ಸಮುದಾಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ: ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಯ ಜನಕ ಲೋಟಿ ಗ್ರಾಮದ ಹೊರಹೊಲಯದಲ್ಲಿ ಜಿಂಕೆಗಳು ಪರಸ್ಪರ ಕಾಳಗ ನಡೆಸಿಕೊಂಡಿದ್ದು ಪರಿಣಾಮವಾಗಿ ಜಿಂಕೆಯ ಎಡಭಾಗದ ಕಾಲಿಗೆ ತೀವ್ರ ತರವಾದ ಪೆಟ್ಟು ಬಿದ್ದು ರಕ್ತ ಸ್ರಾವವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಮುಖಂಡರಾದ ರಾಜಮೋಹನ್, ಜನಕ ಲೋಟಿ ಗ್ರಾಮದ ಲಕ್ಷ್ಮಿ ನಾರಾಯಣ್ , ಕೆ ಜಿ ಎನ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜಲಾಲ್ ಭಾಷಾ, ಟ್ರಸ್ಟಿ ಗುಲಹಳ್ಳಿ ಗ್ರಾಮದ ಶಹಜಹಾನ್ ಗಾಯಗೊಂಡಿದ್ದ ಜಿಂಕೆಯನ್ನು ರಕ್ಷಿಸಿದ್ದಾರೆ . ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಜಲಾಲ್ ಭಾಷಾ ಮಾಧ್ಯಮದೊಂದಿಗೆ ಮಾತನಾಡಿ, ಮನುಷ್ಯನ ನೆರವಿಲ್ಲದೆ ವಾಸ ಮಾಡುವ ವನ್ಯಜೀವಿಗಳ ಸಮೂಹ ಹಾಗೂ ಅವುಗಳ ಸಂಖ್ಯೆಯನ್ನು ಅವುಗಳ ಅವಾಸ ಸ್ಥಾನದಲ್ಲಿಯೇ ಸಂರಕ್ಷಣೆ ಮಾಡುವುದು ನೈಜ ಸಂರಕ್ಷಣೆಯಾಗಿದೆ ಎಂದು ತಿಳಿಸಿದರು. ವರದಿ: ಅಬಿದ್ ಮಧುಗಿರಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಪುರ ಗೇಟ್ ಬಳಿ ಕಾರವೊಂದು ಮರಕ್ಕೆ ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 A ನಲ್ಲಿರುವ ಚಿಕ್ಕಪುರ ಗೇಟ್ ನ ಕೂಗಳತೆ ದೂರದಲ್ಲಿ ಇರುವ ಹುಣಸೆ ಮರಕ್ಕೆ ಮಾರುತಿ ಬ್ರೀಝ್ KA-44 M-8276 ನೋಂದಣಿ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂದಿನ ಭಾಗ ಪೂರ್ಣ ಜಖಂಗೊಂಡಿದ್ದು, ಈ ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು ತಮ್ಮ ಗ್ರಾಮವಾದ ಮುತ್ತುಗದಹಳ್ಳಿ ಯಿಂದ ಚಿಕ್ಕಪುರ ಮಾರ್ಗದಲ್ಲಿ ಸಂಚರಿಸುವಾಗ ಈ ಘಟನೆ ನಡೆದಿದೆ. ಈ ಕಾರು ಮುತ್ತುಗದಹಳ್ಳಿ ಗ್ರಾಮ ಶಿಕ್ಷಣ ಇಲಾಖೆಯಲ್ಲಿ, ಬಿ.ಆರ್.ಸಿ. ಆಗಿರುವ ರಾಜು ಎಂಬವರಿಗೆ ಸೇರಿದ್ದಾಗಿದ್ದು, ಅಪಘಾತದ ಪರಿಣಾಮ ಚಾಲಕನ ತಲೆಗೆ ತೀವ್ರ ಗಾಯವಾಗಿದ್ದು, ಗಾಯಾಳುವನ್ನು ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಶ್ರೀ ಆದಿಚುಂಚನಗಿರಿ ವೈದ್ಯಕೀಯದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸಂಬಂಧ ತುರುವೇಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…