ಕೊರಟಗೆರೆ: ತಾಯಿಯ ಮಾತು ಕೇಳದೇ ನೀರಿಗೆ ಈಜಾಡಲು ಇಳಿದ ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಡ್ಡಗೆರೆ ಗ್ರಾಮದ ಶ್ರೀ ವೀರನಾಗಮ್ಮ ಕಲ್ಯಾಣಿಯಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಲಕ್ಕನಹಳ್ಳಿ ಗ್ರಾಮದ ವೀರನಾಗಣ್ಣ ಎಂಬವರ 14 ವರ್ಷ ವಯಸ್ಸಿನ ಪುತ್ರ ತರುಣ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ವಡ್ಡಗೆರೆಯ ಶ್ರೀವೀರನಾಗಮ್ಮ ದೇವಿ ದರ್ಶನಕ್ಕೆ ತನ್ನ ತಾಯಿ ಜೊತೆಗೆ ಆಗಮಿಸಿದ್ದ ಬಾಲಕ, ತಾಯಿ ನೀರಿಗೆ ಇಳಿಯ ಬೇಡ ಎಂದರೂ ಕೇಳದೇ ನೀರಿಗೆ ಧುಮುಕಿದ್ದು, ಇದಾದ ಬಳಿಕ ನೀರಿನಿಂದ ಮೇಲೆ ಬರಲಾಗದೇ, ತಾಯಿಯ ಕಣ್ಣೆದುರೇ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಅಗ್ನಿಶಾಮಕ ದಳ, ತುರ್ತುವಾಹನ ಮತ್ತು ತಹಶೀಲ್ದಾರ್ ನಾಹೀದಾ ಜಂ ಜಂ ಬೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz