Author: admin

ಪಾವಗಡ : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ  ಅವರ ಹತ್ಯೆಯನ್ನು  ಖಂಡಿಸಿ,  ರಾಷ್ಟ್ರೀಯ ಹಿಂದು ಪರಿಷತ್  ಪ್ರಧಾನ ಕಾರ್ಯದರ್ಶಿಯಾದ ಅನಿಲ್ ಯಾದವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಬಜರಂಗದಳ ಹಾಗೂ ಶ್ರೀರಾಮಸೇನೆಯ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ,  ಪ್ರವಾಸಿ ಮಂದಿರದಿಂದ  ಶನಿಮಹಾತ್ಮ ವೃತ್ತದ ವರೆಗೂ ತೆರಳಿ ರಸ್ತೆಯುದ್ದಕ್ಕೂ ಜೈಶ್ರೀರಾಮ್ ಎಂಬ ಹರ್ಷೋದ್ಗಾರವನ್ನು ಮೊಳಗಿಸಿದರು. ಬಳಿಕ ಗ್ರೇಟ್ 2 ತಹಶೀಲ್ದಾರ್  ಸುಮತಿರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅನಿಲ್ ಯಾದವ್, ಹಿಂದೂ ಧರ್ಮದ ರಕ್ಷಣೆಯ ಮೂಲ ಮಂತ್ರವನ್ನು ಜಪಿಸುತ್ತ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದ ಆಡಳಿತದ ಅವಧಿಯಲ್ಲಿ ನಮ್ಮ ಹಿಂದೂ ಕಾರ್ಯಕರ್ತರ ಹತ್ಯೆ ಆಗಿರುವುದು ಖಂಡನೀಯ . ಈಗಲಾದರೂ ಪಕ್ಷವು ಎಚ್ಚೆತ್ತುಕೊಂಡು ಶೀಘ್ರವಾಗಿ ಎಲ್ಲಾ ಕೊಲೆಗಡುಕರನ್ನು ಬಂಧಿಸಿ ಗಲ್ಲಿಗೇರಿಸಬೇಕು. ಈ ಕೊಲೆಯ ಹಿಂದಿರುವ ಸಂಘಟನೆಗಳನ್ನು ಗುರುತಿಸಿ ಕಾನೂನಿನಡಿಯಲ್ಲಿ ಕ್ರಮಕೈಗೊಳ್ಳಬೇಕು.  SDPI ,PFI,CFI ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು ಮತ್ತು ಮೃತಪಟ್ಟ ಕುಟುಂಬದವರಿಗೆ 50 ಲಕ್ಷ ರೂಪಾಯಿಗಳ ಪರಿಹಾರವನ್ನು ಸರ್ಕಾರ ತಕ್ಷಣವೇ ನೀಡಬೇಕೆಂದು…

Read More

ಸರಗೂರು: ಮಳೆಯಿಂದ ಮನೆ ನಾಶವಾಗಿದ್ದರೂ, ಮನೆ ಮಂಜೂರು ಮಾಡದೇ ಇರುವ ಕಾರಣ ಕುಟುಂಬವೊಂದು ಶೌಚಾಲಯದಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಸರಗೂರು ತಾಲ್ಲೂಕಿನ ಪಟ್ಟಣದ 10 ನೇ ವಾರ್ಡಿನಲ್ಲಿ ನಡೆದಿದೆ. ಟೈಲರ್ ವೃತ್ತಿಯ ನಾಗರಾಜು ಹಾಗೂ ಅವರ ತಾಯಿ, ಪತ್ನಿ ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಕಳೆದ ವರ್ಷ ಬಿದ್ದ ಮಳೆಯಿಂದಾಗಿ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೆ ಮಂಜೂರು ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಇವರಿಗೆ ಮನೆ ಮಂಜೂರು ಆಗಿಲ್ಲ, ಅಧಿಕಾರಿಗಳು ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇವರ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದು,  ಆದರೆ, ಮನೆ ಇಲ್ಲದ ಕಾರಣ ಇವರು ಶೌಚಾಲಯದಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೊಂದು ಗಂಭೀರ ಪರಿಸ್ಥಿತಿಗಳಿದ್ದರೂ, ಪಟ್ಟಣ ಪಂಚಾಯತ್,  ತಾಲೂಕು ಆಡಳಿತ ಮನೆಯನ್ನು  ಮಂಜೂರು ಮಾಡಿಲ್ಲ ಎಂದು ಸ್ಥಳೀಯರಾದ ರಮೇಶ್ ಎಂಬವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಮಿಕ ಕಟ್ಟಡ ನಿರ್ಮಾಣ ಸಂಘದ…

Read More

ಗುಬ್ಬಿ: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಬಜರಂಗದಳದ ಹರ್ಷ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮುಖಂಡರು, ಧರ್ಮದ ರಕ್ಷಣೆಗೆಂದೇ ಬಾಳನ್ನು ಮುಡುಪಾಗಿಟ್ಟು, ಸಮಾಜಕ್ಕೆ ತನ್ನನ್ನೇ ತಾನು ಅರ್ಪಿಸಿಕೊಂಡು ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಂತಹ ಹರ್ಷ, ದ್ರೋಹಿಗಳ ಸಂಚಿಗೆ ಬಲಿಯಾಗಿದ್ದು, ಧರ್ಮದ ವಿಚಾರವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವಂತಹ ಅವರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಇದು ಹಿಂದೂ ಸಮಾಜಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಇದನ್ನು ಹೀಗೆ ಬಿಟ್ಟರೆ ಇಡೀ ದೇಶಕ್ಕೆ ಗಂಡಾಂತರ ಕಾದಿದೆ ಎಂಬುದು ಎಲ್ಲರಿಗೂ ಅರ್ಥವಾಗಬೇಕಿದೆ. ಹತ್ಯೆ ಮಾಡಿದವರನ್ನು ಸರಕಾರ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು. ಈ ಹತ್ಯೆಯು ದೇಶದ್ರೋಹಿ ಸಂಚಿನ ಹತ್ಯೆಯಾಗಿರುವುದರಿಂದ ಇದರ ತನಿಖೆಯನ್ನು ಕೇಂದ್ರ ತನಿಖಾ ದಳ ಗಳಾದ ಎನ್ ಐಎ ಮತ್ತು ಸಿಬಿಐಗೆ ಒಪ್ಪಿಸಿ ಈ ಹಿಂದೆ ಇರುವ ಸಮಾಜ ಘಾತುಕರ ಸಂಚನ್ನು ಬಯಲಿಗೆಳೆದು ಅವರನ್ನು ಕಠಿಣವಾಗಿ ಶಿಕ್ಷಿಸಬೇಕು ಒತ್ತಾಯಿಸಿದರು. ಇಂತಹ ಕೃತ್ಯಗಳನ್ನು ನಡೆಸಿ ಸಮಾಜದ ಶಾಂತಿಯನ್ನು…

Read More

ತುಮಕೂರು: ಚಿತ್ರನಟ ಚೇತನ್ ಕುಮಾರ್ ನ್ಯಾಯಧೀಶರಿಗೆ ನಿಂದನೆ ಮಾಡಿದ್ದಾರೆಂಬ ಆಕ್ಷೇಪಾರ್ಹ ಟ್ವೀಟ್ ನ ಆರೋಪದಡಿಯಲ್ಲಿ ಏಕಾಏಕಿ ಪೊಲೀಸರು ಯಾವುದೇ ಪೂರ್ವ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತ ನಾಗಣ್ಣ ಜಿ.ಕೆ. ಟೀಕಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅವರ ಬಂಧನ ಸಂಬಂಧ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಟ ಚೇತನ್ ಒಬ್ಬ ಸಾಮಾಜಿಕ ಕಳಕಳಿ ಹೊಂದಿರುವ ಸಾಮಾಜಿಕ ಹೋರಾಟಗಾರ. ಅನ್ಯಾಯ ಪ್ರಶ್ನಿಸುವ ಮಾನವತಾದಿ, ಬುದ್ಧ ಬಸವ, ಪೆರಿಯಾರ್, ಡಾ.ಬಿ.ಆರ್.ಅಂಬೇಡ್ಕರ್ ಅಂತಹವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಧ್ವನಿಯಿಲ್ಲದವರಿಗೆ ದನಿಯಾಗುವ ನಿಟ್ಟಿನಲ್ಲಿ ಸಮಾನತೆ ಪಾಲಿಸುವ ಹಿತದೃಷ್ಟಿಯ ಚಿಂತಕ ಅಂದರೆ ಅತಿಶಯೋಕ್ತಿಯೆನಿಸದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಕದಡುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಸದಾ ಶಾಂತಿ, ಸೌಹಾರ್ಧತೆ, ಸೋದರತ್ವ ಭಾವನೆ ಇರುವ ಭಾವುಕ ಜೀವಿ ಚೇತನ್ ಅವರ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳ…

Read More

ಮಾರ್ಚ್ 4ಕ್ಕೆ ಮತ್ತೆ ಅಧಿವೇಶನ(Karnataka Assembly Session) ಪ್ರಾರಂಭವಾಗಲಿದೆ. ಇದರ ಬಗ್ಗೆ ಪೂರ್ವ ತಯಾರಿಗಳನ್ನು ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ. ಸಮಯ-ಹಣ ವ್ಯರ್ಥ; ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯಿಲ್ಲ! ಸದನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಾಗಿತ್ತು. ಪ್ರತಿಭಟನೆಯಿಂದಾಗಿ ಸದನವನ್ನು ಮೊಟಕುಗೊಳಿಸಬೇಕಾಯಿತು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ನೆರೆ ಹಾಗೂ ಬೆಳೆ ಪರಿಹಾರದ ವಿತರಣೆ ಬಗ್ಗೆ ಚರ್ಚೆ ಆಗಬೇಕಿತ್ತು. ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಆಗದೆ ರಾಜಕೀಯ ನಾಯಕರು ಸಮಯ ಮತ್ತು ಹಣ ವ್ಯರ್ಥ ಮಾಡಿದ್ದಾರೆ. ಕಲಾಪದಲ್ಲಿ ‘ಕೈ’ ನಾಯಕರ ಅಹೋರಾತ್ರಿ ಧರಣಿ ಈ ಭಾರಿಯ ಜಂಟಿ ಅಧಿವೇಶನ ಕೇವಲ ಕಾಂಗ್ರೆಸ್ ಶಾಸಕರ ಧರಣಿಯಿಂದ ಕೂಡಿತ್ತು. ಸಚಿವ ಈಶ್ವರಪ್ಪ(KS Eshwarappa)ನವರ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಶಾಸಕರು ಹಾಗೂ ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸಿದರು. ಈ ಮೂಲಕ ಸದನದ ಕಲಾಪ ನಡೆಯಲು ಬಿಡದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿದರು. ಕಾಂಗ್ರೆಸ್ ನಡೆಸಿದ…

Read More

ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಾ, ಹಣ ಸಂಪಾದನೆ ಮಾಡುತ್ತಿದ್ದ ನೈಜಿರಿಯಾ ದೇಶದ ಪ್ರಜೆಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಲಾರೆನ್ಸ್ ಜೆನ್ವೋಕ್ ಬಂಧಿತ ನೈಜಿರಿಯಾ ಪ್ರಜೆ. ಈತನಿಂದ ಎಂಡಿಎಂಎ ಕ್ರಿಸ್ಟಲ್ 6 ಗ್ರಾಂ, ನೀಲಿ ಬಣ್ಣದ ಎಂಡಿಎಂಎ ಎಕ್ಸ್ಟಿಸಿ 87 ಮಾತ್ರೆಗಳು, ಗುಲಾಬಿ ಬಣ್ಣದ 9 ಎಕ್ಸ್ಟಿಸಿ ಮಾತ್ರೆಗಳು, ಹಳದಿ ಬಣ್ಣದ 4 ಎಕ್ಸ್ಟಿಸಿ ಪಿಲ್ಸ್ ಮತ್ತು ಜಿಪ್ ಲಾಕ್ ಪ್ಲಾಸ್ಟಿಕ್ ಕವರ್ಸ್ಗಳನ್ನು ವಶಕ್ಕೆ ಪಡೆದಿರುತ್ತಾರೆ. ತಲಘಟ್ಟಪುರ ಪೊಲೀಸರಿಗೆ 100 ಅಡಿ ರಸ್ತೆ, ತುರಹಳ್ಳಿ ಪಾರೆಸ್ಟ್ ರಸ್ತೆಯಿಂದ ಚಿಕ್ಕೇಗೌಡನ ಪಾಳ್ಯಕ್ಕೆ ಹೋಗುವ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪ ವಿದೇಶಿ ಪ್ರಜೆಯೊಬ್ಬ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ.ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ದಾಳಿ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜಿರಿಯಾ ಪ್ರಜೆಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಈ ಮಾದಕ ವಸ್ತುಗಳನ್ನು ವಿದೇಶ ದಿಂದ ತರಿಸಿಕೊಂಡು ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆ…

Read More

ಬೆಲೆ ಏರಿಕೆಯ ನಡುವೆಯೇ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಹೊರೆ ಬೀಳಲಿದೆ. ಪೆಟ್ರೋಲ್, ಡೀಸೆಲ್ ನಂತರ ಈಗ ಎಲ್‌ಪಿಜಿ ( LPG Price Hike) ಕೂಡ ಗ್ರಾಹಕರ ಜೇಬು ಸುಡಲಿದೆ. ಏಪ್ರಿಲ್‌ನಿಂದ ಅಡುಗೆ ಅನಿಲ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಪ್ರಪಂಚದಾದ್ಯಂತ ಗ್ಯಾಸ್ ನಲ್ಲಿ ದೊಡ್ಡ ಕೊರತೆ ಕಂಡುಬಂದಿದೆ (Global Gas Crunch). ಏಪ್ರಿಲ್‌ನಿಂದ ಅದರ ಪರಿಣಾಮ ಭಾರತದ ಮೇಲೂ ಬೀಳುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಇಲ್ಲಿಯೂ ಗ್ಯಾಸ್ ಬೆಲೆಗಳು ದ್ವಿಗುಣಗೊಳ್ಳಬಹುದು (Domestic Gas Prices) . ಜಾಗತಿಕ ಅನಿಲ ಕೊರತೆ : ಜಾಗತಿಕ ಮಟ್ಟದಲ್ಲಿಯೇ ಅನಿಲದ ಕೊರತೆಯಿಂದಾಗಿ ಸಿಎನ್‌ಜಿ (CNG), ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು (electricity bill) ಹೆಚ್ಚಾಗುತ್ತವೆ. ಇದರ ಜೊತೆಗೆ ಕಾರ್ಖಾನೆಗಳಲ್ಲಿ ಯಂತ್ರಗಳನ್ನು ನಡೆಸುವುದು ದುಬಾರಿಯಾಗಬಹುದು. ಅಲ್ಲದೆ, ಉತ್ಪಾದನಾ ವೆಚ್ಚವೂ ಹೆಚ್ಚಾಗಬಹುದು. ಸರ್ಕಾರದ ರಸಗೊಬ್ಬರ ಸಬ್ಸಿಡಿ ಮಸೂದೆಯಲ್ಲೂ ಹೆಚ್ಚಳ ಕಂಡು ಬರಬಹುದು (Fertilizer Subsidy Bill). ಒಟ್ಟಿನಲ್ಲಿ ಇವೆಲ್ಲದರ ಪರಿಣಾಮ ಸಾಮಾನ್ಯ ಗ್ರಾಹಕರ ಮೇಲೆ ಮಾತ್ರ ಆಗಲಿದೆ.…

Read More

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಕೆಲವು ಅಂಶಗಳು ಏಕಪಕ್ಷೀಯ ಮತ್ತು ಅತಾರ್ಕಿಕವಾಗಿದ್ದು ದೇಶಾದ್ಯಂತ ಮಕ್ಕಳಿಗೆ ಏಕರೂಪದ ಪಠ್ಯಕ್ರಮ ಪರಿಚಯಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ಕುರಿತು ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಇಂದು ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರದ ಶಿಕ್ಷಣ, ಕಾನೂನು ಮತ್ತು ನ್ಯಾಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ನೋಟಿಸ್‍ ಗಳನ್ನು ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ.30ಕ್ಕೆ ನಿಗದಿಪಡಿಸಿತು.ಆರ್‌ ಟಿಇ ಅಧಿನಿಯಮದ ಸೆಕ್ಷನ್1(4) ಮತ್ತು 1(5) ಹಾಗೂ ಮಾತೃಭಾಷೆಯಲ್ಲಿ ಏಕರೂಪದ ಪಠ್ಯಕ್ರಮದ ಅನುಪಸ್ಥಿತಿ ಅಜ್ಞಾನದ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಮೂಲಭೂತ ಕರ್ತವ್ಯಗ¼ ಅನುಷ್ಠಾನವನ್ನು ವಿಳಂಬಗೊಳಿಸುತ್ತದ ಎಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು. ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವುದು ಕೇಂದ್ರದ ಮೂಲಭೂತ ಕರ್ತವ್ಯ. ಆದರೆ ಇದರಲ್ಲಿ ಸಂಪುರ್ಣ ವಿಫಲವಾಗಿರುವ ಕೇಂದ್ರ ಸರ್ಕಾರ ಅತ್ಯಂತ ಹಳೆಯದಾದ 2005ರ ಈ ಮುಂಚಿನ ರಾಷ್ಟ್ರೀಯ ಪಠ್ಯಕ್ರಮ ಕಾರ್ಯರ್ಕ…

Read More

ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ 25 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಮೈಸೂರಿನ ಆರ್ ಗೇಟ್ ಬಳಿ ಪ್ರತಿಭಟನೆ ನಡೆಸಿದ ಅವರು, ಕೊಲೆಗೆ ಕಾರಣರಾದವರನ್ನು ಎಡೆಮುರಿ ಕಟ್ಟಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬದವರಿಗೆ ಕನಿಷ್ಠ 25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೊಲೆಯ ಹಿಂದೆ ಯಾವುದೇ ಶಕ್ತಿಗಳಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಘಟನೆ ಹಿಂದೆ ಪೊಲೀಸ್ ವೈಫಲ್ಯ ಎದ್ದು ಕಾಣುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಬೇಕು ಎಂದು ಹೇಳಿದರು. ಟಿಪ್ಪು ಎಕ್ಸ್‍ ಪ್ರೆಸ್ ರೈಲಿನ ಹೆಸರನ್ನು ಬದಲಾವಣೆ ಮಾಡಲು ಹೇಳಿರುವ ಸಂಸದ ಪ್ರತಾಪ್‍ಸಿಂಹ ಅವರ ಹೇಳಿಕೆಯನ್ನು ಖಂಡಿಸಿದ ಅವರು, ಸಂಸದರು ಇಂತಹ ಅನಗತ್ಯ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಟಿಪ್ಪು ಅವರು ಸ್ವಾತಂತ್ರ್ಯಕ್ಕಾಗಿ ಅಪರಿಮಿತ ಹೋರಾಟ ಮಾಡಿದ್ದಾರೆ. ನಾಗರಹೊಳೆ ಹೆಸರು ಬದಲಾಯಿಸಿ ಕಾರ್ಯಪ್ಪ ಹೆಸರಿಡುವಂತೆ ಹೇಳಿದ್ದಾರೆ. …

Read More

ಹಿರಿಯೂರು:  ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಕರ್ಪೂರದಾರತಿ ಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾಶ್ರೀನಿವಾಸ್ ಅವರು ಭಾಗಿಯಾಗಿದ್ದರು. ಇನ್ನೂ ಕರ್ಪೂರದಾರತಿ ಪೂಜೆಯಲ್ಲಿ ಮೊದಲ ಕರ್ಪೂರದಾರತಿಯನ್ನು ನಗರ ಸಭಾ ಸದಸ್ಯರಾದ ಈ .ಮಂಜುನಾಥ್ 64,500 ರೂಪಾಯಿಗೆ ನಡೆಸಿದರು. ಎರಡನೆಯ ಕರ್ಪೂರದ ಆರತಿಯನ್ನು ಮಾಹಿ ಜ್ಯೂಯಲರ್ಸ್ ಮಾಲೀಕ  ಕೌಶಿಕ್ ನಾಯ್ಡು 35,500 ರೂಪಾಯಿಗಳಿಗೆ  ನಡೆಸಿದರು. ಮೂರನೇ  ಕರ್ಪೂರದಾರತಿಯನ್ನು  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೇತ್ರಾವತಿ ಅರುಣ್ ಕುಮಾರ್ ಬ್ಯಾಡರಹಳ್ಳಿ ಅವರು  31,500 ರೂಪಾಯಿಗಳಿಗೆ ನಡೆಸಿದರು. ಈ ಸಂದರ್ಭದಲ್ಲಿಹಿರಿಯೂರು ತಾಲ್ಲೂಕಿನ ಶಾಸಕಿ  ಪೂರ್ಣಿಮಾ ಅವರು ಸ್ವಾಮಿಗೆ ಕರ್ಪೂರದಾರತಿಯನ್ನು ಬೆಳಗಿದರು. ಬಳಿಕ  ಕೌಶಿಕ್ ನಾಯ್ಡು ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ವಿ, ನಗರಸಭೆ ಅಧ್ಯಕ್ಷರಾದ ಶಂಶುದ್ ಉನ್ನಿಸಾ, ಉಪಾಧ್ಯಕ್ಷರಾದ ಬಿ.ಎನ್.ಪ್ರಕಾಶ್, ಕೌಶಿಕ್ ನಾಯ್ಡು , ಜಿ.ಎಲ್.ಮೂರ್ತಿ, ನಗರಸಭೆ ಪೌರಾಯುಕ್ತರಾದ ಡಿ.ಉಮೇಶ್ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಆರ್.ನಾಗೇಂದ್ರ…

Read More