ತುಮಕೂರು: ಜಿಲ್ಲೆ ಮತ್ತು ತುಮಕೂರು ನಗರದ ಮಹಿಳಾ ಘಟಕದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಉಚಿತ ಮಧುಮೇಹ ಮತ್ತು ಬಿ.ಪಿ. ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮವನ್ನು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಲೀಲಾದೇವಿ ಆರ್ ಪ್ರಸಾದ್, ಜಿಲ್ಲಾಧ್ಯಕ್ಷೆ ತಾಹೆರಾ ಕುಲ್ಸುಮ್, ನಗರ ಅಧ್ಯಕ್ಷೆ ಸಿ.ಡಿ. ಜಯಶ್ರೀ ಉದ್ಘಾಟಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ನಾವು ಮಹಿಳಾ ದಿನಾಚರಣೆ ಕೇವಲ ವರ್ಷದಲ್ಲಿ ಒಂದು ದಿವಸಕ್ಕೆ ಸೀಮಿತವಾಗಬಾರದು. ನಾವು ಏನಾದರೂ ಬದಲಾವಣೆ ತರಬೇಕು. ವರ್ಷಕ್ಕೆ ಒಂದು ದಿವಸ ಆಚರಣೆ ಮಾಡಿದರೆ, ಯಾವುದೇ ಬದಲಾವಣೆ ಆಗದು. ಹೆಣ್ಣುಮಕ್ಕಳಿಗೆ ಕೆಲಸಗಳಲ್ಲಿ ಕೂಲಿ ತಾರತಮ್ಯ ಮಾಡಲಾಗುತ್ತದೆ. ಇದು ನ್ಯಾಯಾನಾ? ಇದಕ್ಕೆ ನಾವು ಹೋರಾಟ ಮಾಡುವುದಿಲ್ಲ. ಆದ್ದರಿಂದ ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು.
ನಂತರ ಮಾತನಾಡಿದ ತಾಹೆರಾ ಕುಲ್ಸುಮ್, ಹೆಣ್ಣುಮಕ್ಕಳಿಗೆ ಉತ್ತಮ ಆದ್ಯತೆ ಕೊಡಬೇಕು ಹಾಗೂ ಪುರುಷರ ಸಹಕಾರದಿಂದ ನಾವು ಮುಂದುವರಿಯಬೇಕು. ಮಹಿಳೆಯರು ಧೈರ್ಯದಿಂದ ಇರಬೇಕು. ನಾವು ಎಲ್ಲರೂ ಹೊಂದಾಣಿಕೆಯಿಂದ ಮುಂದೆ ಹೋಗಬೇಕು. 96 97 ರಲ್ಲಿ ನಾವು 33 ಪರ್ಸೆಂಟ್ ಮೀಸಲಾತಿಗಾಗಿ ಯಾವುದೇ ದೆಹಲಿಗೆ ಕೂಡ ಹೋಗಿದ್ದೆವು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಪ್ಪ, ನಗರ ಅಧ್ಯಕ್ಷ ಬೆಳ್ಳಿ ಲೋಕೇಶ್, ಡಾ.ಪದ್ಮಾಕ್ಷಿ ಲೋಕೇಶ್, ಸಿ.ಡಿ. ಜಯಶ್ರೀ ಹಾಗೂ ಜೆಡಿಎಸ್ ಮಹಿಳಾ ಘಟಕ ತುಮಕೂರು ನಗರ, ಹಾಗೂ ಜೆಡಿಎಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ: ಎ.ಎನ್. ಪೀರ್ ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy