Author: admin

ಚಿಕ್ಕನಾಯಕನಹಳ್ಳಿ: ಅನ್ನ ದಾಸೋಹ, ಅಕ್ಷರ ದಾಸೋಹ, ವೇದಾಧ್ಯಯನವನ್ನು ಶುದ್ಧ ಕಾಯಕವನ್ನಾಗಿಸಿಕೊಂಡಿರುವ ಗೋಡೆಕೆರೆ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿಗಳ ಗುರುವಂದನಾ ಕಾರ್ಯಕ್ರಮವನ್ನು ಮೇ 10 ರಂದು ಗೋಡೆಕೆರೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಗೋಡೆಕೆರೆಯ ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಾವಿ ಕಾರದ ವೀರ ಬಸವ ಮಹಾಸ್ವಾಮಿಗಳು ತಿಳಿಸಿದರು. ಗುಬ್ಬಿ ತಾಲೂಕು ಗೊಳ್ಳಹಳ್ಳಿ ಶ್ರೀ ಸಿದ್ಧಲಿಂಗೇಶ್ವರ ಮಹಾ ಸಂಸ್ಥಾನದ ವಿಭವ ವಿದ್ಯಾಶಂಕರ್ ದೇಶಿಕೇಂದ್ರ ಸ್ವಾಮಿ ಮಾತನಾಡಿ, ಗುರುವಂದನಾ ಕಾರ್ಯಕ್ರಮದ ಧ್ವಜಾರೋಹಣವನ್ನು ಕುಪ್ಪೂರು-ತಮ್ಮಡಿಹಳ್ಳಿ ಮಠದ ಡಾ. ಅಭಿನವ ಮಲ್ಲಿಕಾರ್ಜುನ ಸ್ವಾಮಿಗಳು ನೆರವೇರಿಸಲಿದ್ದಾರೆ. ನಂತರ ಶ್ರೀ ಗುರು ಸಿದ್ಧರಾಮೇಶ್ವರ ಸ್ವಾಮಿಯವರ ಉತ್ಸವ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಸಿದ್ಧೇಹಳ್ಳಿಯ ಇಮ್ಮಡಿ ಕರಿಬಸವ ಸ್ವಾಮಿ, ಕೊಳ ಗುಂದದ ಜಯಚಂದ್ರಶೇಖರ ಸ್ವಾಮಿ, ನಂದಿಗುಡಿಯ ಸಿದ್ಧರಾಮೇಶ್ವರ ಸ್ವಾಮಿ, ಸೀಗೇಗುಡ್ಡದ ನಂದೀಶ್ವರ ಸ್ವಾಮಿ ಸೇರಿದಂತೆ ನಾಡಿನ ಹಿರಿಯ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ. ಪ್ರಾಸ್ತಾವಿಕವಾಗಿ ಕರಡಿಗವಿಮಠದ ಶಿವಶಂಕರ ಶಿವಯೋಗಿ ಸ್ವಾಮಿಗಳು ಮಾತನಾಡುವರು ಎಂದರು. ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ತಾ. ಪಂ. ಮಾಜಿ ಅಧ್ಯಕ್ಷ ಎಂ. ಎಂ. ಜಗದೀಶ್ ಮಾತನಾಡಿ,…

Read More

ಐಡಿಹಳ್ಳಿ: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದಾರಿ ತಪ್ಪಿ ಕೆಟ್ಟಚಟಗಳಿಗೆ ಬಲಿಯಾಗುತ್ತಿದೆ. ಇದರಿಂದ ದೂರ ಇರಲು ಕ್ರೀಡೆಯಲ್ಲಿ ಭಾಗವಹಿಸಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಆರ್. ರಾಜೇಂದ್ರ ತಿಳಿಸಿದರು. ಅವರು ಐಡಿಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಐಡಿಹಳ್ಳಿ ಗ್ರಾಮದಲ್ಲಿ ಶಾಸಕ ಕೆ.ಎನ್.ರಾಜಣ್ಣರವರು ಮುಖ್ಯಮಂತ್ರಿಗಳಿಂದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಕೊಡಿಸಲಿದ್ದು, ರಾಜ್ಯದಲ್ಲಿ ನಡೆದ ಉಪ ಚುನಾವಣೆ ಪ್ರಯುಕ್ತ ಮುಂದೂಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಅರ್ಹರಿಗೆ ನಿವೇಶನಗಳ ಹಕ್ಕುಪತ್ರ ವಿತರಿಸುತ್ತಾರೆ. ಗಡಿಭಾಗದ ರಸ್ತೆ ಕಾಮಗಾರಿಗಳು ಹಂತ ಹಂತವಾಗಿ ಅಭಿವೃದ್ಧಿ ಕಾಣುತ್ತಿವೆ. ಶಾಸಕರು ತಾಲ್ಲೂಕಿಗೆ ಈಗಾಗಲೇ ಸುಮಾರು 1500 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಇನ್ನೂ ಹೆಚ್ಚಿನ ಮನೆಗಳ ಮಂಜೂರಾತಿ ತರುವುದಾಗಿ ತಿಳಿಸಿದರು. ಆರಕ್ಷಕ ನಿರೀಕ್ಷಕ ಹನುಮಂತರಾಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗೇಶ್‌ಬಾಬು, ವಿಎಸ್‌ಎಸ್ ಎನ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮಾಜಿ ಅಧ್ಯಕ್ಷ ಶನಿವಾರಂ ರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಪಿ.ಟಿ. ಗೋವಿಂದಯ್ಯ, ಮಾಜಿ ಅಧ್ಯಕ್ಷ ನರಸರೆಡ್ಡಿ, ಮುಖಂಡರಾದ ಶ್ರೀಧರರೆಡ್ಡಿ, ಸಿದ್ದಲಿಂಗಪ್ಪ, ಅನಿಲ್…

Read More

ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ಮೂಲಕ ಹೇಮಾವತಿ ನೀರು ಹರಿಸುವ ಎಕ್ ಪ್ರೆಸ್ ಪೈಪ್ ಲೈನ್ ಕಾಮಗಾರಿಗೆ ವಿರೋಧ ನನ್ನದೂ ಇದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು. ಅವರು ಚೇಳೂರು ಹೋಬಳಿ ರಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಒಂದೂವರೆ ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಪಾಲಿನ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಈಗಾಗಲೇ ಮುಖ್ಯನಾಲೆ ಅಗಲೀಕರಣ ಮಾಡಲಾಗಿದ್ದು, ಇದರ ಮೂಲಕವೇ ನೀರು ಹರಿಸಿಕೊಳ್ಳಲಿ ಎಂಬ ಆಗ್ರಹ ನಾನು ಸಹ ಮಾಡುತ್ತಿದ್ದೇನೆ ಎಂದರು. ಹೊಸ ಆಸ್ಪತ್ರೆಗಳ ನಿರ್ಮಾಣ ಗ್ರಾಮೀಣ ಭಾಗದಲ್ಲಿ ನಡೆದಿದೆ. 68 ಲಕ್ಷ ರೂ.ಗಳಲ್ಲಿ ಹೂವಿನಕಟ್ಟೆ ಹಾಗೂ ಅಂಕಸಂದ್ರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸಿದ್ಧತೆ ಮಾಡಲಾಗಿದೆ. ಹೊರ ಗುತ್ತಿಗೆಯಲ್ಲಿ ಡಾಕ್ಟರ್ ಸೇರಿದಂತೆ ಎಲ್ಲಾ ತಂತ್ರಜ್ಞರನ್ನು ನೇಮಿಸಲಾಗಿದೆ. ಅವಶ್ಯ ಡಾಕ್ಟರ್‌ಗಳ ನೇಮಕ ಕೂಡಲೇ ಆಗಲಿದೆ ಎಂದ ಅವರು, ಉಪ…

Read More

ತುಮಕೂರು (ತಿಪಟೂರು):   2026 — 27ನೇ ಸಾಲಿನ ತಿಪಟೂರು ವಕೀಲರ ಸಂಘದ ಕಾರ್ಯಕಾರಿ ಮಂಡಳಿಯ ಚುನಾವಣೆಯಲ್ಲಿ  ಸಂಘದ  ಅಧ್ಯಕ್ಷರಾಗಿ ಮೂರನೇ ಅವಧಿಗೆ ಎಸ್. ಜಯಣ್ಣ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಸನ್ನಕುಮಾರ್ ಎಲ್. , ಕಾರ್ಯದರ್ಶಿಯಾಗಿ ಬಿ. ಮಲ್ಲಿಕಾರ್ಜುನಯ್ಯ, ಜಂಟಿ ಕಾರ್ಯದರ್ಶಿಯಾಗಿ ಎಸ್.ಎನ್. ರವಿ, ಖಜಾಂಚಿಯಾಗಿ ಪಿ.ಲಕ್ಷ್ಮೀ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಕೆ.ಆರ್.ಉಮೇಶ್, ಜಿ.ಆರ್.ಶ್ರೀನಿವಾಸ್, ಎನ್ .ಸಿ.ಅಶೋಕ್, ಉಮಾದೇವಿ ಕೆ., ಮಮತಾ. ಕೆ.ಎಸ್., ತಿಪಟೂರು ವೆಂಕಟೇಶ್ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಬಸವರಾಜು.ಟಿ. ಕಾರ್ಯನಿರ್ವಹಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎಸ್. ಜಯಣ್ಣ, ಈ ಹಿಂದೆಯೂ ಸಂಘದಲ್ಲಿ ಕಾರ್ಯನಿರ್ವಹಣೆ ಮಾಡಿದ ಅನುಭವವಿದ್ದು, ಸಂಘದ ಏಳಿಗೆಗಾಗಿ ಶ್ರಮಿಸುತ್ತೇನೆ. ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಬದ್ಧನಾಗಿದ್ದು ಹಿರಿಯ ಕಿರಿಯ ವಕೀಲರುಗಳ ಸಹಕಾರ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ತುಮಕೂರು: ಮೇ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 3 ವರ್ಷ ತುಂಬಲಿದ್ದು, ತುಮಕೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಳ್ಳುವಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತುಮಕೂರು ಜಿಲ್ಲೆಯಲ್ಲಿ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಮೇ 20ರಂದೇ ರಾಜ್ಯ ಸರ್ಕಾರಕ್ಕೆ 3 ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ತುಮಕೂರಿನಲ್ಲೇ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. 20ರಂದು ನಡೆಯುವ ಸಮಾವೇಶಕ್ಕೆ ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸಲಿದ್ದು, ರಾಜ್ಯಾದ್ಯಂತ ಆಗಮಿಸುವ ಫಲಾನುಭವಿಗಳಿಗಾಗಿ 4,000 ಬಸ್ಸುಗಳ ಅಗತ್ಯವಿರುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಅಭೂತಪೂರ್ವ ಯಶಸ್ವಿ ಯೋಜನೆಗಳ ಅನುಷ್ಠಾನ ಮತ್ತಿತರ ಇಲಾಖೆಗಳ ಪ್ರಗತಿ ದರ್ಶನ…

Read More

ತುಮಕೂರು: ಜೀವನದ ಸತ್ಯವನ್ನು ಅರ್ಥಪೂರ್ಣವಾಗಿ ಬಹಳ ಸರಳವಾಗಿ ತಿಳಿಸಿದ ಬುದ್ಧನ ತತ್ವಗಳು ಸೂರ್ಯ ಚಂದ್ರರು ಇರುವ ತನಕ ಪ್ರಸ್ತುತವಾಗಿರುತ್ತವೆ ಎಂದು ಗೃಹಸಚಿವರೂ ಹಾಗೂ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದ ಹೊರವಲಯದ ಶ್ರೀ ಸಿದ್ಧಾರ್ಥ ನಗರದಲ್ಲಿ ಆಯೋಜಿಸಲಾಗಿದ್ದ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಗವಾನ್ ಬುದ್ಧರು ಹುಟ್ಟಿದ, ಬುದ್ಧರಿಗೆ ಜ್ಞಾನೋದಯವಾದ ಹಾಗೂ ಬುದ್ಧರು ಸಮಾಧಿ ಸ್ಥಿತಿಗೆ ತೆರಳಿದ ದಿನ ಇದಾಗಿದ್ದರಿಂದ ಈ ದಿನಕ್ಕೆ ಪ್ರಾಮುಖ್ಯತೆ ಬಂದಿದೆ. ಇಂದು ಜಗತ್ತು ದುಃಖದಲ್ಲಿ ಬಿದ್ದು ನರಳುತ್ತಿದೆ. ಈ ದುಃಖದಿಂದ ಹೊರಬರಬೇಕು ಎಂದರೆ ಬುದ್ಧನ ಅಷ್ಟಾಂಗ ಮಾರ್ಗವನ್ನು ಪಾಲಿಸಬೇಕು. ಆಗ ಮಾತ್ರ ಜಗತ್ತು ದುಃಖದಿಂದ ಹೊರಬರಲು ಸಾಧ್ಯ. ಬುದ್ಧನ ತತ್ವಗಳಲ್ಲಿ ಮನುಷ್ಯ ಮನುಷ್ಯನಿಗೆ ವ್ಯತ್ಯಾಸವಿಲ್ಲ, ಬೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆಯಿಲ್ಲ. ಬುದ್ಧನ ಎದುರು ಎಲ್ಲರೂ ಸಮಾನರು. ಹಾಗಾಗಿ ಬುದ್ಧನ ವಿಚಾರಗಳು ಸಾಕಷ್ಟು ಪ್ರಚಾರವಾಗಬೇಕು. ಪ್ರತಿಯೊಬ್ಬರನ್ನೂ ತಲುಪಬೇಕು. ಹಾಗಾಗಿ ಇನ್ನು ಸಾವಿರ ವರ್ಷ ಹೋದರೂ ಕೂಡ ಸಿದ್ಧಾರ್ಥನ ಹೆಸರು ಅಜರಾಮರವಾಗಿ…

Read More

ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಹೆಸರಿನಲ್ಲಿ ಮನೆ ಮನೆಗೆ ಸಮೀಕ್ಷೆ ನಡೆಸಿ, ಸತ್ತವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿದರೂ, ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಗಳು ಸರಿಯಾಗಿಲ್ಲ ಮತ್ತು ಅಸಂವಿಧಾನಿಕವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ತಿಳಿಸಿದರು. ಸಂವಿಧಾನ ವಿರೋಧಿ ದೇಶ ಸಮಗ್ರ ಪರಿಶೀಲನೆ (SIR) ವಿರುದ್ಧ ಸಿಪಿಎಂ ವತಿಯಿಂದ ಜನಜಾಗೃತಿ ಪ್ರತಿಭಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯು ನಗರದ ಬಾರ್ಲೈನ್ ವಾರ್ಡ್‌ಗಳ ಬಿಎಸ್ಎನ್‌ಎಲ್ ಕಚೇರಿ ಮುಂಭಾಗ ಶುಕ್ರವಾರ ನಡೆಸಲಾಯಿತು. ಎಸ್‌ಐಆರ್ ಪ್ರಕ್ರಿಯೆ ಮೂಲತಃ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಉದ್ದೇಶದಿಂದ ಚುನಾವಣಾ ಆಯೋಗ ನಡೆಸುವ ಪರಿಶೀಲನಾ ಅಭಿಯಾನವಾಗಿದ್ದು, ಅರ್ಹ ಮತದಾರರನ್ನು ಸೇರಿಸಿ, ಅನರ್ಹರನ್ನು ತೆಗೆದುಹಾಕುವುದು ಅದರ ಉದ್ದೇಶವಾಗಿದೆ ಆದರೆ ಪ್ರಸ್ತುತ ನಡೆಯುತ್ತಿರುವ ಕ್ರಮಗಳು ಜನವಿರೋಧಿಯಾಗಿದ್ದು, ಅದರ ಹಿಂದೆ ಎನ್‌ಆರ್‌ಸಿ ರೀತಿಯ ಉದ್ದೇಶಗಳು ಅಡಗಿವೆ ಎಂದು ಆರೋಪಿಸಿದರು. ಇತ್ತೀಚಿನ ವರದಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಹೆಸರುಗಳು…

Read More

ತುಮಕೂರು: ನಗರದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಯಾಂತ್ರಿಕ ವಿಭಾಗದ ವತಿಯಿಂದ ಮೊಮೆಂಟಮ್–2026 (ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳ ತಾಂತ್ರಿಕ ವಿಚಾರ ಸಂಕಿರಣ) ನಡೆಯಿತು. ಆಂಧ್ರಪ್ರದೇಶದ ಪೆನುಕೊಂಡದ ಕಿಯಾ ಇಂಡಿಯಾ ಪ್ರೈ.ಲಿ.ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಡಾ.ಸಿ.ಬಿ.ಪಾಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸಮಾರಂಭವನ್ನು ಉದ್ಘಾಟಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಾಮುಖ್ಯತೆ ಮತ್ತು ಆಧುನಿಕತೆಯ ಬಳಕೆಯ ದೃಷ್ಟಿಯಲ್ಲಿ ವಿಭಾಗದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಹುದ್ದೆಗಳಿಗಿಂತ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು. ಅಲ್ಲದೆ ಕಾಲಾನುಸಾರ ಅಗತ್ಯಗಳಿಗೆ ತಕ್ಕಂತೆ ಕಲಿಯಿರಿ, ಮರೆತುಬಿಡಿ ಮತ್ತು ಮರುಕಲಿಯಿರಿ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಮಾರಂಭದಲ್ಲಿ SIT ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಶಿವಕುಮಾರಯ್ಯ, SIT ಪ್ರಾಂಶುಪಾಲ ಡಾ.ದಿನೇಶ್, ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಡಾ.ವಿರುಪಾಕ್ಷಿ ಔರಾದಿ, ಸಂಯೋಜಕ ಡಾ.ಎ.ಜಿ. ಶಿವಸಿದ್ಧರಾಮಯ್ಯ, ಖಜಾಂಚಿಗಳಾದ ಡಾ.ಟಿ.ವಿ.ವಿನೀತ್‌ಕುಮಾರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಶ್, ಕಾರ್ಯದರ್ಶಿ ಹೆಚ್.ಬಿ.ಮಧು ಮತ್ತು ಜೀವಿತ ಜೆ.ಎಸ್, ಉಪನ್ಯಾಸಕರುಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಮ್ಮತುಮಕೂರಿನ…

Read More

ತುಮಕೂರು: ಊರುಕೆರೆ ಹೋಬಳಿಯ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ್ದ ನವಿಲುಗಳ ಸಾವಿಗೆ ಎಚ್ 5ಎನ್ 1 ವೈರಾಣು ಸೋಂಕು ಕಾರಣ ಎಂದು ದೃಢಪಟ್ಟಿದೆ. ಆದರೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಸಾಂಕ್ರಾಮಿಕ ರೋಗಗಳ ಜಾಗೃತಿ ಸಮಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಏಪ್ರಿಲ್ 16ರಂದು ಊರುಕೆರೆ ಹೋಬಳಿಯ ಕೋಳಿಹಳ್ಳಿ ಅರಣ್ಯ ಪ್ರದೇಶದಲ್ಲಿ ನವಿಲುಗಳ ಅಸಾಧಾರಣ ಸಾವು ಸಂಭವಿಸಿತ್ತು. ಮೃತ ನವಿಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಎಚ್ 5ಎನ್ 1 ವೈರಾಣು ಸೋಂಕಿನಿಂದ ನವಿಲುಗಳು ಮೃತಪಟ್ಟ ಬಗ್ಗೆ ದೃಢಪಟ್ಟಿದೆ. ಜಿಲ್ಲಾಡಳಿತ ತಕ್ಷಣ ತ್ವರಿತ ಸ್ಪಂದನಾ ತಂಡ (QRT)ವನ್ನು ರಚಿಸಿದ್ದು ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ವಹಿಸಿದೆ ಎಂದು ಅವರು ತಿಳಿಸಿದರು. ಊರುಕೆರೆ ಹೋಬಳಿಯ ಐದು ಹಳ್ಳಿಗಳಾದ ಕೋಳಿಹಳ್ಳಿ, ಉಳ್ಳೇನಹಳ್ಳಿ, ಬೊಮ್ಮನಹಳ್ಳಿ, ಭೈರಸಂದ್ರ, ಕಲ್ಲಹಳ್ಳಿ ಗ್ರಾಮಗಳಲ್ಲಿ ಹಾಗೂ ಸುತ್ತಲಿನ 10…

Read More

ತುಮಕೂರು: ಕಾರ್ಮಿಕರ ಸೌಲಭ್ಯಗಳು, ಕಾನೂನು ಮತ್ತು ಸಾಮಾಜಿಕ ಭದ್ರತೆಗಳನ್ನು ಕಸಿಯುತ್ತಿರುವ ಇಂದಿನ ಸಮಯದಲ್ಲಿ ಹಿಂದಿಗಿಂತಲೂ ಸ್ವಲ್ಪ ಸೊರಗಿರುವ ಕಾರ್ಮಿಕರ ಚಳುವಳಿ ಪುಟ್ಟಿದೇಳಬೇಕು. ಸಂಘಟನೆಯು ತಾತ್ವಿಕ ನೆಲೆಯಲ್ಲಿ ಕಟ್ಟಬೇಕು. ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾದವರಿಗೆ ಮತ ನೀಡುವುದು ಸರಿಯಲ್ಲ. ಜಾತಿ, ಮತಗಳ ಹಿಂದೆ ಹೋಗುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬರಬೇಕು. ಸರ್ಕಾರಗಳು ಜೀವನ ನಡೆಸುವಂತಹ ಕನಿಷ್ಠ ವೇತನವನ್ನು ನೀಡುತ್ತಿಲ್ಲ. ಅದರ ನಿಗದಿಯಲ್ಲೂ ಸಹ ಸರ್ಕಾರ ಬದ್ಧತೆ ತೋರದೆ ಇರುವ ಬಗ್ಗೆ ಕಾರ್ಮಿಕರು ಒಂದಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾಜಿ ರಾಜ್ಯ ಸದಸ್ಯರು, ಲೇಖಕರು ಆದ ಎಲ್. ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು. ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಆಯೋಜಿಸಿದ್ದ ವಿಶ್ವ ಕಾರ್ಮಿಕ ದಿನಾಚರಣೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಮಯದಲ್ಲಿ ಇದ್ದ ಕಲ್ಯಾಣದ ಪರಿಕಲ್ಪನೆ ಇಂದು ಇನ್ನಷ್ಟು ಬಲಗೊಳ್ಳಬೇಕಾಗಿತ್ತು. ಆದರೆ ಅದನ್ನು ಕಸಿಯಲಾಗುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಸಂಬಂಧಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಲ್ಲಿ ಸುಮಾರು 14 ಲಕ್ಷ ಮತ್ತು…

Read More