nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026
    Facebook Twitter Instagram
    ಟ್ರೆಂಡಿಂಗ್
    • ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ
    • ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ
    • ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!
    • ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ
    • ಮಹಿಳಾ ಮೀಸಲಾತಿ ವಿರೋಧಿಸುವ ಕಾಂಗ್ರೆಸ್‌ ಗೆ ಮಹಿಳೆಯರ ಶಾಪ ತಟ್ಟಲಿದೆ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ
    • ಬೇಸಿಗೆಯಲ್ಲಿ ನೀರಿನ ತೊಂದರೆಯಾಗದಂತೆ ಕ್ರಮವಹಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಟ್ಟುನಿಟ್ಟಿನ ಸೂಚನೆ
    • ತುಮಕೂರು: ಸೌಲಭ್ಯಗಳಿಲ್ಲದ ಪುನೀತ್ ರಾಜ್‌ ಕುಮಾರ್ ಬಡಾವಣೆ; ಪಾಲಿಕೆ ವಿರುದ್ಧ ನಾಗರಿಕರ ಆಕ್ರೋಶ
    • ತುಮಕೂರು: ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬೇಗೂರು ಲೂರ್ದು ಮಾತೆಯ ಹಬ್ಬ: ಭೀಕರವಾದ ರೋಗದಿಂದ ಜನರನ್ನು ರಕ್ಷಿಸಿದ ಮಾತೆ | ಇಲ್ಲಿನ ವಿಶೇಷತೆ ಏನು ಗೊತ್ತಾ?
    ರಾಜ್ಯ ಸುದ್ದಿ February 14, 2023

    ಬೇಗೂರು ಲೂರ್ದು ಮಾತೆಯ ಹಬ್ಬ: ಭೀಕರವಾದ ರೋಗದಿಂದ ಜನರನ್ನು ರಕ್ಷಿಸಿದ ಮಾತೆ | ಇಲ್ಲಿನ ವಿಶೇಷತೆ ಏನು ಗೊತ್ತಾ?

    By adminFebruary 14, 2023No Comments2 Mins Read
    beguru
    • ಆಂಟೋನಿ, ಬೇಗೂರು

    ಬೆಂಗಳೂರು: ಬೇಗೂರು ಲೂರ್ದು ಮಾತೆಯ ಹಬ್ಬವನ್ನು ಫೆಬ್ರವರಿ 12ರಂದು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದರು. ಏನಿದು ಈ ಬೇಗೂರಿನ  ಗವಿಮಾತೆಯ ವಿಶೇಷತೆ ತಿಳಿಯೋಣ ಬನ್ನಿ…

    ಗವಿ ಮಾತೆಯ ಇತಿಹಾಸ (ಲೂರ್ದು ಮಾತೆಯ ) ವಿಶೇಷತೆ.


    Provided by
    Provided by

    ಯಾರು ಈ ಮಾತೆ ?

    ನೂರಾರು ವರ್ಷಗಳಿಂದ ಬೆಳೆದು ಬಂದ ಬೇಗೂರು ಗ್ರಾಮದಲ್ಲಿ ಇದ್ದಕ್ಕಿದ್ದ ಹಾಗೆ 1940ರಲ್ಲಿ ಭೀಕರವಾದ ಪ್ಲೇಗ್ ರೋಗವು ಊರನ್ನು ಆವರಿಸಿಕೊಂಡು ಮರಣ ತಾಂಡವವಾಡತೊಡಗಿತು. ನೂರಾರು ಜನರು ದಿನದಿಂದ ದಿನಕ್ಕೆ ಈ ಭೀಕರವಾದ ರೋಗಕ್ಕೆ ಬಲಿಯಾಗುತ್ತಾ ಇಡೀ ಊರೇ ನಾಶದ ಪಥದಲ್ಲಿ ಸಿಲುಕಿತು. ಅಂದಿನ ವಿಚಾರಣೆ ಗುರುಗಳು ಮತ್ತು ಊರ ಜನರು ಇಂಥ ಭಯಂಕರ ಕಾಯಿಲೆಯಿಂದ ಪಾರಾಗಲು ಏನು ಮಾಡುವುದು ಎಂದು ಅರಿಯದೆ “ದೇವರೇ ದಿಕ್ಕು” ಎಂದು, ಲೋಕದ ರಕ್ಷಣೆಗೆ ನೆರವಾಗಲು ಮಣಿದ ದೇವ ಮಾತೆಯ ಸ್ವರೂಪವನ್ನು ಪ್ರತಿಷ್ಠಾಪಿಸಿ ಎಡಬಿಡದೆ ಅವಳಲ್ಲಿ ಪ್ರಾರ್ಥಿಸುತ್ತಾ, ಜಪಮಾಲೆಯನ್ನು ಹೇಳುತ್ತಾ, ಭಕ್ತಿಯಿಂದ ಮೊರೆಯಿಟ್ಟರು. ಬೇಡಿದವರನ್ನು ಇದುವರೆಗೂ  ಭೂಮಂಡಲದಲ್ಲಿ ನಿರಾಕರಿಸದಿರುವ ಈ ಮಾತೆಯು, ತನ್ನ ಕೃಪಾವರವನ್ನು ಸುರಿಸಿ ವಿನಾಶಕಾರಿಯಾದ ರೋಗದಿಂದ ಈ ಊರನ್ನು ವಿಮುಕ್ತಿಗೊಳಿಸಿದಳು. ಅವಳ ಸ್ಮರಣಾರ್ಥಕವಾಗಿ ಊರ ಜನರು ಆಗಸ್ಟ್ 1ನೇ ತಾರೀಖು 1944ರಲ್ಲಿ ಗವಿಯನ್ನು ಕಟ್ಟಿದರು. ಸುಮಾರು ವರ್ಷಗಳ ಕಾಲ, ಆ ಮಾತೆಯ ಕೃಪಾವರದಿಂದ ಊರ ಜನರು ಸುಖಶಾಂತಿಯಿಂದ ಜೀವಿಸುತ್ತಿರಲು, ಮತ್ತೊಮ್ಮೆ 1963ರಲ್ಲಿ ಭೀಕರ ಕ್ಷಾಮವು ತಲೆದೂರಿತು. ಜನರೆಲ್ಲರೂ ವಿಪತ್ತಿನಿಂದ ಕಾಪಾಡಬೇಕೆಂದು ಅವಳಲ್ಲಿ ಪ್ರಾರ್ಥಿಸಲು ಮತ್ತೊಮ್ಮೆ, ಈ ತಾಯಿಯು ಭೀಕರ ಕ್ಷಾಮದಿಂದ ರಕ್ಷಿಸಿದಳು.

    ಅಂದಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಹೊಣೆಯನ್ನು ಹೊತ್ತ ಮಾತೆಯು, ಬೇಡಿದವರಿಗೆ ಕೃಪಾವರವನ್ನು ದಯಪಾಲಿಸಿ, ನೊಂದವರಿಗೆ ಸಾಂತ್ವನ ನೀಡಿ, ದೀನದಲಿತರಿಗೆ ಆಶ್ರಯದಾತಳಾಗಿ, ಇಂದಿಗೂ ತನ್ನ ಮಕ್ಕಳನ್ನು ರಕ್ಷಿಸುತ್ತಿದ್ದಾಳೆ ಎಂಬುದಕ್ಕೆ ಈ ಊರಿನ ಜನರೇ ಸಾಕ್ಷಿ. ಅಂದು ಉಗಮವಾದ ಈ ಮಾತೆಯ ಅನುಗ್ರಹವು, ಆರಂಭವಾಯಿತೇ ವಿನ: ಅಂತ್ಯವಿಲ್ಲದೇ ನಿರಂತರವಾಗಿದೆ. ಇವರೇ ಬೇಗೂರಿನ ಗವಿ ಮಾತೆ.

    ವರ್ಷಕ್ಕೆ ಒಮ್ಮೆ ಈ ಹಬ್ಬವನ್ನು ಆಚರಣೆ ಮಾಡವ ಮುನ್ನ  9 ದಿನಗಳ  ನವೇನಾ ಪ್ರಾರ್ಥನೆ ಬಲಿ ಪೂಜೆಗಳಿಂದ ಆಚರಣೆ ಮಾಡಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಇಡೀ ಬೇಗೂರಿನ ಪ್ರತಿಯೊಬ್ಬರೂ ಜಾತಿ ಧರ್ಮವೆಂಬುದು ಇಲ್ಲದೆ ಈ ಮಾತೆಯ ಹಬ್ಬವನ್ನು ಆಚರಣೆ ಮಾಡುತ್ತಾರೆ.

    ಈ ವರ್ಷವೂ ಸಹ 9 ದಿನಗಳ  ನವೇನಾ ಪ್ರಾರ್ಥನೆಯೊಂದಿಗೆ  ಆರಂಭಿಸಿ  ಹಬ್ಬದ ದಿನದಂದು ಅಂತ್ಯಗೊಳಿಸುತ್ತಾರೆ. ದೇವಾಲಯದಲ್ಲಿ ಮಾತ್ರವಲ್ಲದೆ ಊರಿನ ಅಲ್ಲಲ್ಲಿ ಕೆಲವೊಬ್ಬರು ದೇವಮಾತೆಯ ಸ್ವರೂಪವನ್ನು ಇಟ್ಟು ಅಲಂಕಾರವನ್ನು ಮಾಡಿ ಪೂಜಿಸಿ ಪ್ರಾರ್ಥಿಸಿ ನೋಡ್ದ ಮಾತೆಗೆ ಗೌರವವನ್ನು ಅರ್ಪಿಸುತ್ತಾರೆ.

    ಧರ್ಮ ಕೇಂದ್ರದ ಗುರುಗಳು ಜನರು ಇಟ್ಟಿರುವ ದೇವ ಮಾತೆಯ ಸ್ವರೂಪಗಳಿಗೆ ಭೇಟಿ ಕೊಟ್ಟು ಆಶೀರ್ವದಿಸಿ ಹೋಗುತ್ತಾರೆ. ಈ ಬಾರಿಯೂ ಸಹ ಬೇಗೂರಿನ ಧರ್ಮ ಕೇಂದ್ರ ಗುರುಗಳಾದ ಫಾದರ್ ಆರೋಗ್ಯ ಸ್ವಾಮಿ ಸಭಾಸ್ಟಿನ್ ಧರ್ಮ ಕೇಂದ್ರಕ್ಕೆ ಹಾಗೂ ಬೇಗೂರಿನ ಪ್ರತಿಯೊಬ್ಬರಿಗಾಗಿಯೂ ಪ್ರಾರ್ಥಿಸಿ ಬೆಂಗಳೂರು ಮಹಾಧರ್ಮಧ್ಯಕ್ಷರಾದ ಪೀಟರ್ ಅವರನ್ನು ಕರೆಸಿ ಎಲ್ಲರಿಗೂ ಒಳಿತಾಗಲಿ ಎಂದು ಅವರ ಮೂಲಕ ಬಲಿ ಪೂಜೆಯನ್ನು ನೆರವೇರಿಸಿದರು.

    ಹಬ್ಬದ ದಿನದಂದು ಆಡಂಬರದ ಗಾಯನ ಬಲಿ ಪೂಜೆ ನಂತರ ಹಲವಾರು ಕಡೆ ಅನ್ನ ದಾಸೋಹವನ್ನು ಏರ್ಪಡಿಸಿ ಅನೇಕ ಕಾರ್ಯಕ್ರಮಗಳ ಮೂಲಕ ಈ ಹಬ್ಬವನ್ನು ಮುಂದುವರಿಸುತ್ತಾ  ಸಂಜೆ ಮಾತೆ ಮರಿಯಮ್ಮನವರ ಸ್ವರೂಪವನ್ನು ಇಟ್ಟಿರುವ ತೇರನ್ನು ಊರಿನ ಪ್ರತಿಯೊಂದು ಭಾಗಗಳಲ್ಲಿಯೂ ತೇರಿನ ಮೂಲಕ ಬರುತ್ತಾರೆ. ಈ ತೇರನ್ನು ನೋಡಲು ಎಲ್ಲಾ ಧರ್ಮದವರು ತೇರಿನ ಹಿಂದೆ ನಡೆದು  ಬರುತ್ತಾರೆ.

    ಈ ಬಾರಿ  ಬೇಗೂರಿನ ಬಂಗಾರಿ ವಂಶಕ್ಕೆ ಸೇರಿದ ಬಂಗಾರಿ ಅಂಡ್ರಿಯಾಸ್ ಹಾಗೂ ಕಾಣಿಕ್ಯ ಮೇರಿ ಕುಟುಂಬ ದೇವ ಮಾತೆಯ ಸ್ವರೂಪವನ್ನು ಇಟ್ಟು ಧರ್ಮ ಕೇಂದ್ರದ ಗುರುಗಳ ಆಶೀರ್ವಾದ ಪಡೆದು ದೇವ ಮಾತೆಯ ಸ್ವರೂಪಕ್ಕೆ ಪ್ರಾರ್ಥಿಸಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ದೇವಮಾತೆಯ ಸ್ವರೂಪ ಅಲಂಕಾರವನ್ನು ಜೆಸ್ಸಿ ಪಿಂಟೋ ಮಾಡಿದರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1

    ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ನಾನು ಜೆಡಿಎಸ್‌ ಗೆ ಹೋಗ್ತೀನಿ ಅನ್ನೋದು ಕೇವಲ ಊಹಾಪೋಹ: ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ

    April 21, 2026

    ಪ್ರಧಾನಿ ಮೋದಿ ಜೊತೆಗಿನ ‘ರಹಸ್ಯ’ ಮಾತುಕತೆ ಏನಿತ್ತು? ಗುಟ್ಟು ಬಿಟ್ಟುಕೊಟ್ಟ ಸಿಎಂ ಸಿದ್ದರಾಮಯ್ಯ

    April 20, 2026

    Comments are closed.

    Our Picks

    ಸಂವಿಧಾನ ಮುಗಿಸುವುದೇ ಆರ್‌ ಎಸ್‌ ಎಸ್–ಬಿಜೆಪಿ ಉದ್ದೇಶ: ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

    April 12, 2026

    ಗಾನ ಕೋಗಿಲೆ ಆಶಾ ಭೋಂಸ್ಲೆ ನಿಧನ: ಸಪ್ತ ದಶಕಗಳ ಗಾಯನ ಪಯಣ ಅಂತ್ಯ

    April 12, 2026

    ಎಲ್‌ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    April 5, 2026

    ವರ್ಷಾಂತ್ಯಕ್ಕೆ ಮೋದಿ ಆಡಳಿತ ಅಂತ್ಯ: ಅರವಿಂದ ಕೇಜ್ರಿವಾಲ್ ಭವಿಷ್ಯ

    March 24, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಚಿನ್ನದ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ​​ಗೆ ಜಾಮೀನು ಮಂಜೂರು, ಜೈಲಿನಿಂದ ಬಿಡುಗಡೆ

    April 22, 2026

    ಬೆಂಗಳೂರು: ಬಹುಚರ್ಚಿತ ಚಿನ್ನದ ಕಳ್ಳಸಾಗಣೆ (Gold Smuggling) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಸ್ಯಾಂಡಲ್‌ ವುಡ್ ನಟಿ ರನ್ಯಾ ರಾವ್ ಅವರಿಗೆ…

    ಮಗಳ ಪ್ರಿಯಕರನ ಜತೆ ಸೇರಿ ಅಳಿಯನನ್ನೇ ಕೊಂದ ಅತ್ತೆ: ತುಮಕೂರಿನ ಕೊಡಿಗೇನಹಳ್ಳಿಯಲ್ಲಿ ಘೋರ ಕೃತ್ಯ

    April 22, 2026

    ‘ಅಣ್ಣ’ ಎಂದವನ ಜೊತೆಯೇ ಪತ್ನಿ ಎಸ್ಕೇಪ್: ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪತಿಗೆ ಕೈಕೊಟ್ಟ ಮಹಿಳೆ!

    April 22, 2026

    ಕೊರಟಗೆರೆ: ಸಾರ್ವಜನಿಕ ಸೇವೆಗೆ ‘ಫ್ರೆಂಡ್ಸ್ ಗ್ರೂಪ್’ನಿಂದ ಉಚಿತ ನೂತನ ತುರ್ತು ವಾಹನ ಸಮರ್ಪಣೆ

    April 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.