ತುಮಕೂರು: ಕರ್ನಾಟಕ ತಾಂಡ ಅಭಿವೃದ್ಧಿ ನಿಯಮ ನಿಯಮಿತ ಬೆಂಗಳೂರು ಹಾಗೂ ವಲಯ ಕಚೇರಿ ತುಮಕೂರು ವತಿಯಿಂದ ವಿಭಾಗ ಮಟ್ಟದ ಕಲಾ ಮೇಳ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ತುಮಕೂರು ಬಂಜಾರ ಭವನದಲ್ಲಿ ಸರಿ ಸುಮಾರು 8 ಜಿಲ್ಲೆಯ ( ಚಾಮರಾಜನಗರ, ಮೈಸೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಹಾಗೂ ಕೋಲಾರ ) ಬಂಜಾರ ಬಹುಮುಖಿ ಆಡಿಷನ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾಡಿ ಮಾತಾಡಿದ ಡಾ.ರಮೇಶ್ ನಾಯ್ಕ, ಬಂಜಾರ ಸಮುದಾಯದದ ಆಚಾರ–ವಿಚಾರ ನಡೆ–ನುಡಿ ಸಾಂಸ್ಕೃತಿಕ ಉಳಿವಿಗಾಗಿ ಕಲಾಮೇಳ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಶಿವಣ್ಣ, ಇಂಜಿನಿಯರ್ ಮೋಹನ್, ಮಹೇಶ್, ಕರ್ನಾಟಕ ಜಾಗೃತದಳ ರಾಜ್ಯಾಧ್ಯಕ್ಷ ತಿಪ್ಪ ಸರ್ ನಾಯ್ಕ, ಜಯಂ ನಾಯ್ಕ, ಗೋವಿಂದ್ ನಾಯ್ಕ, ವೆಂಕಟೇಶ್ ಚೌಹಾನ್, ರವಿ ಕುಮಾರ್, ಆಶಾ ರಾಠೋಡ್, ಹಾಗೂ ಬೇರೆ ಜೆಲ್ಲೆಯ ಕಲಾವಿದರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB