ಕೊರಟಗೆರೆ: ಏರ್ಟೆಲ್ ಕಂಪನಿಯಲ್ಲೇ ಕೆಲಸ ಮಾಡಿಕೊಂಡು ಏರ್ ಟೇಲ್ ಟವರ್ ಗೆ ಕನ್ನ ಹಾಕಿದ ಖತರ್ನಾಕ್ ಕದೀಮರು ಪ್ರಕರಣ ದಾಖಲಾದ 24 ಗಂಟೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ತಡರಾತ್ರಿ ಏರ್ ಟೇಲ್ 5ಜಿ ಟವರ್ ನಲ್ಲಿ ಬಳಸುವ ಆರ್ ಆರ್ ಯು ಕಾರ್ಡುಗಳನ್ನ ಕಳ್ಳತನ ಮಾಡುತ್ತಿದ್ದ ಕಳ್ಳರು, ಟವರ್ ಮೇಲೇರಿ 5ಜಿ ಮೆಟೀರಿಯಲ್ ದೋಚುತ್ತಿದ್ದರು. ವಿಪರ್ಯಾಸ ಏನಪ್ಪ ಎಂದರೆ, ಏರ್ಟೆಲ್ ಕಂಪನಿಯ 4ಜಿ ಟವರ್ ಗಳನ್ನು ಬಿಚ್ಚಿ 5ಜಿ ಟವರ್ ಗಳನ್ನ ಅಳವಡಿಸುತ್ತಿದ್ದ ಕಾರ್ಮಿಕರೇ ಈ ಕೃತ್ಯ ಎಸಗಿದ್ದು, ಹಣದ ಆಸೆಗಾಗಿ ಬಿದ್ದು 5ಜಿ ಮೆಟೀರಿಯಲ್ ಗಳನ್ನು ಬಿಚ್ಚಿ ಮಾರಾಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಕೊರಟಗೆರೆ ಸಿಪಿಐ ಅನಿಲ್ ಮತ್ತು ಪಿಎಸೈ ಮಂಜುನಾಥ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳತನ ನಡೆದ 24 ಗಂಟೆಯಲ್ಲಿ ಕದ್ದಿದ್ದ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ.
ಗುಬ್ಬಿಯ ಶ್ರೀರಾಮುಲು(22), ತುಮಕೂರಿನ ಅರುಣ್(30) ಮತ್ತು ಕೊರಟಗೆರೆ ಕೃಷ್ಣಾನಂದ ಬಂಧಿತ ಆರೋಪಿಗಳಾಗಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 3 ಜನ ಆರೋಪಿಗಳ ಮೇಲೆ ಕಳ್ಳತನದ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296