nammatumakuru

    Subscribe to Updates

    Get the latest creative news from FooBar about art, design and business.

    What's Hot

    ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ

    February 2, 2026

    ರಾಜ್ಯದಲ್ಲಿ ಆಡಳಿತ ‘ಕೋಮಾ’ ಸ್ಥಿತಿಗೆ ತಲುಪಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

    February 2, 2026

    ‘ದ್ವೇಷ ಭಾಷಣ ಮಸೂದೆ’: 29 ಕಾರಣ ನೀಡಿ ಅಂಕಿತ ನಿರಾಕರಿಸಿದ ರಾಜ್ಯಪಾಲರು

    February 2, 2026
    Facebook Twitter Instagram
    ಟ್ರೆಂಡಿಂಗ್
    • ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ
    • ರಾಜ್ಯದಲ್ಲಿ ಆಡಳಿತ ‘ಕೋಮಾ’ ಸ್ಥಿತಿಗೆ ತಲುಪಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
    • ‘ದ್ವೇಷ ಭಾಷಣ ಮಸೂದೆ’: 29 ಕಾರಣ ನೀಡಿ ಅಂಕಿತ ನಿರಾಕರಿಸಿದ ರಾಜ್ಯಪಾಲರು
    • ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ
    • ಹಿಂದೂ ಸಂಸ್ಕೃತಿ ಬಿಟ್ಟು ವಿದೇಶ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ: ಹಿಂದೂ ಸಮಾಜೋತ್ಸವದಲ್ಲಿ ಸುಧಾ ಮೃತ್ಯುಂಜಪ್ಪ
    • ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನ
    • ಬೆಂಗಳೂರಿನಲ್ಲಿ 18 ಕೋಟಿ ರೂ. ಚಿನ್ನಾಭರಣ ದೋಚಿದ ನೇಪಾಳಿ ದಂಪತಿ
    • ದಲಿತ ಚಕ್ರವರ್ತಿ ಕುರಂಗರಾಜನ 278ನೇ ಪಟ್ಟಾಭಿಷೇಕೋತ್ಸವ: ಕುರಂಗರಾಜರನ್ನು ಅನುಸರಿಸಲು ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಮೀನಿಗೆ ಹೋಗಲು ದಾರಿ ಬಿಡದೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ತೊಂದರೆ, ಜಾತಿ ನಿಂದನೆ!
    ಜಿಲ್ಲಾ ಸುದ್ದಿ June 16, 2024

    ಜಮೀನಿಗೆ ಹೋಗಲು ದಾರಿ ಬಿಡದೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ತೊಂದರೆ, ಜಾತಿ ನಿಂದನೆ!

    By adminJune 16, 2024No Comments2 Mins Read
    saraguru

    ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ  ಮೇಲೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಜಮೀನುದಾರರು ಪರಿಶಿಷ್ಟ ಜಾತಿಯವರ ಜಮೀನಿಗೆ ಹೋಗಲು ದಾರಿಯೇ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

    ಕಳೆದ 30 ರಿಂದ 45 ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ.  ಇಲ್ಲಿನ ಸರ್ಕಾರಿ ಜಮೀನು ಮೂಲಕ ತಿರುಗಾಡುತ್ತಿದ್ದೇವೆ ಹಾಗೂ ದನಕರುಗಳನ್ನು ಇಲ್ಲೇ ಮೇಯಿಸುತ್ತಿದ್ದೇವೆ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ಜಮೀನಲ್ಲಿ ವ್ಯವಸಾಯ ಮಾಡಲು ಹಾಗೂ ತಿರುಗಾಡಲು ದನಕರುಗಳು ಮೇಯಿಸಲು ಬಿಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.


    Provided by
    Provided by

    ಲಿಂಗಾಯತ ಸಮುದಾಯದ ಸುರೇಶ್, ಮಹೇಶ್, ನವೀನ್, ಶೃತಿ,  ಸಣ್ಣ ಮುದಪ್ಪ,  ಮಹದೇವಪ್ಪ,  ಲೋಕೇಶ್ ಇನ್ನೂ ಮುಂತಾದವರು ನಮಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ ನಮಗೆ ನಮ್ಮ ಜಮೀನಿಗೆ ತಿರುಗಾಡಲು ಹಾಗೂ ದನಕರುಗಳನ್ನು ಮೇಯಿಸಲು ಅನುಮತಿ ನೀಡಬೇಕೆಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಲಾಗಿದೆ.

    ಸರ್ಕಾರಿ ಜಮೀನಿನ ಸರ್ವೇ ನಂಬರ್ 14/2.ರಲ್ಲಿ20 ಗುಂಟೆ ಹಾಗೂ 15 ರಲ್ಲಿ20 ಗುಂಟೆ,  ಹಳಿಯೂರು ಗ್ರಾಮದ ಸರ್ವೇ ನಂಬರ್ ರಲ್ಲಿ ಕುರುಬನಕಟ್ಟೆ 2ಎಕರೆ ಇದೆ. ಆದರೆ ಲಿಂಗಾಯತ ಸಮುದಾಯದ ಪಕ್ಕದ ಜಮೀನುದಾರರು ಈ ಜಮೀನು ನಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು  ಹೇಳಿದರು.

    ನಮ್ಮ ಪರಿಶಿಷ್ಟ ಜಾತಿ ಸಮುದಾಯದ ಜನರು ತಿರುಗಾಡಲು ದನಕರುಗಳನ್ನು ಮೇಯಿಸಲು ಹೋದಾಗ,  ಜಾತಿ ನಿಂದನೆ ಮಾಡಿ,  ಜಾತಿ ಬಗ್ಗೆ ಕೈ ತೋರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದಾರೆ. ತಿರುಗಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರು ನಮ್ಮ ಮುಂದೆ ತಿರುಗಾಡಬೇಡಿ,  ನಮಗೆ ನಿಮ್ಮ ಮುಖ ತೋರಿಸಬೇಡಿ ಬಾಯಿಗೆ ಬಂದಂತೆ ಬೈದುಕೊಂಡು ತೊಂದರೆ ನೀಡುತ್ತಿದ್ದಾರೆ. ನಾವುಗಳು ನಮ್ಮ ಜಮೀನಿಗೆ ಹೋಗಬೇಕಾದರೆ ಹಳಿಯೂರು ಹಾಗೂ ನರಸೀಪುರ ಗ್ರಾಮಗಳ ಬಳಸಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

    ತಹಸೀಲ್ದಾರ್ ರವರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇರೆಗೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಹಾಗೂ ಸರ್ವೇಯರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಂದಿದ್ದಾರೆ. ಲಿಂಗಾಯತ ಸಮುದಾಯದವರು ಮಹೇಶ್ ಕುಟುಂಬದವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕಂದಾಯ ಇಲಾಖೆ ಗುರುತಿಸಿದರು ಕೂಡ ಜಾಗವನ್ನು ಬಿಡದೆ‌, ಪರಿಶಿಷ್ಟ ಜಾತಿ ನಿಂದನೆ ಮಾಡಿಕೊಂಡು ಮಾನಸಿಕ ತೊಂದರೆ ನೀಡುತ್ತಾ ಬಂದಿದ್ದಾರೆ ಎಂದು ಗ್ರಾಮದ ಮುಖಂಡ ಸುರೇಶ್ ಹೇಳಿದರು.

    ಈಗಾಗಲೇ ಹೈಕೋರ್ಟ್ ನ್ಯಾಯಾಲಯದಲ್ಲಿ ಹಿಂದಿನ ಜಮೀನವರು ತಿರುಗಾಡಲು ತೊಂದರೆ ಕೊಡಬಾರದು ಆದೇಶ ಇದೆ ಎಂದರು. ಪರಿಶಿಷ್ಟ ಜಾತಿ ಸಮುದಾಯಕ್ಕೆ ತೊಂದರೆ ನೀಡಿದ ಸವರ್ಣೀಯರು ಕುಟುಂಬದವರ ಮೇಲೆ ಮಹೇಶ್ ಮತ್ತು ಲೋಕೇಶ್ ಕುಟುಂಬದವರು ಮೇಲೆ ಎಸ್ಸಿ ಎಸ್ಟಿ ಕಾಯ್ದೆಯಡಿಲ್ಲಿ ದೂರು ದಾಖಲು ಮಾಡಿ,  ಅವರ ವಿರುದ್ಧ ಕಾನೂನಾತ್ಮಕವಾಗಿ ಸೂಕ್ತ ಕ್ರಮವಹಿಸಿ ಎಂದು ನಮಗೆ ಜಮೀನಿನಲ್ಲಿ ತಿರುಗಾಡಲು ಹಾಗೂ ಸರ್ಕಾರಿ ಜಮೀನನ್ನು ಬಿಡಿಸಿಕೊಡ ಬೇಕು ಎಂದು  ಅಳಲು ತೋಡಿಕೊಂಡಿದ್ದಾರೆ.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ

    February 2, 2026

    ಹಿಂದೂ ಸಂಸ್ಕೃತಿ ಬಿಟ್ಟು ವಿದೇಶ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ: ಹಿಂದೂ ಸಮಾಜೋತ್ಸವದಲ್ಲಿ ಸುಧಾ ಮೃತ್ಯುಂಜಪ್ಪ

    February 2, 2026

    ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನ

    February 2, 2026

    Comments are closed.

    Our Picks

    ಕೇಂದ್ರ ಬಜೆಟ್ 2026: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ ನ ಪ್ರಮುಖ ಘೋಷಣೆಗಳು

    February 1, 2026

    ಆಂಬುಲೆನ್ಸ್ ಬಾಗಿಲು ಜಾಮ್; ಆಸ್ಪತ್ರೆಯ ಬಾಗಿಲುವರೆಗೆ ತಲುಪಿದರೂ, ರೋಗಿ ಸಾವು

    January 28, 2026

    ಬಾರಾಮತಿಯಲ್ಲಿ ಭೀಕರ ವಿಮಾನ ಅಪಘಾತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಆರು ಮಂದಿ ದುರ್ಮರಣ

    January 28, 2026

    77ನೇ ಗಣರಾಜ್ಯೋತ್ಸವ ಸಂಭ್ರಮ: ಗಮನಸೆಳೆದ ಭಾರತದ ಸೇನಾ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

    January 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದ್ವೇಷ ಭಾಷಣ ಮಸೂದೆ ಜಾರಿಯಾಗದಂತೆ ತಡೆಯಲು ರಾಜ್ಯಪಾಲರ ಯತ್ನ: ಗೃಹ ಸಚಿವ ಜಿ. ಪರಮೇಶ್ವರ್ ಗಂಭೀರ ಆರೋಪ

    February 2, 2026

    ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ–2026’ ಅನ್ನು ಜಾರಿಗೆ ತರದಂತೆ ತಡೆಯಲು…

    ರಾಜ್ಯದಲ್ಲಿ ಆಡಳಿತ ‘ಕೋಮಾ’ ಸ್ಥಿತಿಗೆ ತಲುಪಿದೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

    February 2, 2026

    ‘ದ್ವೇಷ ಭಾಷಣ ಮಸೂದೆ’: 29 ಕಾರಣ ನೀಡಿ ಅಂಕಿತ ನಿರಾಕರಿಸಿದ ರಾಜ್ಯಪಾಲರು

    February 2, 2026

    ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು: ವಿ.ವಿಜಯ ಕುಮಾರ್ ನಾಗನಾಳ

    February 2, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.