nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮತ್ತೊಂದು ಹುಲಿ ದಾಳಿ: ದನ ಮೇಯಿಸಲು ಹೋಗಿದ್ದ ರೈತ ಬಲಿ

    November 1, 2025

    ಬೀದರ್ | ಒಂದೇ ದಿನ ಬಾಲಕ ಸೇರಿದಂತೆ ನಾಲ್ವರ ಮೇಲೆ ತೋಳ ದಾಳಿ

    November 1, 2025

    ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ

    November 1, 2025
    Facebook Twitter Instagram
    ಟ್ರೆಂಡಿಂಗ್
    • ಮತ್ತೊಂದು ಹುಲಿ ದಾಳಿ: ದನ ಮೇಯಿಸಲು ಹೋಗಿದ್ದ ರೈತ ಬಲಿ
    • ಬೀದರ್ | ಒಂದೇ ದಿನ ಬಾಲಕ ಸೇರಿದಂತೆ ನಾಲ್ವರ ಮೇಲೆ ತೋಳ ದಾಳಿ
    • ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ
    • ತುಮಕೂರು | ದಲಿತ ಯುವಕರ ಕೊಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
    • ಬೀದರ್‌ | ಇಂದಿನಿಂದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ: ಸಚಿವ ಈಶ್ವರ ಖಂಡ್ರೆ
    • ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ
    • ವಾರದ ಸಂತೆಗೆ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರ್ಧಾರ!
    • ಮೈದಾಳದ ಕೆರೆಯ ಕಟ್ಟೆಯಲ್ಲಿ ನೀರು ಸೋರಿಕೆ: ಸ್ಥಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಜಮೀನಿಗೆ ಹೋಗಲು ದಾರಿ ಬಿಡದೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ತೊಂದರೆ, ಜಾತಿ ನಿಂದನೆ!
    ಜಿಲ್ಲಾ ಸುದ್ದಿ June 16, 2024

    ಜಮೀನಿಗೆ ಹೋಗಲು ದಾರಿ ಬಿಡದೆ ಪರಿಶಿಷ್ಟ ಜಾತಿ ಸಮುದಾಯದವರಿಗೆ ತೊಂದರೆ, ಜಾತಿ ನಿಂದನೆ!

    By adminJune 16, 2024No Comments2 Mins Read
    saraguru

    ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ  ಮೇಲೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಜಮೀನುದಾರರು ಪರಿಶಿಷ್ಟ ಜಾತಿಯವರ ಜಮೀನಿಗೆ ಹೋಗಲು ದಾರಿಯೇ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

    ಕಳೆದ 30 ರಿಂದ 45 ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ.  ಇಲ್ಲಿನ ಸರ್ಕಾರಿ ಜಮೀನು ಮೂಲಕ ತಿರುಗಾಡುತ್ತಿದ್ದೇವೆ ಹಾಗೂ ದನಕರುಗಳನ್ನು ಇಲ್ಲೇ ಮೇಯಿಸುತ್ತಿದ್ದೇವೆ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ಜಮೀನಲ್ಲಿ ವ್ಯವಸಾಯ ಮಾಡಲು ಹಾಗೂ ತಿರುಗಾಡಲು ದನಕರುಗಳು ಮೇಯಿಸಲು ಬಿಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.


    Provided by
    Provided by

    ಲಿಂಗಾಯತ ಸಮುದಾಯದ ಸುರೇಶ್, ಮಹೇಶ್, ನವೀನ್, ಶೃತಿ,  ಸಣ್ಣ ಮುದಪ್ಪ,  ಮಹದೇವಪ್ಪ,  ಲೋಕೇಶ್ ಇನ್ನೂ ಮುಂತಾದವರು ನಮಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ ನಮಗೆ ನಮ್ಮ ಜಮೀನಿಗೆ ತಿರುಗಾಡಲು ಹಾಗೂ ದನಕರುಗಳನ್ನು ಮೇಯಿಸಲು ಅನುಮತಿ ನೀಡಬೇಕೆಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಲಾಗಿದೆ.

    ಸರ್ಕಾರಿ ಜಮೀನಿನ ಸರ್ವೇ ನಂಬರ್ 14/2.ರಲ್ಲಿ20 ಗುಂಟೆ ಹಾಗೂ 15 ರಲ್ಲಿ20 ಗುಂಟೆ,  ಹಳಿಯೂರು ಗ್ರಾಮದ ಸರ್ವೇ ನಂಬರ್ ರಲ್ಲಿ ಕುರುಬನಕಟ್ಟೆ 2ಎಕರೆ ಇದೆ. ಆದರೆ ಲಿಂಗಾಯತ ಸಮುದಾಯದ ಪಕ್ಕದ ಜಮೀನುದಾರರು ಈ ಜಮೀನು ನಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ, ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು  ಹೇಳಿದರು.

    ನಮ್ಮ ಪರಿಶಿಷ್ಟ ಜಾತಿ ಸಮುದಾಯದ ಜನರು ತಿರುಗಾಡಲು ದನಕರುಗಳನ್ನು ಮೇಯಿಸಲು ಹೋದಾಗ,  ಜಾತಿ ನಿಂದನೆ ಮಾಡಿ,  ಜಾತಿ ಬಗ್ಗೆ ಕೈ ತೋರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದಾರೆ. ತಿರುಗಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರು ನಮ್ಮ ಮುಂದೆ ತಿರುಗಾಡಬೇಡಿ,  ನಮಗೆ ನಿಮ್ಮ ಮುಖ ತೋರಿಸಬೇಡಿ ಬಾಯಿಗೆ ಬಂದಂತೆ ಬೈದುಕೊಂಡು ತೊಂದರೆ ನೀಡುತ್ತಿದ್ದಾರೆ. ನಾವುಗಳು ನಮ್ಮ ಜಮೀನಿಗೆ ಹೋಗಬೇಕಾದರೆ ಹಳಿಯೂರು ಹಾಗೂ ನರಸೀಪುರ ಗ್ರಾಮಗಳ ಬಳಸಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

    ತಹಸೀಲ್ದಾರ್ ರವರಿಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೇರೆಗೆ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಹಾಗೂ ಸರ್ವೇಯರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಂದಿದ್ದಾರೆ. ಲಿಂಗಾಯತ ಸಮುದಾಯದವರು ಮಹೇಶ್ ಕುಟುಂಬದವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಕಂದಾಯ ಇಲಾಖೆ ಗುರುತಿಸಿದರು ಕೂಡ ಜಾಗವನ್ನು ಬಿಡದೆ‌, ಪರಿಶಿಷ್ಟ ಜಾತಿ ನಿಂದನೆ ಮಾಡಿಕೊಂಡು ಮಾನಸಿಕ ತೊಂದರೆ ನೀಡುತ್ತಾ ಬಂದಿದ್ದಾರೆ ಎಂದು ಗ್ರಾಮದ ಮುಖಂಡ ಸುರೇಶ್ ಹೇಳಿದರು.

    ಈಗಾಗಲೇ ಹೈಕೋರ್ಟ್ ನ್ಯಾಯಾಲಯದಲ್ಲಿ ಹಿಂದಿನ ಜಮೀನವರು ತಿರುಗಾಡಲು ತೊಂದರೆ ಕೊಡಬಾರದು ಆದೇಶ ಇದೆ ಎಂದರು. ಪರಿಶಿಷ್ಟ ಜಾತಿ ಸಮುದಾಯಕ್ಕೆ ತೊಂದರೆ ನೀಡಿದ ಸವರ್ಣೀಯರು ಕುಟುಂಬದವರ ಮೇಲೆ ಮಹೇಶ್ ಮತ್ತು ಲೋಕೇಶ್ ಕುಟುಂಬದವರು ಮೇಲೆ ಎಸ್ಸಿ ಎಸ್ಟಿ ಕಾಯ್ದೆಯಡಿಲ್ಲಿ ದೂರು ದಾಖಲು ಮಾಡಿ,  ಅವರ ವಿರುದ್ಧ ಕಾನೂನಾತ್ಮಕವಾಗಿ ಸೂಕ್ತ ಕ್ರಮವಹಿಸಿ ಎಂದು ನಮಗೆ ಜಮೀನಿನಲ್ಲಿ ತಿರುಗಾಡಲು ಹಾಗೂ ಸರ್ಕಾರಿ ಜಮೀನನ್ನು ಬಿಡಿಸಿಕೊಡ ಬೇಕು ಎಂದು  ಅಳಲು ತೋಡಿಕೊಂಡಿದ್ದಾರೆ.

    ವರದಿ: ಹಾದನೂರು ಚಂದ್ರ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

    admin
    • Website

    Related Posts

    ಮತ್ತೊಂದು ಹುಲಿ ದಾಳಿ: ದನ ಮೇಯಿಸಲು ಹೋಗಿದ್ದ ರೈತ ಬಲಿ

    November 1, 2025

    ಬೀದರ್ | ಒಂದೇ ದಿನ ಬಾಲಕ ಸೇರಿದಂತೆ ನಾಲ್ವರ ಮೇಲೆ ತೋಳ ದಾಳಿ

    November 1, 2025

    ಬೀದರ್‌ | ಇಂದಿನಿಂದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ: ಸಚಿವ ಈಶ್ವರ ಖಂಡ್ರೆ

    October 31, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಮತ್ತೊಂದು ಹುಲಿ ದಾಳಿ: ದನ ಮೇಯಿಸಲು ಹೋಗಿದ್ದ ರೈತ ಬಲಿ

    November 1, 2025

    ಸರಗೂರು: ವ್ಯಾಪ್ತಿಯ ಕಾಡಂಚಿನ ಭಾಗದಲ್ಲಿ ಹುಲಿ ದಾಳಿಯು ಮುಂದುವರಿದಿದ್ದು, ಹುಲಿ ಸೆರೆ ಕಾರ್ಯಾಚರಣೆ ನಡುವೆಯೇ ತಾಲೂಕಿನ ಕೂರ್ಣೇಗಾಲ ಸಮೀಪದ ಜಮೀನುವೊಂದರಲ್ಲಿ…

    ಬೀದರ್ | ಒಂದೇ ದಿನ ಬಾಲಕ ಸೇರಿದಂತೆ ನಾಲ್ವರ ಮೇಲೆ ತೋಳ ದಾಳಿ

    November 1, 2025

    ‘ನಮ್ಮ ತುಮಕೂರು’ ನಂಬಿಕೆಯ ಬೆಳಕು: 4ನೇ ವಾರ್ಷಿಕೋತ್ಸವದ ಶುಭಾಶಯಗಳು | ಆರ್.ಶೋಭಾ

    November 1, 2025

    ತುಮಕೂರು | ದಲಿತ ಯುವಕರ ಕೊಲೆ ಖಂಡಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

    October 31, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.