ಅಡುಗೆ ರುಚಿ ನೋಡಿದರೆ ತಿಳಿಯುವುದಿಲ್ಲ ತಿಂದರೆ ಮಾತ್ರ ರುಚಿ ತಿಳಿಯುವುದು ರುಚಿಯ ಪರಂಪರೆ ಆತಿತ್ಯದ ಹೊಸ ಅಧ್ಯಾಯ ಅನಾದಿಯಿಂದಲೇ ಮನೆಎಂದಾಕ್ಷಣ ಕಡೆಯುವ ಕಲ್ಲು ಬೇಕೇ ಬೇಕು
ಕಡೆಯುವ ಕಲ್ಲು ತಯಾರಿಕೆಯ ಪೂರ್ಣ ಹೆಸರು ಹೇಳಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಟ್ಯಾರು ಸಮೀಪ ಕಲ್ಲರ್ಪೆ ಪುತ್ತೂರು ಸುಳ್ಯ ರಸ್ತೆಯಲ್ಲಿ ಈ ಊರು ಇದ್ದು ಹೆಸರು ಕಲ್ಲರ್ಪೆ ಮಾರ್ಗದ ಇಕ್ಕೆಲಗಳಲ್ಲಿ ಮೊದಲಿಗೆ ತುಂಬಾ ಜನರಿಂದ ಕಡೆಯುವ ಕಲ್ಲು ತಯಾರಾಗುತ್ತಿದ್ದು ಇದೀಗ ಬೆರಳಣಿಕೆಯಷ್ಟೇ…. ಇಲ್ಲಿಯ ಕಡೆಯುವ ಕಲ್ಲಿ ನಿಂದ ಮಾಡಿರುವಂತಹ ಪದಾರ್ಥಗಳು ಸೂಪರ್ ಆಗಿರುತ್ತವೆ.
ದ.ಕ ಪುತ್ತೂರು ಭಾಗದಲ್ಲಿನ ಕಡೆಯುವ ಕಲ್ಲು ರಾಷ್ಟ್ರಮಟ್ಟದ ಹೆಸರು ಮಾಡಿದೆ. ಇಲ್ಲಿ ಬಸ್ಸಿನಲ್ಲಿ ವಾಹನಗಳಲ್ಲಿ ಹೋಗುವಾಗ ಕಲ್ಲಿಗೆ ಉಳಿಯಪೆಟ್ಟಿನ ನಾದ ನೀನಾದ ಕೇಳುವುದೇ ಸಂಭ್ರಮ. ಕಲೆ ಮತ್ತು ವೃತ್ತಿ ಬದುಕಿನ ಅಪೂರ್ವ ಸಂಗಮ ಇದೀಗ ಮಿಷನ್ ಟಚ್ ಬಂದಿದೆ, ಹಾಗೆ ಸ್ಟೀಲ್ನ ಹಿಡಿ ಹಾಕಿದ್ದು ಮೊದಲು ಮರದ ಹಿಡಿಯಲೇ ಇರುತಿತ್ತು.
ಕಡೆಯುವುದೇ ಒಂದು ಉತ್ತಮ ವ್ಯಾಯಾಮವಾಗುತ್ತಿತ್ತು , ರೂಪ ಬೇಕು ಹಾಗೆ ಇದೀಗ ಗ್ರೈಂಡರ್ ಮಿಕ್ಸಿಗಳು ರುಬ್ಬಲು ಬಂದು ಯಾಂತ್ರಿ ಕರಣವಾಗುತ್ತಿದೆ, ಕಲ್ಲಿನ ಬೇಡಿಕೆಯು ಕಡಿಮೆ ಆಗುತ್ತಿದ್ದು, ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ ಹೆಣ್ಣಿಗೆ ಅಡುಗೆಮನೆಗೂ ಇರುವ ಅವಿನಾಭಾವ ಸಂಬಂಧದ ಕುರಿತು ಅಡುಗೆಮನೆ ಹೆಣ್ಣಿಗೆ ನಂಟೇ ಕಗ್ಗಂಟು ಇದೀಗ ಸಾಲು ಸಾಲು ಹಬ್ಬಗಳೇ ವಿವಿಧ ತಿಂಡಿ ತಿನಿಸುಗಳ ತಯಾರಿಕೆಗೆ ಇಲ್ಲಿ ಚಿಕ್ಕ ವೈವಿಧ್ಯಮಯ ಅತಿ ಚಿಕ್ಕದಿಂದ ಬೃಹತ್ ಗಾತ್ರದ ಕಡೆಯುವ ಕಲ್ಲುಗಳು ತಯಾರಾಗುತ್ತವೆ.
ಚಪ್ಪಾಳೆ ತಟ್ಟುವ ಕೈಗಳು ಎಷ್ಟು ಮುಖ್ಯವೋ ಹಾಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವರು ಬೇಕು ಯಾವುದೇ ಪ್ರಯೋಗಾಲಯ ಪ್ರತಿ ರುಚಿಯನ್ನು ಪರೀಕ್ಷಿಸಲು ಸಾಧ್ಯವಿಲ್ಲ ಆದರೆ ನಾಲಿಗೆ ಯಾವುದೇ ಪರಿಕಲ್ಪಗಳು ಇಲ್ಲದಿದ್ದರೂ ಸಾವಿರಾರು ರುಚಿಗಳನ್ನು ಗುರುತಿಸುತ್ತದೆ.
- ಕುಮಾರ್ ಪೆರ್ನಾಜೆ, ಪುತ್ತೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
