nammatumakuru

    Subscribe to Updates

    Get the latest creative news from FooBar about art, design and business.

    What's Hot

    ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ

    July 17, 2025

    ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ

    July 17, 2025

    ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

    July 17, 2025
    Facebook Twitter Instagram
    ಟ್ರೆಂಡಿಂಗ್
    • ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ
    • ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ
    • ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ
    • ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಮಾಲೋಚನೆ ನಡೆಸಿ : ಸಿಇಓ ಡಾ.ಗಿರೀಶ್ ಬದೋಲೆ
    • ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!
    • ಶಾಲಾ ಬಸ್ ಚಾಲಕ ಹೃದಯಾಘಾತದಿಂದ ಸಾವು
    • ಹೆಣ್ಣು ಮಗು ಎಂದು 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿದ ಪಾಪಿ
    • ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ ‘ಜಸ್ಟಿಸ್ ಫಾರ್ ಸೌಮ್ಯ’ ಚಿತ್ರ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಧುಗಿರಿ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಾಳಜಿ ಫೌಂಡೇಶನ್ ಒತ್ತಾಯ
    ಮಧುಗಿರಿ January 17, 2025

    ಮಧುಗಿರಿ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕಾಳಜಿ ಫೌಂಡೇಶನ್ ಒತ್ತಾಯ

    By adminJanuary 17, 2025No Comments3 Mins Read
    karadipura

    ಮಧುಗಿರಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪುರಸಭೆ  ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಕಾಳಜಿ ಫೌಂಡೇಶನ್ (ರಿ) ತುಮಕೂರು ತಂಡ ಮನವಿ ಮಾಡಿದೆ.

    ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ, ವಿಶೇಷವಾಗಿ 23ನೇ ವಾರ್ಡ್‌ನಲ್ಲಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನವರಿ 16ರಂದು ಸಂಜೆ ಎಸ್.ಎಂ. ಕೃಷ್ಣ ಬಡಾವಣೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆ ಮುಗಿಸಿ ಮನೆಗೆ ತೆರಳುವಾಗ, ಶಾಲೆಯಿಂದ ಸುಮಾರು 700 ಮೀಟರ್ ದೂರದಲ್ಲಿ ಎರಡು ನಾಯಿಗಳು ಆಕೆಯ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಕಾಳಜಿ ಪೌಂಡೇಶನ್ (ರಿ) ತುಮಕೂರು ಇದರ ಸಂಘಟನಾ ಕಾರ್ಯದರ್ಶಿ  ಮಧುಗಿರಿ ಮಹೇಶ್ ವಿದ್ಯಾರ್ಥಿನಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.


    Provided by
    Provided by

    ಈ ಕುರಿತು ತಕ್ಷಣ ಪುರಸಭೆ ಆರೋಗ್ಯ ನಿರೀಕ್ಷಕರಿಗೆ ಮಾಹಿತಿ ನೀಡಿದಾಗ, ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು, ನಾಯಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕೆಲವರು ನಾಯಿಯನ್ನು ಹಿಡಿಯದಂತೆ ಜಗಳ ಮಾಡಿದ್ದರಿಂದ  ಸಿಬ್ಬಂದಿ ಹಿಂಜರಿಯುವಂತಾಯಿತು. ಹೀಗಾಗಿ  ನಾಯಿಗಳನ್ನು ಸುರಕ್ಷಿತವಾಗಿ ಹಿಡಿಯಲು ಪುರಸಭಾ ಸಿಬ್ಬಂದಿಗೆ ಪೊಲೀಸ್ ರಕ್ಷಣೆ ಒದಗಿಸಿ, ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣ ಸೂಕ್ತ ಕ್ರಮ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

    ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚೆ:

    ಮಧುಗಿರಿ ಪಟ್ಟಣದ 23ನೇ ವಾರ್ಡ್‌ನಲ್ಲಿ ನಾಯಿಗಳ ಹಾವಳಿಯ ಕುರಿತು ಕಾಳಜಿ ತಂಡ ತುಮಕೂರು ಜಿಲ್ಲೆ ಎಂಬ ವಾಟ್ಸಾಪ್ ಗುಂಪಿನಲ್ಲಿ ಈ ಸಮಸ್ಯೆಯ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ದಾರೆ.  ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸಲು ಸಂಬಂಧಪಟ್ಟವರಿಗೆ  ದೂರು ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಅವರು ಮಧುಗಿರಿ ಪುರಸಭಾ ಕಾರ್ಯಾಲಯಕ್ಕೆ ನಾಯಿಗಳ ಹಾವಳಿಯ ನಿಯಂತ್ರಣಕ್ಕಾಗಿ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಇನ್ನಾದರೂ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.

     

    ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಗಮನ ಕೊಟ್ಟು ಬೀದಿನಾಯಿ ಕಾಟ ತಪ್ಪಿಸಿ, ಶಾಲಾ ಮಕ್ಕಳ ಮೇಲೆ ಇದೇ ಮೊದಲ ಬಾರಿಗೆ ಬೀದಿನಾಯಿಗಳು ದಾಳಿ ಮಾಡಿವೆ. ನಾವು ಬೈಕ್ ಗಳಲ್ಲಿ ಹೋಗುವಾಗಲೂ ನಾಯಿ ಓಡಿಸಿಕೊಂಡು ಬರುತ್ತವೆ.  ಕೆಲವೊಮ್ಮೆ ಗಾಡಿಯಿಂದ ಬೀಳುವ ಅವಕಾಶಗಳೂ ಇರುತ್ತವೆ.  ಬೀದಿ ನಾಯಿಯನ್ನು ಸಾಕುತ್ತಿರುವವರಿಗೆ ನಾಯಿಯನ್ನು ಕಟ್ಟಿಹಾಕಿ ಎಂದು ತಿಳಿಸಿದ್ದೇವೆ. ಪುರಸಭೆಯವರು, ಪಶುಸಂಗೋಪನಾ ಇಲಾಖೆಯವರು  ಈ ಬಗ್ಗೆ ಗಮನ ವಹಿಸಬೇಕು.

    —  ಶ್ರೀಧರ್, ಶಾಲೆಯ ಮುಖ್ಯ ಶಿಕ್ಷಕ


    ಬೀದಿನಾಯಿಗಳ ದಾಳಿಯಿಂದಾಗಿ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪಶುವೈದ್ಯ ಇಲಾಖಾ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಿ, ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳ ರಕ್ಷಣೆ ಮಾಡಬೇಕು. ಮಕ್ಕಳಿಗಾಗುವ ಅನಾಹುತಗಳನ್ನು ತಪ್ಪಿಸಬೇಕು.

    — ಹನುಮಂತರಾಯಪ್ಪ, ಬಿ.ಇ.ಒ.


    ಕರಡಿಪುರ ವ್ಯಾಪ್ತಿಯಲ್ಲಿ  ಶಾಲಾ ಮಗುವಿನ ಮೇಲೆ ನಾಯಿ ದಾಳಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಹಿಂದೆ ಸಹ ನಮ್ಮ ಸಿಬ್ಬಂದಿಗಳನ್ನು ಅಲ್ಲಿಗೆ ಕಳುಹಿಸಿ ಯಾವ ನಾಯಿಗಳು, ಯಾವ ಥರ ಇದ್ದಾವೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಪಶುವೈದ್ಯ ಇಲಾಖೆಯವರೊಂದಿಗೆ ಚರ್ಚೆ ಮಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ನಾಯಿಗಳಾಗಿದ್ದಾವೆ, ಈ ಬಗ್ಗೆ ಹಿಂದೆ ನಾವು ಟೆಂಡರ್ ಪ್ರಕ್ರಿಯೆ ಕರೆದಿದ್ವಿ, ಯಾರೂ ಪಾಲ್ಗೊಂಡಿಲ್ಲ, ಮತ್ತೆ ಟೆಂಡರ್ ಕರೆದು ಆದಷ್ಟು ಬೇಗ, ನಾಯಿಗಳಿಗೆ ಸಂತನಾಹರಣ ಶಸ್ತ್ರ ಚಿಕಿತ್ಸೆ ನಡೆಸಲು ಕ್ರಮವಹಿಸುತ್ತೇವೆ.

    —  ಸುರೇಶ್, ಪುರಸಭೆ ಮುಖ್ಯಾಧಿಕಾರಿ


     

    ಮಗುವಿನ ಮೇಲೆ ನಾಯಿ ದಾಳಿ ಮಾಡಿರುವುದು ಅತ್ಯಂತ ಭಯಭೀತವಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇಲ್ಲಿ ಮಕ್ಕಳಿಗೆ ಓಡಾಡಲು ಒಂದು ಸುರಕ್ಷಿತ ವಾತಾವರಣವನ್ನು ಸ್ಥಳೀಯ ಆಡಳಿತ ನಿರ್ಮಾಣ ಮಾಡಿಲ್ಲ.  ಅಲ್ಲಿ ಆಡಳಿತ ಅಧಿಕಾರಿ, ನಾವು ನಾಯಿ ಹಿಡಿಯಲು ಟೆಂಡರ್ ಕರೆದಿದ್ವಿ ಆದರೆ ಯಾರೂ ಬಂದಿಲ್ಲ, ಹಾಗಾಗಿ ಮತ್ತೆ ಕರಿತೀನಿ ಅಂತಾರೆ,  ಅಷ್ಟರಲ್ಲಿ ಎಷ್ಟು ಮಕ್ಕಳು ಆ ಬೀದಿ ನಾಯಿಗಳಿಗೆ ಬಲಿಯಾಗುತ್ತಾರೋ?  ಅದನ್ನು ಯೋಚನೆ ಮಾಡಬೇಕಿದೆ. ಬಿಇಒ ಹಾಗೂ ಮುಖ್ಯ ಶಿಕ್ಷಕರು ಅಸಹಾಯಕತೆಯಿಂದ ಕೈಚೆಲ್ಲಿದ್ದಾರೆ. ಹಾಗಾಗಿ ಪುರಸಭೆಯವರು ತಕ್ಷಣವೇ ಕ್ರಮಕೈಗೊಳ್ಳಬೇಕು. ಈಗಾಗಲೇ ನಾವು ಕಾಳಜಿ ತಂಡದಿಂದ ಮನವಿ  ಕೂಡ ನೀಡಿದ್ದೇವೆ.  ಬಡವರ ಮಕ್ಕಳನ್ನು ಬದುಕಲು ಬಿಡಿ, ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಿ,  ಸಾಕು ನಾಯಿಗಳಿದ್ದರೆ, ಮಾಲಿಕರಿಗೆ ಕಡ್ಡಾಯವಾಗಿ ನಿರ್ದೇಶನ ನೀಡಿ,  ಮಕ್ಕಳನ್ನು ನಾಯಿಗಳಿಂದ ರಕ್ಷಿಸಿ,  ಮುಂದಿನ ದಿನಗಳಲ್ಲಿ ನಾಯಿ ಯಾವುದೇ ಮಕ್ಕಳ ಮೇಲೆ ದಾಳಿ ಮಾಡಿದರೆ ಕಾಳಜಿ ತಂಡ ನಿಮ್ಮ ವಿರುದ್ಧವೇ ಪ್ರಕರಣ ದಾಖಲು ಮಾಡುತ್ತದೆ.

    —  ಶಿವಕುಮಾರ್ ಮೇಷ್ಟ್ರು ಮನೆ

    ಕಾನೂನು ಸಲಹೆಗಾರರು/ ನಿರ್ದೇಶಕರು, ಕಾಳಜಿ ಪೌಂಡೇಶನ್ (ರಿ) ತುಮಕೂರು

     

     


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಹಿಟ್ಲರ್ ರಾಜಕಾರಣ ಮಾಡಬೇಡಿ, ನಿಮ್ಮ ದರ್ಪಕ್ಕೆ, ಧಮ್ಕಿಗೆ ಯಾರು ಹೆದರುವುದಿಲ್ಲ: ಸಚಿವ ಕೆ.ಎನ್.ರಾಜಣ್ಣ ವಿರುದ್ಧ  ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

    June 19, 2025

    ಮಧುಗಿರಿ: ಪ್ರೋತ್ಸಾಹ ಧನ ಸೌಲಭ್ಯಕ್ಕಾಗಿ ಆನ್‌ ಲೈನ್ ಅರ್ಜಿ ಆಹ್ವಾನ

    June 7, 2025

    ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಡ್ಲಾಪುರ ಪಿಡಿಓ ಮತ್ತು ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

    May 14, 2025
    Our Picks

    ವೇಶ್ಯಾವಾಟಿಕೆ ಮಾಡಲು ಒಪ್ಪದ ಸಂಗಾತಿಯ ಬರ್ಬರ ಹತ್ಯೆ!

    July 17, 2025

    ಯೆಮೆನ್ ನಲ್ಲಿ ನರ್ಸ್ ನಿಮಿಷಾ ಪ್ರಿಯಾ ಮರಣ ದಂಡನೆ ಮುಂದೂಡಿಕೆ

    July 16, 2025

    ಕರ್ನಾಟಕದ ಬೆಳವಣಿಗೆಗೆ ಹೊಸ ರಸ್ತೆಗಳ ಅಭಿವೃದ್ಧಿ: ನಿತಿನ್ ಗಡ್ಕರಿ

    July 15, 2025

    ಅಪಘಾತದಲ್ಲಿ ಪತ್ನಿ ಮಗ ಸಾವಿನ ಖಿನ್ನತೆಯಲ್ಲಿರುವಾಗಲೇ  ಹಿರಿಯ ಮ್ಯಾರಥಾನ್‌ ಓಟಗಾರ ಅಪಘಾತಕ್ಕೆ ಬಲಿ

    July 15, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಚಿವ ರಾಜಣ್ಣ ಕುಟುಂಬ ಭೇಟಿ

    July 17, 2025

    ಸರಗೂರು:  ತಾಲೂಕಿನ ಚಿಕ್ಕ ದೇವಮ್ಮ ಬೆಟ್ಟಕ್ಕೆ ಸಹಕಾರ ಸಚಿವ ಎನ್.ಕೆ.ರಾಜಣ್ಣ ಕುಟುಂಬ ಸದಸ್ಯರಾದ ಮಗಳು ರಶ್ಮಿ ಮತ್ತು ಸೊಸೆ ಭಾವನಾ…

    ಸರಗೂರು:  ಕೋತಿಗಳ ಹಾವಳಿಯಿಂದ ಹೊರಗಡೆ ಬರಲು ಭಯವಾಗ್ತಿದೆ: ಸಾರ್ವಜನಿಕರಿಂದ ಆತಂಕ

    July 17, 2025

    ಶೇಂಬೆಳ್ಳಿ ಗ್ರಾ.ಪಂ. ಅವ್ಯವಹಾರ ಆರೋಪ: ತನಿಖೆಗೆ ಆಗ್ರಹ

    July 17, 2025

    ವಸತಿ ನಿಲಯಗಳ ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಸಮಾಲೋಚನೆ ನಡೆಸಿ : ಸಿಇಓ ಡಾ.ಗಿರೀಶ್ ಬದೋಲೆ

    July 17, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.