nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸೆರಗಿನ ವಿಷ್ಯ: ಪ್ರೇಮ್ ಹಾಡನ್ನು ಅನುವಾದ ಮಾಡಿದ ಬಾಲಿವುಡ್ ಗೀತರಚನೆಕಾರನಿಗೆ ಸಂಕಷ್ಟ!

    March 18, 2026

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಅಂಗನವಾಡಿ ತಾಯಂದಿರಿಗೆ ‘ಪೋಷಕತ್ವ ಯೋಜನೆ’ ಕುರಿತು ಜಾಗೃತಿ: ಮಳಚಪುರದಲ್ಲಿ ವಿಶೇಷ ಕಾರ್ಯಕ್ರಮ

    March 18, 2026
    Facebook Twitter Instagram
    ಟ್ರೆಂಡಿಂಗ್
    • ಸೆರಗಿನ ವಿಷ್ಯ: ಪ್ರೇಮ್ ಹಾಡನ್ನು ಅನುವಾದ ಮಾಡಿದ ಬಾಲಿವುಡ್ ಗೀತರಚನೆಕಾರನಿಗೆ ಸಂಕಷ್ಟ!
    • ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ
    • ಅಂಗನವಾಡಿ ತಾಯಂದಿರಿಗೆ ‘ಪೋಷಕತ್ವ ಯೋಜನೆ’ ಕುರಿತು ಜಾಗೃತಿ: ಮಳಚಪುರದಲ್ಲಿ ವಿಶೇಷ ಕಾರ್ಯಕ್ರಮ
    • ಹೊಕ್ರಾಣದಲ್ಲಿ ಕೋಮು ಸೌಹಾರ್ದ ಜಾಗೃತಿ ಕಾರ್ಯಕ್ರಮ
    • ಸರಗೂರು: ಕಾಡಾನೆಗಳ ಹಿಂಡಿನಿಂದ ದಾಳಿ: 1000 ಬಾಳೆ ಗಿಡಗಳು ನಾಶ
    • ಪ್ರಾಣಿ ಬಲಿ: ಪ್ರತಿ ಜಾತ್ರೆಯೂ ರಕ್ತ ಮುಕ್ತ ಸುಕ್ಷೇತ್ರವಾಗಬೇಕು: ದಯಾನಂದ ಸ್ವಾಮೀಜಿ
    • SSLC: ತುಮಕೂರು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳು: ಪರೀಕ್ಷೆ ಬರೆಯಲಿರುವ 37,130 ವಿದ್ಯಾರ್ಥಿಗಳು
    • ಶಿರಾ ಎಪಿಎಂಸಿ: ಹುಣಸೆಹಣ್ಣು ಬೆಲೆ ದಿಢೀರ್ ಕುಸಿತ; ರೈತರ ಆತಂಕ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿಸಿದ ಅಗ್ರಮಾನ್ಯ ಕವಿ ಕುವೆಂಪು | ವಿದ್ವಾಂಸ, ಕವಿ, ಮಹಾದೇವಯ್ಯ ಚಿಕ್ಕನಾರವಂಗಲ
    ತುಮಕೂರು August 12, 2024

    ಕನ್ನಡದ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿಸಿದ ಅಗ್ರಮಾನ್ಯ ಕವಿ ಕುವೆಂಪು | ವಿದ್ವಾಂಸ, ಕವಿ, ಮಹಾದೇವಯ್ಯ ಚಿಕ್ಕನಾರವಂಗಲ

    By adminAugust 12, 2024No Comments2 Mins Read
    thumakur

    ತುಮಕೂರು: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡಿರುವ “ಕನ್ನಡ ನಡೆ ಶಾಲಾ ಕಾಲೇಜು ಕಡೆ” ಸಾಹಿತ್ಯ ದೀವಿಗೆ ಸಾಪ್ತಾಹಿಕ ೫ನೇ ಕಾರ್ಯಕ್ರಮ ತುಮಕೂರು ಕಸಬಾ, ಸಿದ್ಧಾರ್ಥನಗರದ, ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು.

    ಈ ಕಾರ್ಯಕ್ರಮದಲ್ಲಿ ಕುವೆಂಪುರವರ ಬಗ್ಗೆ ಕವಿ, ವಿದ್ವಾಂಸರಾದ ಮಹದೇವಯ್ಯ ಚಿಕ್ಕನಾರವಂಗಲರವರು ಮಾತನಾಡುತ್ತಾ ಕುವೆಂಪುರವರು ಪ್ರೌಢಶಾಲೆಯವರೆಗೆ ವಿಜ್ಞಾನ ವಿಷಯವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೂ, ತಮ್ಮ ಗುರುಗಳ ಪ್ರೇರಣೆಯಿಂದ ಕನ್ನಡ ಎಂ.ಎ., ಓದಿ ಕನ್ನಡ ಕೀರ್ತಿ ಪತಾಕೆ ಮುಗಿಲೆತ್ತರಕ್ಕೆ ಏರಿಸಿದ ಅಗ್ರಮಾನ್ಯ ಕವಿಗಳು ಕುವೆಂಪುರವರು.


    Provided by
    Provided by

    ಚಿಕ್ಕಂದಿನಿಂದಲು ಕೆಲವು ನಿರ್ಧಿಷ್ಟ ತತ್ವಗಳನ್ನು ಪಾಲಿಸಿಕೊಂಡು ಬಂದವರು. ತಾತ್ವಿಕ ಧೋರಣೆಗಳಿಗೂ ಬದುಕಿನ ಇರುವ ವಿಭಿನ್ನತೆ ಕುವೆಂಪುರವರಲ್ಲಿದ್ದಂತಹ ವೈಶಿಷ್ಠ್ಯತೆ ಇವರ ಮಾತು ಕೃತಿ ಒಂದೇ ಆಗಿತ್ತು. ಜೀವನದ ಮೌಲ್ಯಗಳನ್ನು ತರದ ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ಕನ್ನವೆಂದರೆ ಕುವೆಂಪು, ಕುವೆಂಪು ಎಂದರೆ ಕನ್ನಡ ಎಂಬಂತೆ ಇವರ ವೃತ್ತಿ ಸೇವೆ, ಸಾಹಿತ್ಯ ಸೇವೆ, ಜನಸಾಮಾನ್ಯರ ಅಪಾರ ಪ್ರೀತಿ, ಪ್ರಕೃತಿ ಬಗ್ಗೆ ಇದ್ದ ಒಲವು ದೇವರು ಧರ್ಮ ಹೀಗೆ ಇವರ ಬಗ್ಗೆ ಅನೇಕ ವಿಚಾರಧಾರೆಯನ್ನು ಮಕ್ಕಳಿಗೆ ತಮ್ಮದೇ ಭಾವನಾತ್ಮಕ ಮಾತುಗಳಿಂದ ವರ್ಣಿಸಿದರು.

    ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್ ಆಶಯ ನುಡಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ಧೇಶಗಳನ್ನು ತಿಳಿಸುತ್ತಾ, ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಕಡಿಮೆಯಾಗಿ ಪರಭಾಷೆಗಳ ವ್ಯಾಮೋಹ ಜಾಸ್ತಿಯಾಗಿದೆ. ಆದ್ದರಿಂದ ನಮ್ಮ ಮಾತೃಭಾಷೆ, ಕರುಳಿನ ಭಾಷೆ, ಹೃದಯ ಭಾಷೆಯ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡವನ್ನು ಓದುವುದರಿಂದ ಬಳಸುವುದರಿಂದ ಭಾಷೆ ಉಳಿಯುತ್ತದೆ ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಪ್ರೊ. ಶಶಿಕುಮಾರ್ ಕನ್ನಡ ಗೀತೆಗಳನ್ನು ಹಾಡಿದರು. ಮಿಮಿಕ್ರಿ ಈಶ್ವರಯ್ಯ ಹಾಸ್ಯ ಮತ್ತು ಕೆಲವು ಪ್ರಾಣಿಗಳ ಮಿಮಿಕ್ರಿ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಶಿಕ್ಷಣಾಧಿಕಾರಿಗಳಾದ ತಿಪ್ಪೇಸ್ವಾಮಿ ಮಾತನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರಾದ ವೇದಮೂರ್ತಿ ವಹಿಸಿದ್ದರು. ಶಾಲಾ ಶಿಕ್ಷಕರುಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಈ ವರ್ಷ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ಮೂರು ಜನ ವಿದ್ಯಾರ್ಥಿಗಳನ್ನು ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

     

    admin
    • Website

    Related Posts

    SSLC: ತುಮಕೂರು ಜಿಲ್ಲೆಯಲ್ಲಿ 131 ಪರೀಕ್ಷಾ ಕೇಂದ್ರಗಳು: ಪರೀಕ್ಷೆ ಬರೆಯಲಿರುವ 37,130 ವಿದ್ಯಾರ್ಥಿಗಳು

    March 18, 2026

    ತುಮಕೂರು: ರಂಜಾನ್‌ ಸಂಭ್ರಮಕ್ಕೆ ಅಡ್ಡಿಯಾದ ಸಿಲಿಂಡರ್‌ ಕೊರತೆ; ದುಬಾರಿಯಾದ ಸಮೋಸ!

    March 17, 2026

    ಮಾ.25ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ಒಳಮೀಸಲಾತಿ ವರದಿ ವಿರೋಧಿಸಿ ಛಲವಾದಿ ಮಹಾಸಭಾ ಕರೆ

    March 16, 2026

    Comments are closed.

    Our Picks

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಕಾಂಗ್ರೆಸ್ ಯುದ್ಧದ ಭೀತಿ ಹುಟ್ಟಿಸುತ್ತಿದೆ: ಪ್ರಧಾನಿ ಮೋದಿ ವಾಗ್ದಾಳಿ

    March 14, 2026

    LPG ಸಿಲಿಂಡರ್‌ ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಸಾವು!

    March 14, 2026

    ಕರೆಯದೇ ಮದುವೆಗೆ ಬಂದ್ರೆ ಹುಷಾರ್: 3 ತಿಂಗಳು ಜೈಲು, 5 ಸಾವಿರ ದಂಡ: ಪೋಸ್ಟರ್ ಕಂಡು ಜನ ಶಾಕ್

    March 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಸೆರಗಿನ ವಿಷ್ಯ: ಪ್ರೇಮ್ ಹಾಡನ್ನು ಅನುವಾದ ಮಾಡಿದ ಬಾಲಿವುಡ್ ಗೀತರಚನೆಕಾರನಿಗೆ ಸಂಕಷ್ಟ!

    March 18, 2026

    ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ‘ಕೆಡಿ-ದಿ ಡೆವಿಲ್’ ಚಿತ್ರದ “ಸರ್ಸೆ ನಿನ್ನ ಸೆರಗ…

    ನಮ್ಮೊಂದಿಗೆ ಪ್ರೇಮ, ಆದ್ರೆ ಮದುವೆಯಾಗಿದ್ದು ಮೋದಿಯವರನ್ನು: ದೇವೇಗೌಡರ ಕಾಲೆಳೆದ ಮಲ್ಲಿಕಾರ್ಜುನ ಖರ್ಗೆ

    March 18, 2026

    ಅಂಗನವಾಡಿ ತಾಯಂದಿರಿಗೆ ‘ಪೋಷಕತ್ವ ಯೋಜನೆ’ ಕುರಿತು ಜಾಗೃತಿ: ಮಳಚಪುರದಲ್ಲಿ ವಿಶೇಷ ಕಾರ್ಯಕ್ರಮ

    March 18, 2026

    ಹೊಕ್ರಾಣದಲ್ಲಿ ಕೋಮು ಸೌಹಾರ್ದ ಜಾಗೃತಿ ಕಾರ್ಯಕ್ರಮ

    March 18, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.