ತುಮಕೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಾ ತ್ಮಕ ಕಾನೂನುಗಳನ್ನು ಭಾರತ ದೇಶದ ಪ್ರತಿಯೊಬ್ಬರೂ ಗೌರವಿಸಬೇಕು. ಕಾನೂನಿಗೆ ಗೌರವ ಕೊಡದವರು ದೇಶ ಬಿಟ್ಟು ಹೊರಗಡೆ ಹೋಗ ಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯ ಪಟ್ಟರು.
ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಡಿ ದೇಶಕ್ಕೆ ಅನ್ವಯ ವಾಗುವಂತೆ ಏಕರೂಪ ನಾಗರಿಕ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ಹಿಂದೂಗಳು, ಮುಸ ಲ್ಮಾನರು, ಕ್ರೈಸ್ತರು ಸೇರಿದಂತೆ ಎಲ್ಲ ಸಮುದಾಯದವರು ಸಹಕಾರ ನೀಡಬೇಕು ಎಂದು ವಿನಂತಿಸಿಕೊoಡರು.
ಶಿವಮೊಗ್ಗದಲ್ಲಿ ಭಜ ರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯಾಗಿದ್ದು, ಅಲ್ಲಿನ ಸ್ಥಿತಿಗತಿಯ ವೀಕ್ಷಣೆಗೆ ನಮ್ಮ ನಾಲ್ಕೈದು ಜನ ಸ್ನೇಹಿತರು ಭೇಟಿ ನೀಡಿ, ಪರಿಶೀಲಿಸಿ, ಮೃತನ ಕುಟುಂ ಬಕ್ಕೆ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇದು ಶ್ಲಾಘನೀಯ ಎಂದರು.
ನಮ್ಮ ಒಂದು ತಿಂಗಳ ಗೌರವಧನವನ್ನು ಮೃತನ ಕುಟುಂಬದ ಖಾತೆಗೆ ಜಮಾ ಮಾಡುತ್ತಿದ್ದು ನಮ್ಮ ಸ್ನೇಹಿ ತರು ನೆರವು ನೀಡಲು ಮುಂದಾಗಿದ್ದು, ಅದನ್ನು ಸಹ ಅವರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದರು.
ಹಿಂದೂ ರಾಷ್ಟçದಲ್ಲಿ ಹಿಂದೂಗಳ ಮೇಲೆ ಹಲ್ಲೆ, ಬೆದರಿಕೆಯಂತಹ ಕೃತ್ಯಗಳು ನಡೆಯುತ್ತಿದ್ದು, ಒಬ್ಬ ಮುಸಲ್ಮಾನ ವ್ಯಕ್ತಿ ೩-೪ ಮದುವೆಯಾಗಿ, 10-12 ಮಕ್ಕಳನ್ನು ಮಾಡಿಕೊಳ್ಳುವುದು ಸರಿಯಲ್ಲ. ಇದನ್ನು ನಿಯಂತ್ರಿ ಸಲು ಇಡಿ ದೇಶದಲ್ಲಿ ಏಕರೂಪ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾ ಗಿದ್ದು, ಇದಕ್ಕೆ ಎಲ್ಲ ಧರ್ಮದವರು ಸಹಕಾರ ನೀಡುವಂತೆ ಕೋರಿದರು.
ನಮ್ಮ ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಕಳೆದರೂ ಇನ್ನೂ ಸಹ ಏಕ ರೂಪ ನಾಗರಿಕ ಕಾನೂನು ಜಾರಿಯಾಗಿಲ್ಲ. ಇದನ್ನು ಮುಸ್ಲೀಮರು ಒಪ್ಪಿಕೊಳ್ಳಲು ತಯಾರಿಲ್ಲ ಎಂದ ಅವರು, ನಮ್ಮ ದೇಶದ ಕಾನೂನಿಗೆ ಗೌರವ ಕೊಡದವರು ಇಲ್ಲಿ ಇರಬಾರದು. ದೇಶಕ್ಕೆ ತೆರಳಿ ಎಂದು ಸವಾಲು ಹಾಕಿದರು.
ಹರ್ಷನ ಕೊಲೆಗೆ ಪ್ರತೀಕಾರ ತೀರಿಸಿಕೊಂಡಿದ್ದರೆ, ಇನ್ನಷ್ಟು ಕೊಲೆಗಳು ನಡೆಯುತ್ತಿದ್ದವೊ ಗೊತ್ತಿಲ್ಲ. ಪೊಲೀಸರು ಹೆಚ್ಚು ಸಕ್ರಿಯರಾಗಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಇವರ ವಿರುದ್ಧವೂ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದ್ರೋಹಿ ಘೋಷಣೆ ಕೂಗಿದವರಿಗೆ ಇವರಿಗೆ ಆರ್ಥಿಕ ನೆರವು ನೀಡಿದವರಿಗೆ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರು ವುದಾಗಿ ತಿಳಿಸಿದರು.
ಮುಖಂಡ ಜಯ ಸಿಂಹರಾವ್, ಭಜರಂಗ ದಳದ ಕಾರ್ಯಕರ್ತ ದಿಲೀಪ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವರದಿ: ಎ. ಎನ್. ಪೀರ್ , ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB