ಕೊರಟಗೆರೆ: ಪಟ್ಟಣದಲ್ಲಿನ ಕಸಾಯಿ ಖಾನೆಗಳ ಮೇಲೆ ಕೊರಟಗೆರೆ ಸಿಪಿಐ ಸಿದ್ದೇರಾಮೇಶ್ವರ ನೇತೃತ್ವದ ಪೊಲೀಸರ ತಂಡದಿಂದ ದಿಢೀರ್ ದಾಳಿ ನಡೆಸಿ 4 ಜನ ಆರೋಪಿಗಳ ಜೊತೆಯಲ್ಲಿ 6 ಪುಟ್ಟ ಪುಟ್ಟ ಕರುಗಳನ್ನು ರಕ್ಷಣೆ ಮಾಡಲಾಗಿದೆ.
ಕೊರಟಗೆರೆ ಪಟ್ಟಣದ 4 ಮತ್ತು 5ನೇ ವಾರ್ಡಿನಲ್ಲಿರುವ 4 ಕಸಾಯಿ ಖಾನೆ ಹಾಗೂ ಒಂದು ಮನೆ ಮೇಲೆ ಗೌಗ್ಯಾನ್ ಪೌಂಡೇಷನ್ ದೂರಿನ ಅನ್ವಯ ಕೊರಟಗೆರೆಯ ಪೊಲೀಸರ ತಂಡ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ.
ಸರ್ಕಾರ ಗೋ ಮಾಂಸವನ್ನು ಮಾರಾಟ ಮಾಡುವುದನ್ನು ನಿಷೇಧ ಮಾಡಿದ್ದರೂ ನಿಗೂಢವಾಗಿ ಎಗ್ಗಿಲ್ಲದೆ ಗೋ ಮಾಂಸ ಮಾರಾಟ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಗೌ ಗ್ಯಾನ್ ಪೌಂಡೇಷನ್ ಸ್ವಯಂ ಸೇವಕರ ತಂಡದ ದೂರಿನ ಮೇಲೆ ವಾಸದ ಮನೆ ಮತ್ತು ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ 4 ಟನ್ ಗೂ ಅಧಿಕ ದನದ ಮಾಂಸ ವಶಪಡಿಸಿಕೊಂಡ ಪೊಲೀಸರು, 4 ಮಂದಿಯನ್ನು ಬಂಧಿಸಿದ್ದಾರೆ. ಈ ವೇಳೇ 6 ಗೋವುಗಳನ್ನು ಹಾಗೂ ಚಿಕ್ಕ ಚಿಕ್ಕ ಕರುಗಳನ್ನು ರಕ್ಷಣೆ ಮಾಡಲಾಗಿದೆ. ಉಳಿದಂತೆ ಕರುಗಳ ಸಾಗಾಣಿಕೆಗೆ ಬಳಸುತ್ತಿದ್ದ ಟಾಟಾ ಎಸ್ ವಾಹನ ಮತ್ತು ಮಾಂಸವನ್ನು ಕಟ್ ಮಾಡಲು ಬಳಸುತ್ತಿದ್ದ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಕೊರಟಗೆರೆಯ ಪೊಲೀಸ್ ಠಾಣಾ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ಮಂಜುಳ ಸೇರಿದಂತೆ 20ಕ್ಕೂ ಅಧಿಕ ಪೊಲೀಸರ ತಂಡ ಈ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು.
ಇನ್ನೂ ಈ ಬಗ್ಗೆ ಗೋಗ್ಯಾನ್ ಫೌಂಡೇಶನ್ ಎನ್ ಜಿ ಒ ತಂಡದ ಮಂಜುನಾಥ್ ಮಾತನಾಡಿ, ನಮ್ಮ ಕೆಲಸವೇ ಗೋ ರಕ್ಷಣೆ ಮಾಡುವುದು ಅನೇಕ ಕಡೆ ನಮ್ಮ ಮೇಲೆ ದಾಳಿ ಮಾಡಲು ಕೂಡ ಯತ್ನಿಸಿದ್ದಾರೆ ತಲೆಕೆಡಿಸಿಕೊಳ್ಳದ ನಾವು ಈಗಾಗಲೇ ಅನೇಕ ಭಾಗಗಳಲ್ಲಿ ಗೋವುಗಳನ್ನು ರಕ್ಷಣೆ ಮಾಡಿದ್ದೇವೆ ಕೊರಟಗೆರೆಯ ಸ್ಥಳೀಯರ ಮಾಹಿತಿ ಮೇರೆಗೆ ನಾವು ಇಲ್ಲಿಗೆ ಬಂದು ನೋಡಿದಾಗ ದೊಡ್ಡ ಆಘಾತವೇ ಕಾದಿತ್ತು ತಕ್ಷಣ ಕೊರಟಗೆರೆ ಪೊಲೀಸ್ ಠಾಣೆ ಅಧಿಕಾರಿಗಳ ಸಹಕಾರದಿಂದ ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ ಎಂದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5